ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H D kumaraswamy) ವಿರುದ್ಧ ಉದ್ಯಮಿ ವಿಜಯ ಟಾಟಾ (Vijay tata) (Amruthahalli police station) . ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ 50 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಹಾಗೂ ರಮೇಶ್ ಗೌಡ (Ramesh gowda) ವಿರುದ್ದ ದೂರು ನೀಡಿದ್ದೇನೆ. ಈ ಹಿಂದೆ ಕುಮಾರಸ್ವಾಮಿ ನನಗೆ ಫೋನ್ ಮಾಡಿದ್ರು. ಚುನಾವಣೆಗೆ ಐವತ್ತು ಕೋಟಿ ಕೊಡಿ ಅಂದ್ರು, ಈ ವೇಳೆ ಆಗಲ್ಲ ಅಂತ ಹೇಳಿದ್ದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಣ ನೀಡಲು ಸಾಧ್ಯಲ್ಲ ಎಂದಿದ್ದಕ್ಕೆ ಕುಮಾರಸ್ವಾಮಿ ತಮ್ಮ ಮೇಲೆ ಕೋಪಗೊಂಡು, ನಿಮ್ಮ ಪ್ರಾಜೆಕ್ಟ್ ಹೇಗೆ ಕಂಪ್ಲೇಟ್ ಮಾಡ್ತೀರಾ ನೋಡೋಣ, ಅದನ್ನು ಸಂಪೂರ್ಣ ಮಾಡಲು ಬಿಡೊಲ್ಲ ಅಂತ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ.