ರೇಣುಕಾಸ್ವಾಮಿ ಕೊಲೆ ಕೇಸ್ ನ (Renuka swamy murder case) ಆರೋಪಿ ದರ್ಶನ್ (Actor darshan) ಪರ ಯಾರೇ ಸರ್ಕಾರವನ್ನ ಮನವೊಲಿಸುವ ಪ್ರಯತ್ನ ಮಾಡಿದ್ರೂ ಸಿಎಂ ಸಿದ್ದರಾಮಯ್ಯ (Cm siddaramiah) ಡೋಂಟ್ ಕೇರ್ ಅಂದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ (Dk shivakumar), ಗೃಹಸಚಿವ ಜಿ. ಪರಮೇಶ್ವರ್ (G Parameshwar) ಕೂಡ ದರ್ಶನ್ ಬೆನ್ನಿಗೆ ನಿಂತಿಲ್ಲ.
![](https://pratidhvani.com/wp-content/uploads/2024/06/IMG_8309.jpeg)
ಇನ್ನು ಸಿಎಂ ಸಿದ್ದರಾಮಯ್ಯ ಇಂತಹ ಕಠಿಣ ನಿಲುವು ತೆಗೆದುಕೊಳ್ಳಲು ರೇಣುಕಾಸ್ವಾಮಿ ಪ್ರಬಲ ವೀರಶೈವ-ಲಿಂಗಾಯತ (Veerashaiva lingayat) ಸಮುದಾಯಕ್ಕೆ ಸೇರಿದೋರು ಅನ್ನೋದೆ ಕಾರಣ ಎನ್ನಲಾಗ್ತಿದೆ. ಇತ್ತ ಹಿಂದಿನಿಂದಲೂ ವೀರಶೈವ- ಲಿಂಗಾಯತ ಸಮುದಾಯ ಬಿಜೆಪಿ (Bjp) ಜೊತೆಗೆ ಗುರುತಿಸಿಕೊಂಡಿದೆ.
![](https://pratidhvani.com/wp-content/uploads/2024/06/IMG_8311.jpeg)
ಇಂತಹ ಸಂದರ್ಭದಲ್ಲಿ ಸರ್ಕಾರ ಏನಾದ್ರೂ ದರ್ಶನ್ ಪ್ರಭಾವಕ್ಕೆ ಮಣಿದು, ಅವರ ಬೆನ್ನಿಗೆ ನಿಂತ್ರೆ ಇಡೀ ಸಮುದಾಯವನ್ನೇ ಎದುರು ಹಾಕಿಕೊಳ್ಳಬೇಕಾಗತ್ತೆ.ಹೀಗಾಗಿ ಕೊಲೆ ಪ್ರಕರಣದಲ್ಲಿ ಯಾರು ಎಷ್ಟೇ ಪ್ರಭಾವಿಗಳಾಗಿದ್ರೂ ಶಿಕ್ಷೆ ಕೊಡಲೇಬೇಕು ಅಂತ ಆಗ್ರಹಿಸಲಾಗ್ತಿದೆ