![](https://pratidhvani.com/wp-content/uploads/2024/04/vijaykarnataka-3-1024x768.jpg)
ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ವೀಣಾ ಕಾಶಪ್ಪನವರ್, ತನ್ನ ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಬೆಂಬಲಿಗರ ಸಭೆ ಬಳಿಕ ಮಾತನಾಡಿರುವ ವೀಣಾ ಕಾಶಪ್ಪನವರ್, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಅಂತ ಹೇಳಿದ್ದಾರೆ. ಇನ್ನೂ ಕೆಲವರು ಪಕ್ಷದಲ್ಲಿ ಸ್ಥಾನಮಾನ ನೀಡಲಿ ಎಂದು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದಾರೆ.. ಉಳಿದ ಕೆಲವರು ತಟಸ್ಥರಾಗಿ ಉಳಿಯಿರಿ ಎಂದು ಹೇಳುತ್ತಿದ್ದಾರೆ..
ಬಾಗಲಕೋಟೆ ಜಿಲ್ಲೆಯಲ್ಲಿ ಗೆಲ್ಲುವುದು ಯಾರು ಅನ್ನೋ ಬಗ್ಗೆ ಬೆಂಬಲಿಗರಿಗೆ ಸರ್ವೇ ಮಾಡಲು ಹೇಳಿದ್ದೇನೆ. ಸರ್ವೇ ಮಾಡಿ ವರದಿ ತೆಗೆದುಕೊಂಡು ಯುಗಾದಿ ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದಿದ್ದಾರೆ. ಶಿವಾನಂದ ಪಾಟೀಲ್ ಮತ್ತು ಸಂಯುಕ್ತಾ ಪಾಟೀಲ್ ನಮ್ಮ ಮನೆಗೆ ಬಂದರೆ ಇಬ್ಬರನ್ನೂ ಕೂರಿಸಿ ಮಾತಾಡುತ್ತೇನೆ. ನನಗೆ ಪಕ್ಷದಲ್ಲಿ ಆಗಿರುವ ಅನ್ಯಾಯದ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ. ಅಂದರೆ ಬಂಡಾಯದ ಬಾವುಟ ಹಾರುವುದು ಅನುಮಾನವಾಗಿದ್ದು, ಸಂಧಾನದ ಬಾಗಿಲು ತೆರೆದಿದ್ದಾರೆ ವೀಣಾ ಕಾಶಪ್ಪನವರ್, ಮುಂದಿನದ್ದು ಶಿವಾನಂದ ಪಾಟೀಲ್ ನಿರ್ಧಾರದ ಮೇಲೆ ನಿಂತಿದೆ.