
ವಾಲ್ಮೀಕಿ ನಿಗಮದಲ್ಲಿ ಹಗರಣ ಮಾಡಿದ ಹಣವನ್ನು ಬಳ್ಳಾರಿ ಮತ್ತು ರಾಯಚೂರು ಲೋಕಸಭೆ ಚುನಾವಣೆಗೆ ಬಳಕೆ ಮಾಡಿದ್ದಾರೆ ಅನ್ನೋ ಆರೋಪಕ್ಕೆ ರಾಯಚೂರು ಕಾಂಗ್ರೆಸ್ ಸಂಸದ ಹಾಗು ಮಾಜಿ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ತಿರುಗೇಟು ನೀಡಿದ್ದಾರೆ..
ಯಾವುದೇ ಸಾಕ್ಷ್ಯಾಧಾರ ಇಲ್ಲದೆ ನಿರಾಧಾರವಾಗಿ ಯಾವುದೇ ಆರೋಪ ಮಾಡಿದರೂ ಅದಕ್ಕೆ ಅರ್ಥವೇ ಇರುವುದಿಲ್ಲ.. ಈಗಾಗಲೇ ಕೇಂದ್ರ ಏಜೆನ್ಸಿಗಳು ತನಿಖೆ ಮಾಡ್ತಿದ್ದಾರೆ. ಅವರು ಪರಿಶೀಲನೆ ಮಾಡ್ಲಿ, ಸುಖಾ ಸುಮ್ಮನೇ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಂಸದನ ವಿರುದ್ಧ ಆರೋಪ ಮಾಡ್ತಿರೋದು ಅತ್ಯಂತ ಶೋಚನೀಯ ಹಾಗೂ ಅಮಾನವೀಯ ಎಂದಿದ್ದಾರೆ.

ಇನ್ನು ಮುಡಾ ಹಗರಣ ಸಂಬಂಧ ವಿಚಾರಣೆ ವಿಚಾರದ ಬಗ್ಗೆಯೂ ರಾಯಚೂರು ಸಂಸದ ಜಿ.ಕುಮಾರ್ ನಾಯಕ್ ಮಾತನಾಡಿ, ಈ ಹಿಂದೆ 2002 ರಿಂದ 2005ರ ವರೆಗೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದೆ, ಹೀಗಾಗಿ ಲೋಕಾಯುಕ್ತರು ವಿಚಾರಣೆಗೆ ಕರೆದಿದ್ರು.. ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರಶ್ನೆಗಳನ್ನ ಕೇಳಿದ್ರು ಎಂದಿದ್ದಾರೆ..
2005ರ ಕೊನೆಯಲ್ಲಿ ಕನ್ವರ್ಷನ್ ಮಾಡೋ ವೇಳೆ, ಆಗಿನ ಜಿಲ್ಲಾಧಿಕಾರಿಗಳು ತಪ್ಪು ಮಾಡಿದ್ದಾರೆ ಅಂತ ಬಿಂಬಿಸಿದ್ದಾರೆ.. ಆ ರೀತಿ ಕಂಪ್ಲೆಂಟ್ ಕೊಟ್ಟಿದಾರೆ. ದೂರು ಕೊಟ್ಟವರಿಗೆ ಕಾನೂನಿನ ಎಲ್ಲಾ ಆಯಾಮಗಳ ಪರಿಚಯ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ. ವಿವರವಾಗಿ ವಿಚಾರಣೆ ವೇಳೆ ಹೇಳಿದಿನಿ, ನಾನು ತಪ್ಪು ಮಾಡಿಲ್ಲ ಎಂದಿದ್ದಾರೆ.

ಇನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಭೂ ಪರಿವರ್ತನೆ ವೇಳೆ ಕಾನೂನು ಪಾಲನೆ ಮಾಡಿಕೊಂಡೇ ಎಲ್ಲವನ್ನೂ ಮಾಡಿದ್ದೇನೆ. 1997-98ರಲ್ಲಿ ಲ್ಯಾಂಡ್ ಏನಿದೆ, ಅದು ನೋಟಿಫಿಕೇಶನ್ ಆಗಿರುತ್ತೆ. ಬಳಿಕ ಅದರಲ್ಲಿ ಪ್ರಾಥಮಿಕ ಡಿನೋಟಿಫಿಕೇಶನ್ ಆಗಿ ಅದರ ಬಗ್ಗೆ ತನಿಖೆ ಆಗತ್ತೆ. ತನಿಖೆ ಬಳಿಕ ಫೈನಲ್ ನೋಟಿಫೀಕೇಶನ್ ಆಗುತ್ತೆ. ನಂತರ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡುವಂತದ್ದು. ಇದಾದ ಬಳಿಕ 45 ದಿನಗಳ ಒಳಗಾಗಿ ಅವರು ಸರ್ಕಾರಕ್ಕೆ ಮನವಿ ಕೊಟ್ಟು, ತಮ್ಮ ಭೂಮಿಯನ್ನ ಡಿನೋಟಿಫಿಕೇಶನ್ ಮಾಡಿಸಿಕೊಳ್ತಾರೆ ಎಂದಿದ್ದಾರೆ.