ಮಳೆಗಾಲದಲ್ಲಿ ಸ್ವಲ್ಪ ನೆನೆದರೂ ಶೀತ ,ನೆಗಡಿ, ಕೆಮ್ಮು ,ಜ್ವರ ,ಗಂಟಲು ನೋವು ,ಗಂಟಲು ಕೆರೆತ, ತಲೆನೋವು ಶುರುವಾಗುವುದು ಕಾಮನ್. ಆದ್ರೆ ಹೆಚ್ಚಾಗಿ ಜನ , ಶೀತ ಅಥವ ನೆಗಡಿ ಆದಾಗ ವೈದ್ಯರ ಮೊರೆ ಹೋಗುವುದು ಕಡಿಮೆ. ಇಂಥ ಸಂದರ್ಭದಲ್ಲಿ ಮನೆಯಲ್ಲಿಯೇ ಟ್ಯಾಬ್ಲೆಟ್ ಗಳನ್ನ ತೆಗೆದುಕೊಳ್ಳುತ್ತಾರೆ.. ವೈದ್ಯರ ಸಲಹೆ ಇಲ್ಲದೆ ಮಾತುಗಳನ್ನ ತೆಗೆದುಕೊಳ್ಳುವುದು ಸರಿಯಲ್ಲ , ಅದರ ಬದಲಿಗೆ ಮನೆಯಲ್ಲಿಯೇ ಈ ಮದ್ದುಗಳನ್ನ ಮಾಡಿಕೊಳ್ಳುವುದು ಉತ್ತಮ.
![](https://pratidhvani.com/wp-content/uploads/2024/06/IMG_8537.jpeg)
ಶುಂಠಿ ಕಷಾಯ
ಬಹಳ ಹಿಂದಿನಿಂದಲೂ ಶೀತ ಅಥವಾ ನೆಗಡಿ ಜ್ವರ ಶುರುವಾದಾಗ ಶುಂಠಿ ಕುಡಿಯುತ್ತಾರೆ. ಒಂದು ಲೋಟದಷ್ಟು ನೀರನ್ನ ಕುದಿಯಲು ಇಡಿ ನಂತರ ಅದಕ್ಕೆ ಹಸಿ ಶುಂಠಿಯನ್ನು ಜಜ್ಜಿ ಹಾಕಿ ಬಳಿಕ ಚಿಟಿಕೆಯಷ್ಟು ಬೆಲ್ಲವನ್ನ ಬೆರೆಸಿ ಚೆನ್ನಾಗಿ ಕುದಿಸಿ. ಬಳಿಕ ಸೋಸಿ ಕೊಂಡು ಬಿಸಿಬಿಸಿಯಾಗಿ ಕುಡಿಯುವುದರಿಂದ ಗಂಟಲು ಕಿರಿಕಿರಿ ಶೀತ ನೆಗಡಿ ತಕ್ಷಣಕ್ಕೆ ಕಡಿಮೆಯಾಗುತ್ತದೆ. ಹಾಗೂ ಮಕ್ಕಳಿಗೆ ಕೊಡಿಸುವಾಗ ಜೇನುತುಪ್ಪವನ್ನು ಸೇರಿಸಿ ಕುಡಿಸಿದರೆ ರುಚಿಯಲ್ಲಿ ಉತ್ತಮವಾಗಿರುತ್ತದೆ.
![](https://pratidhvani.com/wp-content/uploads/2024/06/IMG_8542.jpeg)
ಹಾಲು ಮತ್ತು ಅರಿಶಿನ
ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿ ಅದಕ್ಕೆ ಚಿಟಿಕೆಯಷ್ಟು ಅರಿಶಿಣವನ್ನ ಬೆರೆಸಿ ಚೆನ್ನಾಗಿ ಕುದಿಸಿ ,ಕೊನೆಯಲ್ಲಿ ಸಕ್ಕರೆ ಅಥವಾ ಬೆಲ್ಲವನ್ನ ಸೇರಿಸಿ ಬಿಸಿಬಿಸಿಯಾಗಿ ಕುಡಿಯುವುದರಿಂದ ಗಂಟಲು ನೋವು ,ಅಥವಾ ಶೀತ ತಕ್ಷಣಕ್ಕೆ ಕಡಿಮೆಯಾಗುತ್ತದೆ. ಅರಿಶಿಣದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಇರುವುದರಿಂದ ಮಳೆಯಿಂದ ಆಗುವ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ತುಂಬಾನೇ ಒಳ್ಳೆಯದು.
![](https://pratidhvani.com/wp-content/uploads/2024/06/IMG_8541.jpeg)
ಕರಿಮೆಣಸು
ಮೂರರಿಂದ ನಾಲ್ಕು ಕರಿಮೆಣಸಿನೊಂದಿಗೆ. ಬಿಡಿಸಿದ ಎರಡು ಎಸಳು ಬೆಳ್ಳುಳ್ಳಿಯನ್ನು ಬೆರೆಸಿ, ಅದಕ್ಕೆ ಕಲ್ಲುಪ್ಪನ್ನ ಸೇರಿಸಿ ಚೆನ್ನಾಗಿ ಜಜ್ಜಿ ನಂತರ ಅದನ್ನು ಸೇವಿಸುವುದರಿಂದ ಗಂಟಲು ಕಿರಿಕಿರಿ ಹಾಗೂ ಶೀತ ತಕ್ಷಣಕ್ಕೆ ಕಡಿಮೆಯಾಗುತ್ತದೆ. ಇನ್ನು ಮಕ್ಕಳಿಗೆ ಕೊಡುವಾಗ ಸ್ವಲ್ಪ ಜೇನುತುಪ್ಪವನ್ನ ಬೆರೆಸಿ ಕೊಟ್ಟರೆ ಉತ್ತಮ. ಇದನ್ನ ಸೇವಿಸುವುದರಿಂದ ಮುಖ್ಯವಾಗಿ ಕೆಮ್ಮು ಅಥವಾ ಒಣ ಕೆಮ್ಮು ನಿವಾರಣೆಯಾಗುತ್ತದೆ..
![](https://pratidhvani.com/wp-content/uploads/2024/06/IMG_8543.jpeg)