ಮೂಡ ಹಗರಣದಲ್ಲಿ (MUDA scam) ಸಿಎಂ ಸಿದ್ದರಾಮಯ್ಯ (Cm siddaramiah) ವಿರುದ್ಧದ ಪ್ರಾಸಿಕ್ಯೂಷನ್ (Prosecution) ಅನುಮತಿ ವಿಚಾರ ಕೋರ್ಟ್ನಲ್ಲಿರುವಾಗ್ಲೆ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸತೀಶ್ ಜಾರಕಿಹೋಳಿ (satish jarakiholi) ಮುಂದಿನ ಸಿಎಂ ಅಭಿಯಾನ ಶುರುವಾಗಿದೆ.
ಇತ್ತೀಚೆಗೆ ಸತೀಶ್ ಜಾರಕಿಹೋಳಿಯಿಂದ ರಾಹುಲ್ ಗಾಂಧಿ (rahul gandhi) ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ, ಸತೀಶ್ ಜಾರಕಿಹೋಳಿ ಮುಂದಿನ ಸಿಎಂ ಅನ್ನೋ ಅಭಿಯಾನ ಶುರುವಾಗಿದೆ. ಒಂದ್ವೇಳೆ ಸಿಎಂ ಹುದ್ದೆ ಖಾಲಿಯಾದ್ರೆ ಸತೀಶ್ ಜಾರಕಿಹೋಳಿ ಸಿಎಂ ಆಗಲಿ ಎಂದು ರಜನೀಶ್ ಆಚಾರ್ಯ ಫೌಂಡೇಶನ್ (Rajaneesh acharya foundation) ದಿನಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿದ್ದಾರೆ.
ಇನ್ನು ಈ ಜಾಹೀರಾತಿನಲ್ಲಿ ಬೆಳಗಾವಿ ಜಿಲ್ಲೆಗೆ ಮೊದಲ ಸಿಎಂ ಸ್ಥಾನ ಸತೀಶ್ ಜಾರಕಿಹೋಳಿಗೆ ಸಿಗಲಿ ಎಂದು ಶುಭ ಹಾರೈಸಿದ್ದು, ಜಾಹಿರಾತಿನಲ್ಲಿ ನರೇಂದ್ರ ಮೋದಿ (narendra modi), ರಮೇಶ್ ಜಾರಕಿಹೋಳಿ (Ramesh jarakiholi) ಪೋಟೋ ಜೊತೆ ಸತೀಶ ಜಾರಕಿಹೋಳಿ ಪೋಟೋ ಪ್ರಕಟವಾಗಿದೆ.