ಕಾಂಗ್ರೆಸ್ ವಿರುದ್ದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿ ಹಾಗU ಮಾಜಿ ಪ್ರಧಾನಿ ಜವಹರಲಾಲ್ ನೆಹರೂರನ್ನು ಹೋಲಿಸಿ ಮಾತನಾಡಿದ್ದಾರೆ.
ದೇಶದ ಪರಂಪರೆ ಬಗ್ಗೆ ಹೆಮ್ಮೆ ಹೊಂದಿರದವರು ಒಬ್ಬರಾದರೆ ದೇಶದ ಪರಂಪರೆ ಬಗ್ಗೆ ಹೆಮ್ಮೆಯ ಭಾವವನ್ನು ಹೊಂದಿರುವಷ್ಟೇ ಅಲ್ಲದೆ ಭಾರತವನ್ನು ಏಕ ಭಾರತ ಶ್ರೇಷ್ಠ ಭಾರತವನ್ನಾಗಿಸಲು ಪಣತೊಟ್ಟಿರುವ ಪ್ರಧಾನಿ ನಮ್ಮಗೆ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.
ಮೋದಿ@20 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಕಾಶ್ಮೀರದಲ್ಲಿ ಉಗ್ರರ ಬೇರನ್ನು ಸಂಪೂರ್ಣವಾಗಿ ತೆಗೆದುಹಾಕಲು ಹಿಂದೇಟು ಹಾಕದೆ ಭಯೋತ್ಪಾದಕರನ್ನು ಹೇಗೆ ನಿಭಾಯಿಸಬೇಕು ಎಂಬುದನ್ನ ಪ್ರಧಾನಿ ಮೋದಿ ವಿಶ್ವಕಕೆ ತೋರಿಸಿಕೊಟ್ಟಿದ್ದಾರೆ ಇದು ಪ್ರಧಾನಿ ಮೋದಿ ಅವರ ಸಾಮರ್ಥ್ಯ ಎಂದಿದ್ದಾರೆ.
ಗುಜರಾತ್ನ ಸೋಮನಾಥ ದೇವಾಲಯ ಮರುಸ್ಥಾಪನೆಗೆ ಅಂದಿನ ದಿನ ರಾಷ್ಟ್ರಪತಿಯನ್ನು ಕಳುಹಿಸಲು ಹಿಂದೇಟು ಹಾಕಿದ ಪ್ರಧಾನಿಯನ್ನು ಕಂಡಿದ್ದೇವೆ. ಆದರೆ, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವನ್ನ ಸ್ವತಃ ಕೈಗೊಂಡ ಪ್ರಧಾನಿ ನಮ್ಮ ಜೊತೆಗಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಪ್ರಧಾನಿ ಮೋದಿಗೆ ನಮ್ಮ ದೇಶದ ಪರಂಪರೆ ಬಗ್ಗೆ ಹೆಮೆಯಿದೆ ಹೊರತು ನೆಹರೂಗೆ ಇರಲಿಲ್ಲ ಎಂದು ಇಬ್ಬರು ನಾಯಕರನ್ನ ಹೋಲಿಸಿ ಮಾತನಾಡಿದ್ದಾರೆ.