• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, February 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BJP ಪಕ್ಷದಲ್ಲಿ ನಿಲ್ಲದ ಬಂಡಾಯ.. ಹೈಕಮಾಂಡ್‌‌ ಪ್ರಾಯೋಜಿತವೇ..?

ಕೃಷ್ಣ ಮಣಿ by ಕೃಷ್ಣ ಮಣಿ
January 5, 2025
in Top Story, ಕರ್ನಾಟಕ, ರಾಜಕೀಯ
0
BJP ಪಕ್ಷದಲ್ಲಿ ನಿಲ್ಲದ ಬಂಡಾಯ.. ಹೈಕಮಾಂಡ್‌‌ ಪ್ರಾಯೋಜಿತವೇ..?
Share on WhatsAppShare on FacebookShare on Telegram

ರಾಜ್ಯ ಬಿಜೆಪಿ ನಾಯಕರ ವಕ್ಫ್‌‌ ವಿರುದ್ದದ ಹೋರಾಟ ಶನಿವಾರದಿಂದ ಮತ್ತೆ ಆರಂಭ ಆಗಿದೆ. ಎ ಟೀಮ್ ಒಂದು ಪ್ರಿಯಾಂಕ್‌ ಖರ್ಗೆ ವಿರುದ್ಧ ಹೋರಾಟ ಮಾಡ್ತಿದ್ರೆ, ಬಿ ಟೀಮ್ ವಕ್ಫ್‌ ವಿರುದ್ಧ ಹೋರಾಟ ಮಾಡುತ್ತಿದೆ ಎನ್ನುವುದು ರಾಜ್ಯದ ಜನರ ಕಣ್ಣಿಗೆ ನೇರವಾಗಿ ಕಾಣುವಂತಾಗಿದೆ. ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶದ ಬಳಿಕವೂ ಬಿಜೆಪಿ ಒಳಗಿನ ಬಣ ರಾಜಕೀಯ ನಿಲ್ಲುವ ಯಾವುದೇ ಲಕ್ಷಣ ಕಾಣಿಸ್ತಿಲ್ಲ..

ADVERTISEMENT

ವಕ್ಫ್‌ ಆಸ್ತಿ ಎಂದು ನಮೂದು ಆಗುವುದು ಶುರುವಾದಾಗ ವಿಜಯಪುರದಲ್ಲಿ ಅಹೋರಾತ್ರಿ ಹೋರಾಟ ಮಾಡಿ ಯತ್ನಾಳ್‌, ಆ ಬಳಿಕ ಮೊದಲ ಹಂತದಲ್ಲಿ ಬೀದರ್‌, ಕಲಬುರಗಿಯಲ್ಲಿ ವಕ್ಫ್‌‌ ಪ್ರವಾಸ ಮಾಡಿ ರೈತರನ್ನ ಭೇಟಿಯಾಗಿದ್ದ ಯತ್ನಾಳ್‌ ಅಂಡ್‌ ಟೀಂ, ಇಂದಿನಿಂದ 2ನೇ ಹಂತದ ಹೋರಾಟ ಆರಂಭಿಸಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಯತ್ನಾಳ್‌ ಟೀಂ ವಕ್ಪ್‌‌ ಆಸ್ತಿ ಸಂಕಷ್ಟ ಆಲಿಸುತ್ತಿದೆ.

Anit Shah VS Ambedkar: ಸಂವಿಧಾನ ಬಂದ 3 ದಿನಕ್ಕೆ ಸಾರ್ವಕರ್‌,RSS ವಿರೋಧ ಮಾಡಿದ್ದು ಯಾಕೆ..#savarkar #rss

ಕಂಪ್ಲಿ ಪಟ್ಟಣದ ಉದ್ಬವ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶಾರದಾ ಶಾಲಾ ಆವರಣದವರೆಗೆ ವಕ್ಫ್ ಜನಜಾಗೃತಿ ಮೆರವಣಿಗೆ ನಡೆಸಲಾಯ್ತು. ಬಸನಗೌಡ ಪಾಟೀಲ್ ಯತ್ನಾಳ್, ಜಿಎಂ ಸಿದ್ದೇಶ್ವರ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ ಸೇರಿ ಹಲವು ಮಠಾಧೀಶರು ಭಾಗವಹಿಸಿದ್ರು. ಕಂಪ್ಲಿ ಭಾಗದ ಬಿಜೆಪಿ ಜನಪ್ರತಿನಿಧಿಗಳು ಮಾತ್ರ ಗೈರಾಗಿದ್ರು..

ವಕ್ಫ್ ಆಸ್ತಿ ವಿವಾದದ ಬಗ್ಗೆ ಸದನದಲ್ಲಿ ಸರ್ಕಾರ ನೀಡಿದ ಉತ್ತರ ಸಮರ್ಪಕವಾಗಿ ಇರಲಿಲ್ಲ. ರೈತರ ಪಹಣಿಗಳಲ್ಲಿ ಇನ್ನೂ ವಕ್ಫ್ ಅಂತಾನೇ ಇದೆ. ಜನರ ಸಮಸ್ಯೆ ಬಗೆಹರಿಯುವವರೆಗೂ ನಮ್ಮ ಹೋರಾಟ ನಿರಂತರ ಅಂತ ಸರ್ಕಾರ ಹಾಗೂ ಸಚಿವ ಜಮೀರ್ ವಿರುದ್ದ ಯತ್ನಾಳ್‌ ಕಿಡಿಕಾರಿದ್ದಾರೆ. ಇನ್ನು ವಕ್ಫ್ ಮಂಡಳಿ‌ ದೇಶಕ್ಕೆ ಅಂಟಿಕೊಂಡಿರೋ ಕ್ಯಾನ್ಸರ್. ಮೊದಲ‌ ಹಂತದ ಯಶಸ್ಸಿ ಹೋರಾಟದ ಬಳಿಕ ಕಂಪ್ಲಿಯಲ್ಲಿ ಎರಡನೇ ಹಂತದ ಹೋರಾಟ ಮಾಡ್ತಿದ್ದೇವೆ. ವಕ್ಫ್‌ ದೇಶಕ್ಕೆ ಮುಂದೊಂದು ದಿನ ಶಾಪವಾಗ್ತದೆ ಎಂದು ಹೇಳಿದ್ದೇನೆ. ಇಂಡಿಯನ್ ಅರ್ಮಿ ಆಸ್ತಿ, ರೈಲ್ವೇ ಆಸ್ತಿ, ವಕ್ಪ್ ಅಸ್ತಿ ದೇಶದ ಮೂರು ದೊಡ್ಡ ಆಸ್ತಿ. ನೆಹರು ಮಾಡಿದ ದೊಡ್ಡ ದ್ರೋಹ. ಅಂಬೇಡ್ಕರ್ ಸಂವಿಧಾನದಲ್ಲಿ ಜಾತ್ಯಾತೀತ ಪದ ಬಳಸಿರಲಿಲ್ಲ. ಭಾರತ ಜಾತಿ ಆಧಾರದಲ್ಲಿ ಒಡೆಯಲಾಯ್ತು. ನೆಹರು ಪ್ರಧಾನಿ ಮಾಡಲು ಗಾಂಧಿ ಪ್ಲಾನ್ ಮಾಡಿದ್ರು. ಗಾಂಧಿಯವರಿಗೆ ಮಕ್ಕಳಿರಲಿಲ್ಲ, ಜಿನ್ನಗಾಗಿ ಪಾಕಿಸ್ತಾನ ಹಾಗು ಭಾರತದಲ್ಲಿ ನೆಹರು ಅವರನ್ನು ಪ್ರದಾನಿ ಮಾಡಿದ್ರು

Ambedkar Hindu: ಇದೇ ಕಾರಣಕ್ಕೆ ಅಂಬೇಡ್ಕರ್​ ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ ಸ್ವೀಕರಿಸಿದ್ದು.! #pejawarswamiji

ಆದರೆ ಬಿಜೆಪಿ ಹೈಕಮಾಂಡ್‌ ಯತ್ನಾಳ್‌ ಅವರನ್ನು ಕರೆದು ಮಾತನಾಡಿತ್ತು. ಆ ಬಳಿಕ ವಿಜಯೇಂದ್ರ ಕೂಡ ದೆಹಲಿಗೆ ಭೇಟಿ ನೀಡಿ ನಾಯಕರನ್ನು ಭೇಟಿ ಮಾಡಿದ್ರು. ಆದರೆ ಯಾವುದೂ ವರ್ಕ್‌ ಆಗಿರುವಂತೆ ಕಾಣ್ತಿಲ್ಲ. ಮತ್ತೆ ಯತ್ನಾಳ್‌ 2ನೇ ಹಂತದ ಹೋರಾಟ ಶುರು ಮಾಡಿದ್ದಾರೆ. ಅದೇ ಬಂಡಾಯ ಮುಂದುವರಿದಿದೆ. ಯತ್ನಾಳ್‌ ಮೂಲಕ ಬಂಡಾಯ ಮಾಡಿಸುತ್ತಿರುವುದೇ ಬಿಜೆಪಿ ಹೈಕಮಾಂಡ್‌ ನಾಯಕರು ಎನಿಸುತ್ತದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್‌ ನಾಯಕರು ಈ ಬಂಡಾಯದ ಹಿಂದೆ ಇಲ್ಲ ಎನ್ನುವುದಾದರೆ, ಯತ್ನಾಳ್‌ ಹಾಗು ವಿಜಯೇಂದ್ರ ಜೊತೆಗೆ ಮಾತನಾಡಿದ ಬಳಿಕ ಬಂಡಾಯ ತಣಿಯುವ ಕೆಲಸ ಆಗಬೇಕಿತ್ತು. ಅದು ಆಗಿಲ್ಲ ಎಂದಾಗ ಯತ್ನಾಳ್‌ ಬೆನ್ನಿಗೆ ನಿಂತು ಯಾರೋ ಆಟವಾಡಿಸುತ್ತಿದ್ದಾರೆ ಎನಿಸುವಂತಾಗಿದೆ.

Tags: basanagouda patil yatnal on by vijayendraBasangouda Patil Yatnalbasangouda yatnal vs vijayendrabs yediyurappa on yatnalBY Vijayendraby vijayendra teamby vijayendra vs yatnalvijayendravijayendra newsvijayendra vs yatnalYatnalyatnal on by vijayendrayatnal slams vijayendrayatnal slams yediyurappa vijayendrayatnal statement against vijayendrayatnal today newsyatnal vijayendrayatnal vs by vijayendrayatnal vs vijayendra
Previous Post

ಭ್ರಷ್ಟಾಚಾರ ಬಯಲಿಗೆಳೆದ ಛತ್ತೀಸ್‌ಗಡದ ಪತ್ರಕರ್ತನ ಶವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆ

Next Post

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡ ಶಾಸಕ ಜಿ.ಟಿ ದೇವೇಗೌಡ

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

February 8, 2026
Next Post
ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡ ಶಾಸಕ ಜಿ.ಟಿ ದೇವೇಗೌಡ

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡ ಶಾಸಕ ಜಿ.ಟಿ ದೇವೇಗೌಡ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada