ಅನಿತಾ ರಾಧಾಕೃಷ್ಣನ್ ಅವರು ವಿಜಯ ನೇತೃತ್ವದ Tamilaga Vettri Kazhagam ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಟಿವಿಕೆ ಸರ್ಕಾರ ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತೆ ಅಧಿಕಾರಕ್ಕೆ ಮರಳಲಿದ್ದಾರೆ” ಎಂದು ಭವಿಷ್ಯ ನುಡಿದರು.

ಇದೇ ವೇಳೆ ಟಿವಿಕೆ ಪಕ್ಷದ ಹಿರಿಯ ನಾಯಕ ಹಾಗೂ ವಿಲ್ಲಿವಾಕ್ಕಂ ಶಾಸಕ ಆಧವ್ ಅರ್ಜುನ್ ಅವರಿಗೆ ಬಹಿರಂಗ ಸವಾಲು ಹಾಕಿದ ರಾಧಾಕೃಷ್ಣನ್, “ಧೈರ್ಯವಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ.ನಾನು ಕೂಡ ರಾಜೀನಾಮೆ ನೀಡುತ್ತೇನೆ. ತಿರುಚೆಂದೂರ್ನಲ್ಲಿ ಮುಖಾಮುಖಿ ಸ್ಪರ್ಧೆ ಮಾಡೋಣ” ಎಂದು ಸವಾಲು ಎಸೆದರು.
“ತಿರುಚೆಂದೂರ್ ನಮ್ಮ ಕೋಟೆ. ಇಲ್ಲಿ ಯಾರೇ ಬಂದರೂ ಧೂಳೀಪಟ ಮಾಡುತ್ತೇವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 25 ವರ್ಷಗಳಿಂದ ತಿರುಚೆಂದೂರ್ ಕ್ಷೇತ್ರದಲ್ಲಿ ರಾಧಾಕೃಷ್ಣನ್ ಪ್ರಭಾವ ಹೊಂದಿದ್ದಾರೆ ಎನ್ನಲಾಗಿದೆ.ಇನ್ನೊಂದೆಡೆ, ತಮ್ಮ ಹಳೆಯ ಕ್ಷೇತ್ರ ಕೊಳತ್ತೂರ್ನಲ್ಲಿ ಸೋತಿದ್ದ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರನ್ನು ಸಮರ್ಥಿಸಿಕೊಂಡ ಅವರು, “ಸ್ಟಾಲಿನ್ ಅವರು ಕೊಳತ್ತೂರ್ ಕ್ಷೇತ್ರವನ್ನು ಸಿಂಗಾಪುರದಂತೆ ಅಭಿವೃದ್ಧಿಪಡಿಸಿದ್ದರು. ಆದರೆ ಅಲ್ಲಿನ ಮತದಾರರು ಯೋಗ್ಯರಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಮುಂದಿನ ಚುನಾವಣೆಯಲ್ಲಿ ಸ್ಟಾಲಿನ್ ಅವರು ತಿರುಚ್ಚಿಯಿಂದ ಸ್ಪರ್ಧಿಸಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.ಆದರೆ, ಈ ಹೇಳಿಕೆಗಳ ಕುರಿತು ಇದುವರೆಗೆ ಮುಖ್ಯಮಂತ್ರಿ ವಿಜಯ್ ಕಚೇರಿ ಅಥವಾ ಟಿವಿಕೆ ನಾಯಕ ಆಧವ್ ಅರ್ಜುನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.






