• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚುನಾವಣೆಯ ಗೆಲುವನ್ನ ಸಂಭ್ರಮಿಸಲು ಸೋಲನ್ನೂ ಕೂಡಾ ಸ್ವೀಕರಿಸಬೇಕು..!!

ಪ್ರತಿಧ್ವನಿ by ಪ್ರತಿಧ್ವನಿ
November 25, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿದೇಶ, ವಿಶೇಷ
0
Share on WhatsAppShare on FacebookShare on Telegram

62 ವರ್ಷಗಳ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ , ಕೇವಲ 6 ವರ್ಷಗಳ ಅಧಿಕಾರ ಅನುಭವಿಸಿದ ದೇವೇಗೌಡರು , ಪ್ರಧಾನಿಯಾಗಿ ಇಳಿದ ಮರು ಚುನಾವಣೆಯಲ್ಲಿಯೇ , ಒಂದೂವರೆ ಲಕ್ಷಗಳ ಅಂತರದಿಂದ ತವರು ನೆಲ ಹಾಸನದಲ್ಲಿಯೇ ಸೋತರು . ಅದಕ್ಕೂ ಮೊದಲು , ತಮ್ಮ ಸ್ನೇಹಿತ ಮತ್ತು ಅನುಯಾಯಿಯಾಗಿದ್ದ ಪುಟ್ಟಸ್ವಾಮಿಗೌಡರ ವಿರುದ್ಧ ಹೊಳೆ ನರಸೀಪುರದಲ್ಲಿಯೂ ಸೋತಿದ್ದರು . ಹೆಗಡೆ ಜೊತೆಗಿನ ಜಗಳದಿಂದ ಜನತಾದಳದಿಂದ ಹೊರಬಂದು , ತಮ್ಮದೇ ಸಮಾಜವಾದಿ ಜನತಾ ಪಕ್ಷದಿಂದ ಎಂ ಪಿ ಚುನಾವಣೆಯಲ್ಲಿ , ಹನುಮೇಗೌಡರ ಸಹಾಯದಿಂದ ಕೇವಲ ಆರು ಸಾವಿರ ಮತಗಳ ಅಂತರದಿಂದ ಗೆದ್ದು , ಫೀನಿಕ್ಸ್ ಗೆ ಉಪಮೆಯಾಗಿದ್ದರು .

ADVERTISEMENT

ಇವುಗಳೆಲ್ಲವೂ ಸುಲಭಸಾಧ್ಯವಾಗಿರಲಿಲ್ಲ . ಮಾಧ್ಯಮಗಳೆಂದೂ ಜೊತೆಗಿರಲಿಲ್ಲ . ಮೀಡಿಯಾ ಡಾರ್ಲಿಂಗ್ ಆಗಿ ಹೆಗಡೆ ಮೆರೆಯುತ್ತಿದ್ದರು . ಆಗಲೂ ಹಲವು ಒಕ್ಕಲಿಗ ಶಾಸಕರು ಕೆಲವರು ಹೆಗಡೆ ಜೊತೆಗಿದ್ದರು .

ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆ ಎಂದರೆ , ಒಂದೇ ಭಾಗದಲ್ಲಿ ಕನ್ಸಾಲಿಡೇಟ್ ಆಗಿರುವ ಒಕ್ಕಲಿಗರು , ರಾಜಕೀಯವಾಗಿ ಮೇಲೇರಲು , ಯಾರೇ ಆಗಿದ್ದರೂ , ಒಕ್ಕಲಿಗರನ್ನೇ ಹಣಿದು ಬೆಳೆಯಬೇಕಿತ್ತು . ಹಾಸನದಲ್ಲಿ ದೇವೇ ಗೌಡ್ರು – ಶ್ರೀಕಂಠಯ್ಯ , ಮಂಡ್ಯದಲ್ಲಿ ಶಂಕರ ಗೌಡ್ರು – ಎಸ್ ಎಂ ಕೃಷ್ಣ – ಮಾದೇಗೌಡ್ರು , ಕೋಲಾರದಲ್ಲಿ ಭೈರೇ ಗೌಡ್ರು – ಬಚ್ಚೇ ಗೌಡ್ರು – ಚೌಡರೆಡ್ಡಿ ಕುಟುಂಬ ….

ಹೀಗೆ ಇವರಿವರೇ ಹೊಡೆದಾಡಿಕೊಳ್ಳಬೇಕಿತ್ತು ಮತ್ತು ಮುಂದೆಯೂ ಹಾಗೆಯೇ ಇರುತ್ತದೆ . ಪ್ರತೀ ಪಂಚಾಯ್ತಿ ಚುನಾವಣೆಗಳಲ್ಲಿ , ರಾಜಕೀಯ ಆಕಾಂಕ್ಷೆ ಹೊಂದಿರುವ ಯುವಕರು ದಳ ಮತ್ತು ಕಾಂಗ್ರೆಸ್ ನಡುವೆಯೇ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು . ಹಾಗಾಗಿ , ಒಕ್ಕಲಿಗರು ಒಂದೇ ಪಕ್ಷದ ಪರ ನಿಲ್ಲುವುದು ಸಾಧ್ಯವಿಲ್ಲದ ಮಾತು ಮತ್ತು ದೇವೇ ಗೌಡರ , ಕುಮಾರಸ್ವಾಮಿಯವರ ಪರ ಸಿಂಪತಿ ಇರುವ ಒಕ್ಕಲಿಗರೇ ಹೆಚ್ಚು ಎನ್ನುವುದು ವಾಸ್ತವ . ಹಾಗಾಗಿಯೇ , ಚುನಾವಣೆ ಏನೇ ಆದರೂ , ಒಕ್ಕಲಿಗರ ಅಘೋಷಿತ ನಾಯಕರು ದೇವೇಗೌಡರೊಬ್ಬರೇ ..

ಜಾತಿಯೇ ವಿಜೃಂಭಿಸುವ ಈ ಕಾಲಘಟ್ಟದಲ್ಲಿ , ರಾಜ್ಯದ ಎಲ್ಲಾ ಕಾಂಗ್ರೆಸ್ ಶಾಸಕರೂ ಸಿದ್ಧರಾಮಯ್ಯನವರನ್ನ ಓಲೈಸಲು ಪ್ರಮುಖ ಕಾರಣ ಕುರುಬ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ 5 ರಿಂದ 50000 ದವರೆಗೂ ಇರುವುದು . ಅದೇ ರೀತಿ ಜಮೀರ್ ಕೂಡಾ ಸಿದ್ಧರಾಮಯ್ಯನವರ ಹಾಗೆಯೇ . ರಾಜ್ಯ ರಾಜಕಾರಣವನ್ನ ಬುಗುರಿ ರೀತಿಯಲ್ಲಿ ಆಡಿಸಲು ಅವಕಾಶವಿರುವ , ಇವರಿಬ್ಬರ ಸಮುದಾಯಕ್ಕಿಂತ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿರುವ ದಲಿತರು , ತಮ್ಮದೇ ನಾಯಕತ್ವಕ್ಕೆ ಒತ್ತು ಕೊಡದಿರುವುದು ದುರಂತವಷ್ಟೇ .

ಅಭಿಮನ್ಯು ಇಂದಿಗೂ ಎಲ್ಲರಿಗೂ ಇಷ್ಟದವ . ಅರ್ಜುನನನ್ನ ” ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು …” ಎಂದು ಹೀಗಳೆಯುವವರೆಗೆ ಅರ್ಥ ಆಗಬೇಕಿರೋದು , ಅರ್ಜುನ ” ಪರಮಾತ್ಮನಿಗೆ ಪ್ರಿಯನಾದ ಪಾರ್ಥ ….” ಅನ್ನೋದು .

ಕೊನೇ ಮಾತು : ಅಭಿಮನ್ಯುವನ್ನ ಕೊಂದವರು ಕೌರವರೆಂದು ಎಲ್ಲರಿಗೂ ಗೊತ್ತು . ಮತ್ತು ಸಮಾಜದಲ್ಲಿ ಕೌರವರಿಗ್ಗೆ ಮತ್ತವರ ಸೋದರಮಾವ ಶಕುನಿಗೆ ಇರುವ ಸ್ಥಾನಮಾನಗಳೇನು ಅನ್ನೋದು ಎಲ್ಲರಿಗೂ ಗೊತ್ತು . ಅಂತಿಮ ವಿಜಯ ಸತ್ಯದ್ದೇ … ನ್ಯಾಯದ್ದೇ … ಮತ್ತು ಪಾಂಡವರದ್ದೇ …

Tags: BJPCongress PartydevegowdahanumegowdaHassanhd kumarswamyHegdeNikhil Kumarswamysharath bacchegowdaನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ ಸ್ನೇಹಿತರು..

Next Post

ಸಂವಿಧಾನ – ಓದು ಅಧ್ಯಯನ- ಅರಿವಿನ ಹಾದಿ

Related Posts

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ
ಅಂಕಣ

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

by ಪ್ರತಿಧ್ವನಿ
April 10, 2026
0

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ ಅದರ ಗರ್ಭದಲ್ಲಿರುವ ಕ್ಷೀಣ ದನಿಗಳನ್ನು ಸಮಾಜಕ್ಕೆ ಮರುಪರಿಚಯಿಸುವ ಸಾಹಿತ್ಯಿಕ ಕೃತಿ “ ಹಾಸನ ಮಣ್ಣಿನ ಹೆಣ್ಣು ದನಿಗಳು ” ನಾ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
Next Post

ಸಂವಿಧಾನ – ಓದು ಅಧ್ಯಯನ- ಅರಿವಿನ ಹಾದಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada