ಬ್ರಿಟಿಷ್ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳನ್ನು ಬುಧವಾರ ಲೋಕಸಭೆಯಲ್ಲಿ 97 ಅಮಾನತು ಸಂಸದರ ಅನುಪಸ್ಥಿತಿ ಇಲ್ಲದೇ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.
ಭಾರತೀಯ ನ್ಯಾಯ(ಎರಡನೇ) ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ(ಎರಡನೇ) ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ(ಎರಡನೇ) ಮಸೂದೆಯನ್ನು ಕಳೆದ ವಾರ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದರು.
ಈ ವಾರ ಅಮಾನತುಗೊಂಡಿದ್ದ 97 ಸಂಸದರ ಅನುಪಸ್ಥಿತಿಯಲ್ಲಿ ವಿವಾದಾತ್ಮಕ ಮಸೂದೆಗಳನ್ನು ಕೆಳಮನೆ ಅಂಗೀಕರಿಸಿತು.
ಹೊಸ ಕ್ರಿಮಿನಲ್ ಕಾನೂನು ಮಸೂದೆಗಳ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಸ್ತಾಪಿಸಿದ ಕಾನೂನುಗಳ ಪ್ರಕಾರ ಗುಂಪು ಹತ್ಯೆಯ ಅಪರಾಧಕ್ಕೆ ಮರಣದಂಡನೆಗೆ ಅವಕಾಶವಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಪ್ರಕಾರ ಹೊಸ ಮಸೂದೆಗಳು “ಶಿಕ್ಷೆ” ಬದಲಿಗೆ “ನ್ಯಾಯ”ದ ಮೇಲೆ ಕೇಂದ್ರೀಕರಿಸುವ ಮೂಲಕ ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ನವೀಕರಿಸುವ ಗುರಿಯನ್ನು ಹೊಂದಿವೆ. ಹೊಸ ಕ್ರಿಮಿನಲ್ ಕಾನೂನು ಮಸೂದೆಗಳು “ಸಂವಿಧಾನದ ಆತ್ಮಕ್ಕೆ ಅನುಗುಣವಾಗಿ” ಇವೆ ಎಂದು ಗೃಹ ಸಚಿವರು ಹೇಳಿದರು.
ಬಡವರಿಗೆ ನ್ಯಾಯ ಪಡೆಯುವ ದೊಡ್ಡ ಸವಾಲು ಆರ್ಥಿಕ ಸವಾಲು. ವರ್ಷಗಳಿಂದ ‘ತಾರೀಖ್ ಪೇ ತಾರೀಖ್’ ಮುಂದುವರಿಯುತ್ತದೆ. ಪೊಲೀಸರು ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆ ಮಾಡುತ್ತಾರೆ. ಸರ್ಕಾರ ಪೊಲೀಸ್ ಮತ್ತು ನ್ಯಾಯಾಂಗವನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ವಿಳಂಬಕ್ಕೆ ಸರ್ಕಾರವನ್ನು ಪೊಲೀಸರು ಮತ್ತು ನ್ಯಾಯಾಂಗವು ಹೊಣೆಗಾರರನ್ನಾಗಿ ಮಾಡುತ್ತದೆ. ಈಗ ನಾವು ಹೊಸ ಕಾನೂನುಗಳಲ್ಲಿ ಹಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದೇವೆ. ನಾವು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಆದಷ್ಟು ಬೇಗ ಮಾಡುತ್ತೇವೆ ಮತ್ತು ಜನವರಿ 22 ರಂದು ಅಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಇದು ಪ್ರಧಾನಿ ಮೋದಿಯವರ ಸರ್ಕಾರ, ಅವರು ಹೇಳಿದ್ದನ್ನು ಮಾಡಿದ್ದೇವೆ. ನಾವು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುತ್ತೇವೆ ಎಂದು ಹೇಳಿದೆವು. ಕಾಂಗ್ರೆಸ್ ಹಲವು ಬಾರಿ ಅಧಿಕಾರಕ್ಕೆ ಬಂದಿತು ಮತ್ತು ದಿನಾಂಕಗಳನ್ನು ನೀಡುತ್ತಲೇ ಇತ್ತು. ಆದರೆ ನಾವು ಮಹಿಳೆಯರ ಸಬಲೀಕರಣಕ್ಕಾಗಿ ಹೆಚ್ಚಿನ ಮತಗಳೊಂದಿಗೆ ಅದನ್ನು ಜಾರಿಗೆ ತಂದೆವು ಎಂದು ಅಮಿತ್ ಶಾ ಹೇಳಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಗಳನ್ನು ಆರಂಭದಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು ಆದರೆ ನಂತರ ಹಿಂಪಡೆಯಲಾಯಿತು . ಕಳೆದ ವಾರ ಲೋಕಸಭೆಯಲ್ಲಿ ಪರಿಷ್ಕೃತ ಮಸೂದೆಗಳನ್ನು ಅಮಿತ್ ಶಾ ಮರು ಮಂಡಿಸಿದ್ದರು. ಈಗ ಈ ಮೂರು ಮಸೂದೆಗಳು ೯೭ ಸಂಸದರು ಇಲ್ಲದೇ ಅಂಗೀಕಾರ ಆಗಿದೆ.