ಎಪ್ರಿಲ್ 2 ರಂದು, ಮಧುಲಿಕಾ ರಜಪೂತ್ ರಾಜಸ್ಥಾನದ ಕರೌಲಿ ಪಟ್ಟಣದ ಮಾರುಕಟ್ಟೆ ಸಂಕೀರ್ಣದ ಹೊರಗೆ ಉದ್ರಿಕ್ತ ಜನಸಮೂಹವನ್ನು ಎದುರಿಸಿದರು, ಆ ಸಂಕೀರ್ಣದಲ್ಲಿ ಮಧುಲಿಕಾ ಕುಟುಂಬವು ಹಲವಾರು ಅಂಗಡಿಗಳನ್ನು ಹೊಂದಿದೆ. ಕೇಸರೀಧಾರಿ ಉದ್ರಿಕ್ತ ಗುಂಪು ʼಜೈ ಶ್ರೀ ರಾಮ್ʼ ಘೋಷಣೆಗಳೊಂದಿಗೆ ಅಲ್ಲಿ ಜಮಾಯಿಸಿತ್ತು. ಇತರೆ ಜನರು ಅಡಗಿ ಕೂತಿದ್ದಾರೆಯೇ ಎಂದು ಆ ಪ್ರದೇಶವನ್ನು ತಪಾಸಣೆ ಮಾಡಲು ಅವರು ಬಯಸಿದ್ದರು.
ಇಲ್ಲಿ ಯಾರೂ ಅಡಗಿ ಕೂತಿಲ್ಲ, ನಾನು ಯಾರನ್ನೂ ಒಳಗೆ ಬಿಡುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ ಎಂದು 48 ರ ಹರೆಯದ ಮಧುಲಿಕಾ ತಿಳಿಸಿದ್ದರೆ. ʼಗಲಭೆ ಹರಡಬಾರದೆಂದು ನಾನು ಬಯಸಿದ್ದೆ. ಇಲ್ಲಿ ಯಾರೂ ನನಗೆ ಇಷ್ಟವಿಲ್ಲದ್ದನ್ನು ಮಾಡುವಂತೆ ಬಲಪಡಿಸುವಂತಿಲ್ಲ, ನನ್ನನ್ನು ಯಾರೂ ಏನೂ ಕೇಳುವಂತಿಲ್ಲʼ ಎಂದು ಅವರು ಹೇಳುತ್ತಾರೆ.
ಅಂದು ಕರೌಲಿಯಲ್ಲಿ ಭೀಕರ ಗಲಭೆ ನಡೆದಿದೆ, ಉದ್ರಿಕ್ತ ಗುಂಪು ಇಡೀ ನಗರವನ್ನು ಅಕ್ಷರಶಃ ನರಕವನ್ನಾಗಿಸಿತ್ತು. ಶೋಭಯಾತ್ರೆ ವೇಳೆ ಕೋಮು ಘೋಷಣೆಗಳನ್ನು ಕೂಗಿದ ಬಳಿಕ ಉಂಟಾದ ಕಲ್ಲು ತೂರಾಟವು ಗಲಭೆಗೆ ಕಾರಣವಾಗಿದೆ. ಕೇಸರಿಧಾರಿ ಉದ್ರಿಕ್ತ ಗುಂಪಿಗೆ ತಿಳಿಸದೆ ಮಧುಲಿಕಾ ರಕ್ಷಿಸಿದ್ದು 15 ಮುಸ್ಲಿಂ ವರ್ತರನ್ನು. ಇವರೆಲ್ಲರನ್ನೂ ಸಂಕೀರ್ಣದ ಮೊದಲ ಮಹಡಿಯಲ್ಲಿ ತಂಗುವಂತೆ ಮಧುಲಿಕಾ ವ್ಯವಸ್ಥೆ ಮಾಡಿ, ಉದ್ರಿಕ್ತ ಗುಂಪಿನ ಸಂಭಾವ್ಯ ದಾಳಿಯಿಂದ ರಕ್ಷಿಸುತ್ತಾರೆ.

ಈ ಬಗ್ಗೆ ಅನುಭವ ಹಂಚಿಕೊಂಡ ಚಪ್ಪಲಿ ಅಂಗಡಿ ಮಾಲಿಕ ಡಾನಿಷ್ ಖಾನ್, ಗಲಭೆ ಎದ್ದ ಬಳಿಕ ಒಂದಾದರ ಮೇಲೆ ಒಂದೊಂದು ಅಂಗಡಿ ತಮ್ಮ ಬಾಗಿಲುಗಳನ್ನು ಮುಚ್ಚುತ್ತಾ ಬಂದವು. ನಾವೂ ಮನೆಗೆ ಹೋಗುವುದು ಒಳಿತು ಎಂದು ಅಂಗಡಿ ಬಾಗಿಲು ಮುಚ್ಚಿದೆವು. ಅಂಗಡಿಯಿಂದ ಹೊರಗೆ ಕಾಲಿಡುತ್ತಿದ್ದಂತೆ ಕೇಸರಿ ಬಾವುಟ ಹಾಗೂ ಶಾಲು ಧರಿಸಿದ ಉದ್ರಿಕ್ತ ಗುಂಪು ನಮ್ಮಡೆಗೆ ಬರುತ್ತಿತ್ತು. ತಕ್ಷಣವೇ ಉಳಿದವರೊಂದಿಗೆ ನಾನು ಕಾಂಪ್ಲೆಕ್ಸ್ ಒಳಗೆ ಓಡಿದೆ ಎಂದು ತಿಳಿಸಿದ್ದಾರೆ.
ಸಂಕೀರ್ಣದ ಒಳಗೆ ಮಧುಲಿಕಾ ಅವರನ್ನು ನೋಡಿದೆ, ಅವರಿಂದ ಆ ಕಾಳಜಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಆಕೆ ನಮ್ಮನ್ನು ಮೊದಲ ಮಹಡಿಗೆ ಕರೆದುಕೊಂಡು ಹೋಗಿ ರಕ್ಷಣೆ ನೀಡಿದರು, ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವವರೆಗೆ ತಮ್ಮ ಕೋಣೆಯಲ್ಲಿ ತಂಗುವಂತೆ ವ್ಯವಸ್ಥೆ ಮಾಡಿದರು. ಆಕೆಯ ಕೊಠಡಿಯಲ್ಲಿ ಆಶ್ರಯ ಪಡೆದವರಲ್ಲಿ ಕೆಲವರಿಗೆ ಪರಸ್ಪರ ಪರಿಚಯವಿತ್ತು, ಇನ್ನು ಕೆಲವರು ಅಪರಿಚಿತರಾಗಿದ್ದರು ಎಂದು ತಿಳಿಸಿದ್ದಾರೆ.
ಇನ್ನು ಗಾರ್ಮೆಂಟ್ಅಲ್ಲಿ ಕೆಲಸ ಮಾಡುವ ಮಹಮ್ಮದಿನ್ ಖಾನ್ ಕೂಡಾ ತಮ್ಮ ಅನುಭವವನ್ನು ವಿವರಿಸಿದ್ದು, ಉದ್ರಿಕ್ತ ಗುಂಪನ್ನು ಮಧುಲಿಕ ತಡೆದು ತಮ್ಮನ್ನು ರಕ್ಷಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.
ಅವರು ಮುಸ್ಲಿಮರ ಅಂಗಡಿಗಳನ್ನು ಧ್ವಂಸ ಮಾಡಲು ಮುಂದಾದಾಗ, ಆಂಟಿ (ಮಧುಲಿಕಾ) ಅವರನ್ನು ತಡೆದರು, ಆಕೆ ಅಂಗಡಿಗಳ ಧ್ವಂಸಕ್ಕೆ ಬಿಡುವುದಿಲ್ಲ ಎಂದು ಅವರೊಂದಿಗೆ ಕಿರುಚಿದರು. ಅದನ್ನು ಕೇಳಿ ನಮಗೆ ಸಮಾಧಾನವಾಯಿತು ಎಂದು ಖಾನ್ ಹೇಳಿದ್ದಾರೆ.

ಮಧುಲಿಕಾ ಅವರ ಸಂಬಂಧಿ ಸಂಜಯ್ ಸಿಂಘ್ ಕೂಡಾ ರಕ್ಷಣೆ ಅರಸಿ ಬಂದವರ ಸೇವೆಯಲ್ಲಿ ನಿರತರಾಗಿದ್ದಾರೆ. ಗಲಭೆ ಸ್ಪೋಟಗೊಳ್ಳುತ್ತಿದ್ದಂತೆ ಕೆಲಸ ಮುಗಿಸಿ ಸಂಜಯ್ ಬೇಗನೇ ಬಂದಿದ್ದಾರೆ. ಮಧುಲಿಕಾ ಜೊತೆಗಿದ್ದ ಸಂಜಯ್ ಹೆಂಡತಿ ಗಂಡನಿಗೆ ಕರೆ ಮಾಡಿ ವಾಣಿಜ್ಯ ಸಂಕೀರ್ಣಕ್ಕೆ ಬರುವಂತೆ ಕೇಳಿದ್ದಾರೆ.
ನಾನು ಬಂದಾಗ ಈ ಹುಡುಗರು ಕೋಣೆಯಲ್ಲಿ ಕುಳಿತಿದ್ದರು, ಅವರಿಗೆ ನೀರು ಮತ್ತು ಚಹಾದ ವ್ಯವಸ್ಥೆಯನ್ನು ಮಾಡಿಕೊಟ್ಟೆ, ಹಾಗೂ, ಪರಿಸ್ಥಿತಿ ಶೀಘ್ರವೇ ತಿಳಿಯಾಗಲಿದೆ ಎಂದು ಅವರಿಗೆ ಭರವಸೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಸಂಜಯ್ ಹಾಗೂ ಮಧುಲಿಕಾ ಅವರ ಸಹಾಯದಿಂದ ಮಹಮ್ಮದಿನ್ ಖಾನ್ ಭಾವುಕರಾಗಿದ್ದಾರೆ. ನಾನು ಹಿಂದೆಂದೂ ಅವರನ್ನು ಭೇಟಿಯಾಗಿರಲಿಲ್ಲ, ಆದರೂ ಅವರು ವಿಶೇಷ ದಯೆಯಿಂದ ನಮ್ಮನ್ನು ನೋಡಿಕೊಂಡರು ಎಂದು ಹೇಳಿದ್ದಾರೆ.
ಗಲಭೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮುಸ್ಲಿಮರು ತಮ್ಮ ಮನೆಗಳಿಗೆ ಮರಳಿದ್ದಾರೆ. ಈ ವೇಳೆ ಅವರೊಂದಿಗೆ ರಕ್ಷಣೆಗೆ ನಾವು ಬರಬೇಕೆ ಎಂದು ಸಂಜಯ್ ಪ್ರಶ್ನಿಸಿದ್ದಾರೆ. ʼಇದು ಹಿಂದೂಸ್ತಾನ, ನಾವು ರಜಪೂತರು, ನಾವು ಜನರನ್ನು ರಕ್ಷಿಸುವುದಕ್ಕಾಗಿಯೇ ಹೆಸರುವಾಸಿಯಾಗಿದ್ದೇವೆʼ ಎಂದು ಸಂಜಯ್ ನಂಬುತ್ತಾರೆ.

ಹಿಂಸಾಚಾರದ ನಂತರ ಜಿಲ್ಲಾಡಳಿತವು ರಚಿಸಿದ ತಂಡವು ಣ ಏಳು ಹಿಂದೂಗಳು ಮತ್ತು 73 ಮುಸ್ಲಿಮರಿಗೆ ಸಂಬಂಧಿಸಿದ 2.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಷ್ಟವನ್ನು ಅಂದಾಜಿಸಿದೆ ಎಂದು ಕರೌಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಸಿಂಗ್ ಸೆಖಾವತ್ ಹೇಳಿದ್ದಾರೆ. ತಂಡವು ತನ್ನ ವರದಿಯನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕಚೇರಿಗೆ ಕಳುಹಿಸಿದೆ.