
ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಧುಸೂದನ್ ರಾವ್ ಮೂಲತಃ ಆಂದ್ರದ ನೆಲ್ಲೂರು ಮೂಲದವರಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಪತ್ನಿ ಕಾಮಾಕ್ಷಿ ಪ್ರಸನ್ನ, ಮಗಳು ಮೇದಾಶ್ರೀ, ಮಗ ಮುಕುಂದ ಶ್ರೀದತ್ತ ಸೇರಿದಂತೆ ಒಟ್ಟು ನಾಲ್ಕು ಜನ ಪ್ರವಾಸಕ್ಕೆ ಹೋಗಿದ್ದರು. ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ಮೂರು ಕುಟುಂಬಗಳು ಹೋಗಿದ್ದವು. ಅದರಲ್ಲಿ ಇವರದ್ದು ಒಂದು ಕುಟುಂಬ. ಊಟ ತರೋದಕ್ಕೆ ಅಂತ ಹೋಗಿದ್ದ ವೇಳೆ ಮಧುಸೂದನ್ ರಾವ್ ಅವರ ಹೆಂಡತಿ ಕೂಡ ಸ್ನೇಹಿತರ ಜೊತೆ ಹೋಗಿದ್ದರು. ಬರುವಷ್ಟರಲ್ಲಿ ಉಗ್ರರ ದಾಳಿ ಆಗಿತ್ತು. ಮಧುಸೂದನ್ ರಾವ್ ಅವರನ್ನು ಕುಟುಂಬಸ್ಥರ ಎದುರಲ್ಲೇ ಕೊಲ್ಲಲಾಗಿದೆ.
ಮಧುಸೂದನ್ ರಾವ್ ಅವರನ್ನು ಹೇಗೆ ಕೊಲ್ಲಲಾಯ್ತು..? ಅನ್ನೋದನ್ನು ನೋಡಿದಾಗ ಎದೆ ಝಲ್ ಎನ್ನುವಂತಿದೆ. ಕಾಶ್ಮೀರಕ್ಕೆ ಟ್ರಿಪ್ ಹೋಗಿದ್ದ ಮಧುಸೂದನ್ ಮತ್ತು ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಪಹಲ್ಗಾಮ್ನಲ್ಲಿ ಬಸ್ನಲ್ಲಿದ್ದರು. ಮಧುಸೂದನ್ ರಾವ್ ಇದ್ದ ಬಸ್ ಬಳಿಗೆ ಬಂದ ಉಗ್ರರು, ಭಾರತೀಯ ಸೈನ್ಯದ ಯೂನಿಫಾರಂ ತೊಟ್ಟಿದ್ದರು. ಈ ವೇಳೆ ಮಧುಸೂದನ್ ಬಳಿ ಬಂದು ಯಾವ ಧರ್ಮ ಅಂತ ಕೇಳಿದ್ದಾರೆ. ಹಿಂದುನಾ ಮುಸ್ಲಿಮಾ ಅಂತ ಕೇಳಿದ್ದಾರೆ. ಅಷ್ಟರಲ್ಲಿ ಭಯದಲ್ಲಿದ್ದ ಮಧುಸೂದನ್ ಮುಸ್ಲಿಂ ಎಂದಿದ್ದಾರೆ. ಆಗ ಉಗ್ರನೊಬ್ಬ ಜೇಬಿನಿಂದ ಕುರಾನ್ ತೆಗೆದು ಓದುವಂತೆ ಹೇಳಿದ್ದಾನೆ. ಆಗ ಮರೆತು ಹೋಗಿದೆ ಎಂದಿದ್ದಾರೆ ಮಧುಸೂದನ್. ಹಾಗಿದ್ರೆ ಪ್ಯಾಂಟ್ ಬಿಚ್ಚು ಎಂದು ತಾಕೀತು ಮಾಡಿದ್ದಾರೆ. ಆಗ ಭಯಗೊಂಡ ಮಧುಸೂದನ್ ಹಿಂದೂ ಎಂದಿದ್ದಾರೆ. ಅಷ್ಟರಲ್ಲಿ ಉಗ್ರರ ಬಂದೂಕಿನ ಗುಂಡು ತಲೆಯನ್ನು ಸೀಳಿದೆ.

ಹಿಂದೂ ಎಂದ ತಕ್ಷಣ ಮಧುಸೂದನ್ ರಾವ್ ತಲೆಗೆ ಗುಂಡಿಟ್ಟು ಹೆಂಡತಿ, ಮಕ್ಕಳ ಎದುರೇ ಕೊಂದಿದ್ದಾರೆ ಉಗ್ರರು. ಬಸ್ನಲ್ಲಿದ್ದ ಪ್ರವಾಸಿಗರಿಗೆ ನಿಮ್ಮ ಐಡಿ ಕಾರ್ಡ್ ತೋರಿಸಿ ಎಂದಿದ್ದಾರೆ. ನೀವು ಹಿಂದುನಾ..? ಎಂದು ಕೇಳಿ, ಕುರಾನ್ ಓದು ಎಂದು ಬೆದರಿಸಿದ್ದಾರೆ. ಹೆಂಡತಿ, ಮಕ್ಕಳ ಮುಂದೆ ಮಧುಸೂಧನ್ ರಾವ್ಗೆ ಗುಂಡಿಕ್ಕಿ ಕೊಂದಿದ್ದಾರೆ. ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದ ಮಧುಸೂದನ್ ರಾವ್ ಬಸ್ನಲ್ಲಿ ಫ್ಯಾಮಿಲಿ ಸಮೇತ ಟೂರ್ ಹೋಗಿದ್ದರು. ಆಫೀಸ್ ಸ್ನೇಹಿತರು ಮತ್ತು ಅವರ ಫ್ಯಾಮಿಲಿ ಜೊತೆ ಕಾಶ್ಮೀರಕ್ಕೆ ಹೋಗಿದ್ದಾಗ ದುರಂತ ಸಂಭವಿಸಿದೆ.
