ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ, ಸಿಎಂ ಸಿದ್ದರಾಮಯ್ಯ (Cm siddaramaiah) ಬಳಿ ಹಣವಿಲ್ಲ..ಇದ್ದ ಹಣವನ್ನೆಲ್ಲಾ ಅಕ್ಕಿ ಬೆಲೆ ಎಣ್ಣೆ ರೂಪದಲ್ಲಿ ನಿಮಗೆ ಕೊಟ್ಟುಬಿಟ್ಟಿದ್ದೇವೆ..ಈಗೇನಿದ್ದರೂ ಕೇಂದ್ರ ಸರ್ಕಾರವನ್ನು (Union government) ಕೇಳಿ ಅಂತ ಕಾಂಗ್ರೆಸ್ ಹಿರಿಯ ನಾಯಕ , ಗೃಹ ಸಚಿವ ಪ್ರಮೇಶ್ವರ್ (G Parameshwar) ತಮ್ಮದೇ ಸರ್ಕಾರದ ಕಾಲೆಳೆದಿದ್ದಾರೆ.

ನಿಮಗೆ ಏನೇ ಡಿಮಾಂಡ್ಸ್ ಇದ್ದರೂ ನಮ್ಮನ್ನು ಕೇಳೋಕೆ ಬರಬೇಡಿ, ಒಂದು ಪ್ರಾಜೆಕ್ಟ್ ಮಾಡಿ ಕೇಂದ್ರಕ್ಕೆ ಕೊಡಿ. ನಮ್ಮತ್ರ ದುಡ್ಡಿಲ್ಲ,ಎಲ್ಲಾ ದುಡ್ಡು ನಿಮಗೆ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತ್ನಾಡಿದ ಅವರು, ಸಾವಿರ ಕೋಟಿ ಪ್ರಾಜೆಕ್ಟ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಿ. ನಮ್ಮತ್ರ ದುಡ್ಡಿಲ್ಲ, ಸಿಎಂ ಸಿದ್ದರಾಮಯ್ಯರ ಹತ್ತಿರ ದುಡ್ಡಿಲ್ಲ ಆಯ್ತಾ…ಇರುವ ದುಡ್ಡನ್ನೆಲ್ಲ ಅಕ್ಕಿ, ಬೇಳೆ, ಎಣ್ಣೆ ರೂಪದಲ್ಲಿ ನಿಮಗೆ ಕೊಟ್ಟುಬಿಟ್ಟಿದ್ದೇವೆ.ಹೀಗಾಗಿ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದಿದ್ದು, ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.