• Home
  • About Us
  • ಕರ್ನಾಟಕ
Wednesday, June 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಹಂಕಾರಿಗೆ ಆನಂದವಿಲ್ಲ

ಪ್ರತಿಧ್ವನಿ by ಪ್ರತಿಧ್ವನಿ
June 15, 2025
in Top Story, ಜೀವನದ ಶೈಲಿ
0
ಅಹಂಕಾರಿಗೆ ಆನಂದವಿಲ್ಲ
Share on WhatsAppShare on FacebookShare on Telegram

ಮನೋಚರಿತ್ರ

ADVERTISEMENT

ಯಾರೊಬ್ಬರು ಅಹಂಕಾರಿಯಾಗಿರುವರೋ ಅಥವಾ ಸೂಪರ್ ನಾರ್ಸಿಸಿಸ್ಟ್ ಆಗಿರುವರೋ ಅವರು ಸಂತೋಷವಾಗಿರಲಾರರು. ಆದರೆ ಅವರ ಅಹಮಿಕೆಯ ಪುಷ್ಟಿಯನ್ನೋ ಅಥವಾ ಅಧಿಕಾರದ ತೃಪ್ತಿಯನ್ನೋ ಆನಂದವೆಂದು ತಪ್ಪಾಗಿ ಭಾವಿಸಿರಲು ಸಾಧ್ಯ.

ಅಹಮಿಕೆಯ ತೃಪ್ತಿಯನ್ನೇ ಬಹಳಷ್ಟು ಜನ ಆನಂದವೆಂದು ಭಾವಿಸಿರುತ್ತಾರೆ. ಆದರೆ ಮನಶಾಸ್ತೀಯವಾಗಿ ಈವೆರಡಕ್ಕೂ ಬಹಳ ವ್ಯತ್ಯಾಸಗಳಿವೆ. ನೇರವಾಗಿ ಹೇಳುವುದಾದರೆ ಒಂದು ಅನಾರೋಗ್ಯ ಮತ್ತೊಂದು ಆರೋಗ್ಯ.

H Vishwanath : ಸಿದ್ರಾಮಯ್ಯ ಮುಖ ಮುಚ್ಕೊಂಡು ಬಂದ್ರಿ  #pratidhvani

ತಮ್ಮನ್ನು ತಾವು ಮುನ್ನೆಲೆಗೆ ತಂದುಕೊಳ್ಳುವುದರ ಭರಾಟೆಯಲ್ಲಿ ಬಹಳಷ್ಟು ಜನ ಅಹಂಕಾರವನ್ನೇ ಆತ್ಮವಿಶ್ವಾಸವೆಂದು ತಪ್ಪಾಗಿ ಭಾವಿಸುವುದಾಗಿರುತ್ತದೆ.

ಆತ್ಮರತಿಯ ವ್ಯಕ್ತಿತ್ವದ ಅಹಂಕಾರದ ಪದರದ ಹಿಂದೆ ನಾಜೂಕಾದ ಭಾವನಾತ್ಮಕ ಕೋಶವೊಂದಿದೆ. ಅದು ಪ್ರಕಟವಾಗಲು ಅಹಂಕಾರದ ಹಸಿವು ಬಿಡುವುದೇ ಇಲ್ಲ. ಭಾವಕೋಶದೊಳಗಿನ ಆನಂದರಸವು ಬಹಳ ತೆಳುವೂ, ಸೂಕ್ಷ್ಮವೂ ಮತ್ತು ವಿನೀತವಾಗಿಯೂ ಇರುವುದು. ಅದು ಅಹಂಕಾರದ ಆರ್ಭಟಕ್ಕೆ ಮೌನವಾಗಿದ್ದು ಮೂಲೆಯಲ್ಲೇ ಅವಿತಿದ್ದುಬಿಡುವುದು.

ಅಹಮಿನ ತೃಪ್ತಿ ಮತ್ತು ಆನಂದದ ನಡುವಿನ ವ್ಯತ್ಯಾಸ ತಿಳಿದುಬಿಟ್ಟರೆ ಹೆಚ್ಚೂ ಕಡಿಮೆ ನಾವು ಅನುಭವಿಸುವುದು ಅಹಮಿನ ತೃಪ್ತಿಯೋ ಅಥವಾ ಆನಂದವೋ ಎಂದು ಒಂದು ಹಂತಕ್ಕೆ ನೋಡಿಕೊಳ್ಳಬಹುದು.

ಅಹಂಕಾರ ತನ್ನ ಸಂತೋಷವನ್ನು ಪಡೆಯಲು ಹೊರಗಿನ ಸಾಧನಗಳ ಮೇಲೆ ಅವಲಂಬಿತವಾಗಿರುತ್ತದೆ. ತನಗೆ ದೊರಕುವ ಪ್ರಶಂಸೆ, ಸ್ಥಾನಮಾನ, ಗೌರವ, ಪ್ರಶಸ್ತಿ, ಸನ್ಮಾನ ಮತ್ತು ಅಧಿಕಾರವೇ ಮೊದಲಾದ ಪಡೆಯುವುದನ್ನು ಆಧರಿಸಿರುತ್ತದೆ. ಆದರೆ ಅದು ತತ್ಕಾಲಿಕವಾಗಿರುತ್ತದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಪ್ರಶಂಸೆ, ಸನ್ಮಾನಗಳು, ಸ್ಥಾನಮಾನಗಳು ಸಿಗಲಿಲ್ಲವಿಂದರೆ ಅದರಿಂದ ದೊರೆತ ಸಂತೋಷವು ಹೊರಟು ಹೋಗುತ್ತದೆ. ಆಗಿನ ಸನ್ಮಾನಗಳು ಈಗಿನ ಅವಮಾನದಂತೆ ಕಾಣಿಸತೊಡಗುತ್ತದೆ. ತನ್ನನ್ನು ಯಾರೂ ಗುರುತಿಸುತ್ತಿಲ್ಲ, ಗೌರವಿಸುತ್ತಿಲ್ಲ, ನನ್ನ ಕೆಲಸಕ್ಕೆ ಮನ್ನಣೆ ಇಲ್ಲ ಎಂಬ ಖೇದ ಕಾಡತೊಡಗಿ ಅವರಿಗೆ ಖಿನ್ನತೆ ಆವರಿಸಲೂ ಸಾಧ್ಯ.

ಅಹಂಕಾರಕ್ಕೆ ನಿರಂತರವಾಗಿ ಪ್ರಶಂಸೆ, ಪ್ರಶಸ್ತಿಗಳು ಬರುತ್ತಲೇ ಇರಬೇಕು. ವಾಣಿಜ್ಯ ವ್ಯವಹಾರದಲ್ಲಿದ್ದಂತೆ ಒಮ್ಮೆ ಗಳಿಕೆ ನಿಂತು ಹೋದರೆ ಹೂಡಿಕೆ ನಷ್ಟವಾಗುತ್ತದೆ. ಲಾಭವಿರದೇ ಹೋದರೆ ನಷ್ಟವೆಂದೇ ಗಣನೆ. ನಾನು ಅಷ್ಟು ಕೆಲಸ ಮಾಡಿದೆ, ಸಾಧನೆ ಮಾಡಿದೆ, ಆದರೆ ನನಗೇನೂ ಮಾನ್ಯತೆ ಸಿಗಲಿಲ್ಲ ಎಂದು ದುಃಖಿತರಾಗುವವರು ಇವರೇ. ಇದನ್ನು ಅಹಂಕಾರ ಎಂದು ಒಪ್ಪಿಕೊಂಡರೆ ಅವರ ಅಹಂಕಾರಕ್ಕೆ ಪೆಟ್ಟಾಗುವುದರಿಂದ ‘ಯಾರಿಗೇ ಆಗಲಿ ಅವರ ಕೆಲಸಕ್ಕೆ ಗೌರವ ಸಿಗಲಿಲ್ಲವೆಂದರೆ ಅಥವಾ ಕೆಲಸ ಮಾಡಿದವರಿಗೆ ಮಾನ್ಯತೆ ದೊರಕಲಿಲ್ಲ ಎಂದರೆ ಸಹಜವಾಗಿ ನೋವಾಗುವುದು’ ಎಂದು ತಮ್ಮ ಅಹಮಿನ ಅತೃಪ್ತಿಯನ್ನು ಸಹಜವೆನ್ನುವ ಮೂಲಕ ಸಾಮಾನ್ಯಗೊಳಿಸುತ್ತಾರೆ.

ಅಹಮಿನ ವಿಷಯದಲ್ಲಿ ತಮಾಷೆಯ ವಿಷಯವೆಂದರೇನೇ ಅಹಂಕಾರವು ತನ್ನನ್ನು ಅಹಂಕಾರವೆಂದೇ ಗುರುತಿಸಿಕೊಳ್ಳಲು ಸಿದ್ಧವಿರುವುದಿಲ್ಲ. ಬದಲಿಗೆ ಸಕಾರಾತ್ಮಕದ ಮಾನ್ಯತೆ ಮತ್ತು ಕೀರ್ತಿ ಇರುವ ಸ್ವಾಭಿಮಾನವನ್ನು ತಾನೆಂದು ಹೇಳಿಕೊಳ್ಳುತ್ತದೆ. ಅಲ್ಲಿಗೆ ಅಹಮಿಗೆ ತನ್ನತನವೆಂದು ತಪ್ಪಾದ ಗುರುತಿನ ಚೀಟಿಯನ್ನು ನೀಡಲಾಗುವುದು.

ಎಂತದ್ದೇ ಯಶಸ್ಸು, ಪ್ರಶಂಸೆ ಮತ್ತು ಪ್ರಶಸ್ತಿ ಬಂದರೂ ಅದರಿಂದ ಉಬ್ಬುವ ಸಂತೋಷದ ಭಾವ, ರೋಮಾಂಚನ, ಪುಳಕಗಳೆಲ್ಲಾ ತಳಕ್ಕಿಳಿದು ಮೊದಲಿನ ಮನೋಲಹರಿಗೇ ಬರುವುದು ಮನೋವೈಜ್ಞಾನಿಕವಾಗಿ ಸಹಜವಾದಂತಹ ವಿಷಯ. ಇದನ್ನು ಮನೋವಿಜ್ಞಾನಿಗಳು ಹೆಡೋನಿಕ್ ಅಡಾಪ್ಟೇಶನ್ ಅಥವಾ ಸಹಜ ಲಹರಿಯ ಹೊಂದಾಣಿಕೆ ಎನ್ನುತ್ತಾರೆ. ಆದರೆ ಅಹಂಕಾರಿಗಳ ಸಮಸ್ಯೆ ಎಂದರೆ ಆ ಸಹಜ ಲಹರಿಯ ಹೊಂದಾಣಿಕೆಯನ್ನು ಹೊಂದಲು ಇಷ್ಟ ಪಡದೇ ಮತ್ತಷ್ಟು, ಮಗದಷ್ಟು ಪ್ರಶಸ್ತಿ, ಸನ್ಮಾನ, ಪ್ರಶಂಸೆಯೇ ಮೊದಲಾದ ಬಹಿರಂಗದಿಂದ ದೊರಕುವ ಮಾನ್ಯತೆಗಳ ಬೆನ್ನತ್ತುತ್ತಾರೆ. ಸಹಜ ಲಹರಿಯ ಶಾಂತಿಯನ್ನು ಪಡೆಯುವುದೇ ಇಲ್ಲ.

ಹೊರಗಿನ ಕಣ್ಣುಗಳಿಗೆ ಅಹಂಕಾರವು ಬಹಳ ಜೋರಾಗಿ ಕಾಣುವುದಾದರೂ ಆಂತರಿಕವಾಗಿ ಅವರ ಮನಸ್ಸು ಅಭದ್ರತೆಯಿಂದ ಕೂಡಿರುತ್ತದೆ. ಹಾಗಾಗಿಯೇ ಅವನ ಅತೃಪ್ತಿಯ ಹಸಿವಿಗೆ ಸದಾ ಹೊರಗಿನಿಂದ ಉಣಬಡಿಸುತ್ತಲೇ ಇರಬೇಕಾಗುತ್ತದೆ. ತನಗೇ ಅಡುಗೆ ಮಾಡಿಕೊಳ್ಳಲು ಬಾರದು. ನಿಜವಾದ ಭದ್ರತೆಯನ್ನು ಆಂತರಿಕವಾಗಿ ಹೊಂದಿರುವವನು ತನ್ನ ಮಾನ್ಯತೆಗೆ ಹೊರಗಿನ ಮಾನದಂಡವನ್ನು ಆಶ್ರಯಿಸುವುದೇ ಇಲ್ಲ.
ವ್ಯಕ್ತಿ ತನ್ನ ಜೀವನಾನುಭವ, ಶಾಂತಿ, ಆನಂದ, ತೃಪ್ತಿ, ನೋವು, ನಲಿವು, ಸೋಲು, ಗೆಲುವು ಇತ್ಯಾದಿಗಳೆಲ್ಲವೂ ತನ್ನ ಕ್ರಿಯೆ, ಹೊಣೆಗಾರಿಕೆ, ಕೆಲಸ, ಶ್ರಮ, ನಿರ್ಧಾರ ಮತ್ತು ಆಯ್ಕೆ ಇವುಗಳಿಂದ ಆಗುತ್ತದೆ ಎಂದು ಗ್ರಹಿಸುತ್ತಾನೆಯೋ ಅಥವಾ ಗ್ರಹಚಾರ, ಅದೃಷ್ಟ, ವಿಧಿ ಅಥವಾ ಇತರರ ಪ್ರಭಾವಗಳಿಂದ ಆಗುತ್ತದೆ ಎಂದು ಗ್ರಹಿಸುತ್ತಾನೋ ಅದನ್ನು ಪರಿಣಾಮದ ಹತೋಟಿ ಅಥವಾ ಲೋಕಸ್ ಆಫ್ ಕಂಟ್ರೋಲ್ ಎನ್ನುತ್ತಾರೆ.

ಪರಿಣಾಮದ ಆಂತರಿಕ ಹತೋಟಿಯನ್ನು ಒಪ್ಪಿರುವವರಿಗೆ ತಮ್ಮೊಳಗೇ ಶಾಂತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ತಮ್ಮ ಮೌಲ್ಯವನ್ನು ತಾವೇ ಗ್ರಹಿಸಿರುತ್ತಾರೆ. ತಮ್ಮ ನೋವು ನಲಿವುಗಳಿಗೆ ತಾವೇ ಹೊಣೆಗಾರರು ಎಂಬುದನ್ನು ಒಪ್ಪಿರುತ್ತಾರೆ. ಇವರು ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ಹೊರಗೆ ಹುಡುಕುವುದಿಲ್ಲ.
ಪರಿಣಾಮದ ಬಾಹ್ಯ ಹತೋಟಿಯನ್ನು ಒಪ್ಪಿರುವವರು ಸಂತೋಷ ಮತ್ತು ನೆಮ್ಮದಿಗಾಗಿ ಸದಾ ಹೊರಗೆಯೇ ಹುಡುಕಾಡುತ್ತಿರುತ್ತಾರೆ. ಅಲ್ಲೆಲ್ಲೋ ಹೋದರೆ ನೆಮ್ಮದಿ, ಕಷ್ಟ ಕಳೆಯುತ್ತದೆ, ಇನ್ನೇನೋ ಮಾಡಿದರೆ ನಮ್ಮ ಮನಸ್ಸಿನ ಅಭಿಲಾಷೆ ನೆರವೇರುತ್ತದೆ; ಹೀಗೆ ಪ್ರತಿಯೊಂದಕ್ಕೂ ಹೊರಗೆಯೇ ಹುಡುಕುವುದು.

Podcast: ಜಾತಿ ಗಣತಿನ ಕಸದ ಬುಟ್ಟಿಗೆ ಎಸೆದ್ರಾ ರಾಹುಲ್‌ , ಸಿದ್ದು, ಡಿಕೆಶಿ..? #pratidhvani

ಹೊರಗಿನಿಂದ ಆನಂದ ಸಿಗುವುದು ಎನ್ನುವುದಾದರೆ ಅದು ಯಾವುದನ್ನೋ ಅಥವಾ ಯಾರನ್ನೋ ಅವಲಂಬಿಸಿರುತ್ತದೆ. ಅದು ಅಥವಾ ಅವರು ಸಿಗದೇ ಹೋದರೆ, ಅಥವಾ ವ್ಯಕ್ತಿಯ ನಿರೀಕ್ಷೆಯನ್ನು ಪೂರೈಸದಿದ್ದರೆ ಸಂತೋಷ ಮತ್ತು ನೆಮ್ಮದಿ ಸಿಗುವುದಿಲ್ಲ.

ಒಟ್ಟಾರೆ ಅಹಂಕಾರ ಎನ್ನುವುದು ಮನಸ್ಸಿನ ಅಭದ್ರತೆಯ ಒಂದು ಅಧಿಕಾರಯುತವಾದ ಮುಖವಾಡ. ಅಹಮಿನ ವೇಷವನ್ನು ಬದಲಾಯಿಸಲು ಹೆಣಗಾಡಿದಷ್ಟೂ ಒತ್ತಡ, ಅಪ್ರಕಟಿತ ಖಿನ್ನತೆ ಮತ್ತು ಆತಂಕಗಳು ಹೆಚ್ಚಾಗುವುದೇ ಹೊರತು ತನ್ನೊಳಗಿನ ಆನಂದವನ್ನು ಕಂಡುಕೊಳ್ಳಲು ಆಗುವುದಿಲ್ಲ.
ನಿರಾಳವಾಗಿರುವವನು ನಲಿವಿನಿಂದ ಕೂಡಿರುವನು.
ನಿರಾಳವಾಗಿರುವುದಕ್ಕೆ ಮೊದಲ ಸೂತ್ರವೇ ನಿರಹಂಕಾರ.

Tags: after a flash marriage i became the mafia boss’s belovedbehind the sciencebuddhism for youcaptive love from the mob bosslearn the buddhismspoiled by the boss chinese dramathe third master dotes on methree ways to destroy your enemywhen the narcissist can't control youwhen the narcissist loses control of youyou are not the fatheryou are the father
Previous Post

ಅಪ್ಪಂದಿರ ದಿನಕ್ಕೆ ಬಿಜೆಪಿ ವಿಶೇಷ ಗೀತೆ – ಪುನೀತ್ ನೆನೆದು ಭಾವುಕರಾದ ಜಗ್ಗೇಶ್ 

Next Post

ವಿರೋಧಿಗಳಿಗೆ ಹೆಚ್.ಡಿ.ದೇವೇಗೌಡರ ತಿರುಗೇಟು

Related Posts

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
0

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್ಖರ್ಗೆ ಭಾಗಿ - ಏವಿಯೇಷನ್ ನಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದ ಪ್ರಿಯಾಂಕ್ https://youtu.be/hWOHlkSh63g ParisAirShow ನಲ್ಲಿ ಭಾರತ ಮತ್ತು ವಿಶೇಷವಾಗಿ...

Read moreDetails

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

June 17, 2025
Next Post
ವಿರೋಧಿಗಳಿಗೆ ಹೆಚ್.ಡಿ.ದೇವೇಗೌಡರ ತಿರುಗೇಟು

ವಿರೋಧಿಗಳಿಗೆ ಹೆಚ್.ಡಿ.ದೇವೇಗೌಡರ ತಿರುಗೇಟು

Recent News

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Top Story

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

by ಪ್ರತಿಧ್ವನಿ
June 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada