ನನ್ನ ಕ್ಷೇತ್ರದಲ್ಲಿ ಮಿತಿ ಮೀರಿದ ದಾಂಧಲೆ ನಡೆಯುತ್ತಿದೆ ಎಮನದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ. ಮಾಧ್ಯಮಗಳ ಮುಂದೆ ಇಂದು ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಹೇಳುವವರು ಇಲ್ಲ, ಕೇಳುವವರು ಇಲ್ಲ. ದಾಂಧಲೆ ಮಿತಿ ಮೀರಿದೆ.
![](https://pratidhvani.com/wp-content/uploads/2024/04/DSC6370-1024x868.jpg)
ಕಳೆದ ವಾರ 15 ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ನನ್ನ ಗಮನಕ್ಕೆ ಬಂದ ಬಳಿಕ ಪ್ರಕರಣ ದಾಖಲಿಸಿದ್ದೇನೆ. ಆ ಬಾಲಕಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕಿದೆ. ನನಗೆ ಇತ್ತೀಚೆಗೆ ಅತ್ಯಾಚಾರ ಬಗ್ಗೆ ವಿಡಿಯೋ ಬಂದಿದೆ. ಅದನ್ನ ನಂದಿನಿಲೇಔಟ್ ಪೊಲೀಸರಿಗೆ ಕಳಿಸಿದ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ಒಂದು ವಾಹನ ವಶಕ್ಕೆ ಪಡೆದಿದ್ದಾರೆ.
ಬಾಲಕಿಯನ್ನ ವಿಚಾರಣೆ ಮಾಡಿ, ಬಂಧನ ಮಾಡಿದ್ದಾರೆ. ಇದಾದ ಮೇಲೆ ಬಾಲಕಿಯನ್ನ ಬೆದರಿಸಿದ್ದಾರೆ. ದೂರು ವಾಪಸ್ ಪಡೆಯದಿದ್ರೆ ಮನೆಯವರ ಹತ್ಯೆ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ.
![](https://pratidhvani.com/wp-content/uploads/2024/04/pro.webp)
ಅತ್ಯಾಚಾರಕ್ಕೊಳಗಾದ ಬಾಲಕಿ 15 ವರ್ಷ. ಫಸ್ಟ್ ಕ್ಲಾಸ್ನಲ್ಲಿ SSLC ಪಾಸ್ ಆಗಿದ್ದಾಳೆ. ಬಾಲಕಿ ಮತ್ತು ತಮ್ಮ ಇಬ್ಬರು ನಡೆದು ಹೋಗುವಾಗ, ತಮ್ಮನ ಬಟ್ಟೆ ಹರಿದಿದ್ದಾರೆ. ಹೊಸ ಬಟ್ಟೆ ಕೊಡಿಸುವುದಾಗಿ ಹೇಳಿ, ಇಬ್ಬರನ್ನೂ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ.
ಅತ್ಯಾಚಾರ ಮಾಡಿದವನು ಮೂರು ಮದುವೆ ಆಗಿದ್ದಾನೆ. ನಮ್ಮ ಕ್ಷೇತ್ರದಲ್ಲಿ ಮಿತಿಮೀರಿದ ದೌರ್ಜನ್ಯ ನಡೆಯುತ್ತಿದೆ ಎಂದು ಮುನಿರತ್ನ ಆರೋಪಿಸಿದ್ದಾರೆ.