• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿಶೇಷ

ದೇಹ ಮಾರಿಕೊಂಡು ಊರು ಉದ್ಧಾರದ ಕನಸು ಕಂಡ ಕೆಂಚಮ್ಮಳಿಗೆ ಈಗ ದೇವಸ್ಥಾನ ನಿರ್ಮಾಣ ; ಇಲ್ಲಿ ನಿತ್ಯ ಪೂಜೆ!

ರಾಕೇಶ್ ಬಿಜಾಪುರ್ by ರಾಕೇಶ್ ಬಿಜಾಪುರ್
January 4, 2022
in ವಿಶೇಷ
0
ದೇಹ ಮಾರಿಕೊಂಡು ಊರು ಉದ್ಧಾರದ ಕನಸು ಕಂಡ ಕೆಂಚಮ್ಮಳಿಗೆ ಈಗ ದೇವಸ್ಥಾನ ನಿರ್ಮಾಣ ; ಇಲ್ಲಿ ನಿತ್ಯ ಪೂಜೆ!
Share on WhatsAppShare on FacebookShare on Telegram

ದೇವದಾಸಿ ಅನ್ನೋ ಅನಿಷ್ಟ ಪದ್ದತಿ ನಮ್ಮ ಸಮಾಜದಲ್ಲಿ ಸಾಮಾಜಿಕ ಪಿಡುಗು ಎಂದೇ ವ್ಯಾಖ್ಯಾನಿಸಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಯಾವುದೋ ನಂಬಿಕೆಯ ಮೇಲೆ ಅಥವಾ ಮೂಢನಂಬಿಕೆ ಮೇಲೆ ಹೆಣ್ಣನ್ನು ದೇವದಾಸಿಯನ್ನಾಗಿ ಮಾಡಲಾಗುತ್ತಿದೆ. ಜೀವನ ಅನ್ನೋದು ಏನು ಅಂತಾ ತಿಳಿಯುವ ಮುನ್ನವೇ ಆಕೆ ದೇಹ ಮಾರಿಕೊಂಡು ಜೀವನ ನಡೆಸಬೇಕಾದಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲೂ ಬಾಳಿ ಬದುಕಿದ ದೇವದಾಸಿ ಮಹಿಳೆ, ಕೊನೆಗೆ ಇಡೀ ಸಮಾಜಕ್ಕೆ ದಾರಿ ದೀಪವಾಗುತ್ತಾಳೆ. ಸಮಾಜದ ಬಾಳಿಗೆ ಬೆಳಕಾದ ಆ ದೇವದಾಸಿ ಮಹಿಳೆಗೊಂದು ದೇವಸ್ಥಾನ ನಿರ್ಮಾಣ ಮಾಡಿ ಅಲ್ಲಿ ನಿತ್ಯ ಪೂಜೆ ಮಾಡಲಾಗುತ್ತಿದೆ.

ADVERTISEMENT

ಹೌದು. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ದೇವದಾಸಿ ಕೆಂಚವ್ವ. ಎಲ್ಲೆಡೆ ಮಹಾತ್ಮರಿಗೆ, ಆಧ್ಯಾತ್ಮ ಸಾಧಕರಿಗೆ ಇರುವಂತೆ ಕೆಂಚಮ್ಮಳಿಗೆ ದೇಗುಲವಿದೆ. ಈ ದೇಗುಲದಲ್ಲಿ ಕೆಂಚಮ್ಮಳ ಗದ್ದುಗೆ ಕೂಡ ಇದೆ. ನೀವು ನಂಬುತ್ತಿರೋ ಇಲ್ಲವೋ ಒಂದು ಕಾಲದಲ್ಲಿ ವೇಶ್ಯೆಯಾಗಿ ಬದುಕಿನ ಎಲ್ಲ ಸುಖಭೋಗಗಳನ್ನ ಪಾದದ ಕೆಳಗೆ ಹಾಕಿ ಅನುಭವಿಸಿದ್ದ ಕೆಂಚಮ್ಮಳಿಗೆ ಇವತ್ತು ದೈವ ಸ್ವರೂಪಿಯಾಗಿದ್ದಾಳೆ.

ಪ್ರತಿ ನಿತ್ಯ ದೇವರಿಗೆ ಪೂಜೆ ಸಲ್ಲುವುದರ ಜೊತೆ ಜೊತೆಗೆ ಕೆಂಚಮ್ಮಳ ಗದ್ದುಗೆಗೂ ಪೂಜೆ ಸಲ್ಲಿಸಲಾಗುತ್ತಿದೆ. ನೋಡುವುದಕ್ಕೆ ಸ್ಪುರದೃಪಿಯಾಗಿದ್ದ ಕೆಂಚಮ್ಮ ವೃತ್ತಿಯಲ್ಲಿ ವೇಶ್ಯೆಯಾಗಿದ್ದವಳು. ದೇವದಾಸಿ ಪದ್ದತಿಗೆ ಒಳಗಾಗಿದ್ದ ಕಾರಣ ಜೀವನ ನಿರ್ವಹಣೆಗೆ ಬೇರೆ ದಾರಿ ಕಾಣದೇ ಮುಂಬೈ ಕಾಮಾಟಿಪುರದಲ್ಲಿ ದೇಹ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ದೊಡ್ಡ ದೊಡ್ಡ ಶ್ರೀಮಂತರು, ರಾಜಕಾರಣಿಗಳು ಕೆಂಚಮ್ಮಳ ಸೌಂದರ್ಯಕ್ಕೆ ಮನಸೋತ್ತಿದ್ದರು.

ವೇಶ್ಯಾವಾಟಿಕೆಯಿಂದ ಲಕ್ಷ ಲಕ್ಷ ಹಣ ಸಂಪಾದನೆ ಮಾಡಿದ್ದಳು. ಆದರೆ ಆಕೆ ಸಂಪಾದಿಸಿದರ ಹಣದಿಂದ ಐಶಾರಾಮಿ ಜೀವನ ನಡೆಸಬಹುದಿತ್ತು. ಆದರೆ ಕೆಂಚಮ್ಮ ಹಾಗೇ ಮಾಡದೇ ದೇವದಾಸಿ ಪದ್ದತಿಯಿಂದ ತಾನು ಅನುಭವಿಸಿದ ಕಷ್ಟ ಇತರರು ಅನುಭವಿಸಬಾರದು ಎಂದು ಸಂಕಲ್ಪ ಮಾಡಿದಳು. ಅದಕ್ಕಾಗಿ ಆಕೆ ದುಡಿದ ಹಣವನ್ನೆಲ್ಲ ಸಮಾಜಕ್ಕೆ ಅರ್ಪಣೆ ಮಾಡಿದಳು. ತನ್ನ ವೃತ್ತಿಯಿಂದ ಬಂದ ಲಕ್ಷಾಂತರ ಹಣದಿಂದ ಸುಖಮಯ ಜೀವನ ನಡೆಸಬಹುದಿತ್ತು. ತನ್ನ ಬಂಧು ಭಾಂಧವರಿಗೆ ಆಸ್ತಿ ಪಾಸ್ತಿ ಮಾಡಬಹುದಾಗಿತ್ತು. ಆದ್ರೆ ಕೆಂಚಮ್ಮ ಬದುಕಲ್ಲಿ ಮೈಮಾರಿ ಕೋಟಿ-ಕೋಟಿ ಸಂಪಾದಿಸಿದರು ಕೊನೆಗೆ ಶರಣಾಗಿದ್ದು ಸನ್ಯಾಸತ್ವಕ್ಕೆ!

ಕೆಂಚಮ್ಮ ಮೂಲತ ಬಾಗಲಕೋಟೆ ಜಿಲ್ಲೆ ಕೊಣ್ಣೂರದವಳು. 1882 ರಲ್ಲಿ ಜನಿಸಿದ ಕೆಂಚಮ್ಮ ಚಿಕ್ಕ ವಯಸ್ಸಿನಲ್ಲೆ ದೇವದಾಸಿ ಪದ್ದತಿಗೆ ಬಲಿಯಾದವಳು. ಕಾಖಂಡಕಿ ಗ್ರಾಮದಲ್ಲಿದ್ದ ತನ್ನ ಸಂಬಂಧಿ ಜೊತೆಗೆ ಮುಂಬೈಗೆ ತೆರಳಿ ವೇಶಾವಾಟಿಯಲ್ಲಿ ತೊಡಗಿದಳು. ಅಲ್ಲಿ ಸಾಕಷ್ಟು ಹಣ ಗಳಿಸಿದ ಕೆಂಚಮ್ಮಳಿಗೆ ಈ ವೃತ್ತಿ ಸಾಕು ಎನಿಸುತ್ತದೆ. ಆ ಹೊತ್ತಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪವಾಡ ಪುರುಷರಾಗಿದ್ದ ಭೀಮಾನಂದ ಶ್ರೀಗಳು ಜನ ಜನಿತರಾಗಿದ್ದರು. ಮುಂಬೈ ವೇಶಾವಾಟಿಕೆ ಗೃಹ ಬಿಟ್ಟು ಕಾಖಂಡಕಿಗೆ ಬಂದಿದ್ದ ಕೆಂಚಮ್ಮ ಶ್ರೀಗಳನ್ನು ನೋಡಿ ಆಧ್ಯಾತ್ಮಿಕತೆ ಕಡೆಗೆ ಒಲವು ಹೊಂದುತ್ತಾಳೆ. ಐಶಾರಾಮಿ ಜೀವನ ಸಾಕು ಎಂದು ತನ್ನ ಬಳಿಯಿದ್ದ ಚಿನ್ನಾಭರಣ, ಹಣವನ್ನು ಸಮಾಜ ಕಾರ್ಯಕ್ಕೆ ಉಪಯೋಗಿಸಿದಳು.

ಕಾಖಂಡಕಿಯಲ್ಲಿ ತನ್ನ ಗುರುಗಳಾದ ಭೀಮಾಶಂಕರ ಸ್ವಾಮೀಜಿಗಳಿಗೆ ಗದ್ದುಗೆ ಕಟ್ಟಿಸಿದಳು. ತಾನು ಸಹ ಜೀವಂತ ಇರುವಾಗಲೇ ಗುರುಗಳ ಗದ್ದುಗೆ ಬಳಿಯಲ್ಲಿ ತನ್ನ ಸಮಾಧಿ ನಿರ್ಮಿಸಿಕೊಂಡಿದ್ದಳು. ದೇವದಾಸಿ ಕೆಂಚಮ್ಮ ಕಾಖಂಡಕಿ ಗ್ರಾಮಕ್ಕೆ ಬಂದು ನೆಲೆಸಿದ ಬಳಿಕ ಸಾಮಾಜಿಕವಾಗಿ ಹಲವು ಬದಲಾವಣೆಗೆ ಕಾರಣಳಾದಳು.

ಈ ಭಾಗದಲ್ಲಿ ದೇವದಾಸಿ ಪದ್ದತಿ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದಳು. ದೇವದಾಸಿ ಅನ್ನೋ ಅನಿಷ್ಟ ಪದ್ಧತಿಯಿಂದ ಜೀವನದಲ್ಲಿ ತಾನು ಅನುಭವಿಸಿದ ಕಷ್ಟಗಳನ್ನ ಜನರ ಮುಂದೆ ತೆರೆದಿಟ್ಟಲು. ಗ್ರಾಮದಲ್ಲಿ ಸಾಮೂಹಿಕ ವಿವಾಹಗಳ ಮೂಲಕ ದೇವದಾಸಿ ಪದ್ಧತಿ ನಿರ್ಮೂಲನೆಗೆ ಶ್ರಮಿಸಿದಳು. ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ಶಾಲಾ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದಳು. ಜನರಲ್ಲಿ ವೈಮಾನಿಕ ವಿಚಾರಗಳು ಬೆಳೆಯಲಿ ಅನ್ನೋ ಕಾರಣಕ್ಕೆ ಬಬಲೇಶ್ವರದಲ್ಲಿನ ಶಾಂತವೀರ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ಮಂದಿರ ನಿರ್ಮಾಣ ಮಾಡಲು ಕೈ ಜೋಡಿಸಿದಳು. ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡಿದಳು. ಇಂದಿಗೂ ಶಾಂತವೀರ ಶಿಕ್ಷಣ ಸಂಸ್ಥೆಯ ಕಟ್ಟಡದ ಮೇಲೆ ದೇವದಾಸಿ ಕೆಂಚಮ್ಮಳ ಹೆಸರು ಕಾಣಬಹುದಾಗಿದೆ.

ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಕೊಡುಗೆ ಅಪಾರ

ದೇಹ ಮಾರಿಕೊಂಡು ಊರು ಉದ್ದಾರದ ಕನಸು ಕಂಡ ಕೆಂಚಮ್ಮಳಿಗೆ ಈಗ ದೇವಸ್ಥಾನ ನಿರ್ಮಾಣ ; ಇಲ್ಲಿ ನಿತ್ಯ ಪೂಜೆ! | Vijayapura

ಆಗಿನ ಕಾಲದಲ್ಲಿ ಕಾಖಂಡಕಿ ಗ್ರಾಮದಲ್ಲಿ ಶಿವನ ಮಂದಿರ, ಸಮೀಪದ ಹರಳಯ್ಯನ ಗುಂಡದಲ್ಲಿ ಸಮುದಾಯ ಭವನ, ತಿಡಗುಂದಿಯಲ್ಲಿ ತನ್ನ ಗುರುವಿನ ಮಠಕ್ಕಾಗಿ ಹತ್ತಾರು ಎಕರೆ ಜಮೀನು ಲೆಕ್ಕವಿಲ್ಲದಷ್ಟು ನೆರವಿನ ಹಸ್ತ ಚಾಚಿದಳು. ವಿಧವೆಯರಿಗೆ ಹಾಗೂ ದೇವದಾಸಿ ಪದ್ದತಿಯಿಂದ ಹೊರ ಬಂದವರಿಗೆ ಹಣ ಸಂದಾಯ ಸೇರಿದಂತೆ ಸಾಮಾಜಿಕ ಕಾರ್ಯ ಮಾಡುವ ಮೂಲಕ ಈ ಭಾಗದಲ್ಲಿ ನಿತ್ಯವೂ ಪೂಜೆಗೆ ಒಳಗಾಗುತ್ತಿದ್ದಾಳೆ. 1972 ದೇವದಾಸಿ ಕೆಂಚಮ್ಮ ಇಹಲೋಕ ತ್ಯಜಿಸಿದಳು.

ಇವತ್ತು ನಮ್ಮ ದುಡಿಮೆ, ನಮ್ಮ ಸಂಪಾದನೆ ನಮ್ಮ ಕುಟುಂಬಕ್ಕೆ ಮಾತ್ರ ವಾಗಿದೆ. ಸಂಪಾದನೆಯ ವಿಷಯದಲ್ಲಿ ಸ್ವಾರ್ಥವಾಗುವ ಪ್ರತೀ ಮನುಷ್ಯರ ಸ್ವಾರ್ಥ ಯೋಚನೆಯ ನಡುವೆ ದೇವದಾಸಿ ಕೆಂಚಮ್ಮ ಸಾಮಾಜಿಕ ಅಭಿವೃದ್ದಿಯಂತಹ ಆಲೋಚನೆಗಳು ನಿಜಕ್ಕೂ ಅದ್ಭುತ. ದೇಹ ಮಾರಿಕೊಂಡು ಊರು ಉದ್ದಾರದ ಕನಸು ಕಂಡಿದ್ದ ಕೆಂಚಮ್ಮಳ ಸಾಮಾಜಿಕ ಕಾರ್ಯ ಮೆಚ್ಚುವಂತದ್ದು.

Tags: ಆಧ್ಯಾತ್ಮಊರು ಉದ್ದಾರಕಾಖಂಡಕಿ ಗ್ರಾಮಕೆಂಚಮ್ಮದೇವದಾಸಿ ಕೆಂಚವ್ವದೇವಸ್ಥಾನದೇಹಬಬಲೇಶ್ವರಮಹಾತ್ಮರಿಗೆಮಾರಿಕೊಂಡು
Previous Post

ರಾಜ್ ಶೆಟ್ಟಿಗೆ ಶಿವಣ್ಣ ಚಮಕ್ : ನೀನೇನ್ ದೊಡ್ ಡಾನಾ?

Next Post

“500 ರೈತರು ನನಗಾಗಿ ಸತ್ತಿದ್ದಾರಾ?” ಪ್ರಧಾನಿ ಮೋದಿ ಹೇಳಿಕೆ ಬಿಜೆಪಿ ನಾಲಗೆಗೆ ಲಕ್ವಾ ಹೊಡೆದಂತೆ ಕೂತಿದೆ!

Related Posts

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
0

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂ ಧುಮ್ಮಿಕ್ಕಲು ಆರಂಭಿಸಿವೆ.. ಇವುಗಳ ರುದ್ರನರ್ತನ ನೋಡಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ. ಜಿಲ್ಲೆಯಲ್ಲಿ ಹತ್ತಾರು ಜಲಪಾತಗಳಿದ್ದರೂ ಕೆಲವೇ ಕೆಲವು ಜಲಪಾತಗಳು ಮಾತ್ರ...

Read moreDetails

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

June 14, 2025

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸಚಿವ ಕೆ.ಜೆ.ಜಾರ್ಜ್ ಸೂಚನೆ

June 14, 2025

ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯ ಪಥ, ಅಭಿವೃದ್ಧಿಯ ರಥ: ಡಿಸಿಎಂ ಡಿ.ಕೆ. ಶಿವಕುಮಾರ್

June 14, 2025

ಮೂರು ವರ್ಷದಲ್ಲಿ 13000 ಕೋಟಿ KKRDB ಗೆ ನಮ್ಮ ಸರ್ಕಾರ ನೀಡಿ ದಾಖಲೆ ನಿರ್ಮಿಸಿದೆ: ಸಿಎಂ

June 14, 2025
Next Post
“500 ರೈತರು ನನಗಾಗಿ ಸತ್ತಿದ್ದಾರಾ?” ಪ್ರಧಾನಿ ಮೋದಿ ಹೇಳಿಕೆ ಬಿಜೆಪಿ ನಾಲಗೆಗೆ ಲಕ್ವಾ ಹೊಡೆದಂತೆ ಕೂತಿದೆ!

“500 ರೈತರು ನನಗಾಗಿ ಸತ್ತಿದ್ದಾರಾ?” ಪ್ರಧಾನಿ ಮೋದಿ ಹೇಳಿಕೆ ಬಿಜೆಪಿ ನಾಲಗೆಗೆ ಲಕ್ವಾ ಹೊಡೆದಂತೆ ಕೂತಿದೆ!

Please login to join discussion

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada