ಅಕ್ರಮ ಗಣಿಗಾರಿಕೆಗೆ (Illegal mining) ಸಂಬಂಧಪಟ್ಟಂತೆ ಸಿಬಿಐ ಕೇಸಲ್ಲಿ (CBI) ಬಂಧನವಾಗಿದ್ದ ಶಾಸಕ ಜನಾರ್ದನ ರೆಡ್ಡಿಗೆ (Janardan reddy) ಸದ್ಯ ತೆಲಂಗಾಣ ಹೈಕೋರ್ಟ್ (Telangana highcourt) ರಿಲೀಫ್ ನೀಡಿದ್ದು, ಸದ್ಯ ಜೈಲುವಾಸದಿಂದ ಬಚಾವಾಗಿದ್ದಾರೆ.

ಈ ಬೆನ್ನಲೇ ದೈವ ನುಡಿದ ಭವಿಷ್ಯ ಒಂದರ ವಿಡಿಯೋ ವೈರಲ್ ಆಗಿದೆ. ಜನಾರ್ದನ ರೆಡ್ಡಿ ಬಿಡುಗಡೆ ಬಗ್ಗೆ ದೈವದ ಬಳಿ ಬೆಂಬಲಿಗರು ಪ್ರಶ್ನೆ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಸತ್ಯದ ದೈವಸ್ಥಾನ ಅರೇಲ್ತಾಡಿ ಶ್ರೀ ಉಲ್ಲಾಕ್ಳು ಕೆಡೆಂಜೊಡಿತ್ತಾಯಿ ದೇವಸ್ಥಾನದಲ್ಲಿ ಈ ಪ್ರಶ್ನೆ ಕೇಳಲಾಗಿತ್ತು.

ಮೇ ತಿಂಗಳ 15ರಂದು ನಡೆದ ನೇಮೋತ್ಸವ ಕಾರ್ಯಕ್ರಮದಲ್ಲಿ ದೈವದ ಬಳಿ ಗ್ರಾಮಸ್ಥರು ಜನಾರ್ದನ ರೆಡ್ಡಿ ಕುರಿತಾಗಿ ಪ್ರಶ್ನೆ ಕೇಳಿದಾಗ ದೈವ ನುಡಿದ ಭವಿಷ್ಗ ನಿಜವಾಗಿದೆ.ಜನಾರ್ಧನ ರೆಡ್ಡಿ ಅವರು ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವ ಅಂದೇ ನುಡಿದಿತ್ತು. ಹೀಗಾಗಿ ದೈವ ನುಡಿದಂತೆ 27 ದಿನಗಳಲ್ಲಿ ಜನಾರ್ಧನ ರೆಡ್ಡಿ ರಿಲೀಸ್ ಆಗಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶಾಸಕ ಜನಾರ್ದನ ರೆಡ್ಡಿ, ಇದು ಕಾರ್ಣಿಕ ದೈವ ಕೆಡೆಂಜೊಡಿತ್ತಾಯಿ ದೈವದ ಅನುಗ್ರಹ ಎಂದು ಬರೆದುಕೊಂಡಿದ್ದಾರೆ.






