• Home
  • About Us
  • ಕರ್ನಾಟಕ
Wednesday, October 29, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ನಾಪತ್ತೆ ಆಗಿರುವ ನಿರೂಪಕಿ ದಿವ್ಯಾ ವಸಂತ ಎಲ್ಲಿದ್ದಾಳೆ ಗೊತ್ತಾ ?

ಪ್ರತಿಧ್ವನಿ by ಪ್ರತಿಧ್ವನಿ
July 8, 2024
in ಇದೀಗ, ಕರ್ನಾಟಕ, ವಿಶೇಷ, ಶೋಧ
0
ನಾಪತ್ತೆ ಆಗಿರುವ ನಿರೂಪಕಿ ದಿವ್ಯಾ ವಸಂತ ಎಲ್ಲಿದ್ದಾಳೆ ಗೊತ್ತಾ ?
Share on WhatsAppShare on FacebookShare on Telegram

ತನ್ನ ಬ್ಲಾಕ್‌ ಮೇಲ್‌ ದಂಧೆ ಬಯಲಿಗೆ ಬರುತಿದ್ದಂತೆಯೇ ಇಬ್ಬರು ಸಹಚರರ ಜತೆ ಮನೆಯಿಂದ ಲ್ಯಾಪ್‌ ಟಾಪ್‌ ಹಾಗೂ ಕಾರಿನಲ್ಲಿ ಹೊರಟ ಟಿವಿ ನಿರೂಪಕಿ ದಿವ್ಯಾ ವಸಂತ ಈವರೆಗೂ ಪೋಲೀಸರಿಗೆ ಸಿಕ್ಕಿಲ್ಲ.
ಈಕೆಯ ಲ್ಯಾಪ್‌ ಟಾಪ್‌ ನಲ್ಲಿ ನೂರಾರು ವೀಡಿಯೋಗಳಿದ್ದು ಅವುಗಳನ್ನು ಬಳಸಿಯೇ ವೈದ್ಯರು, ಪಬ್‌ , ಮಸಾಜ್‌ ಸೆಂಟರ್‌ ಗಳ ಮಾಲೀಕರನ್ನು ಬ್ಲಾಕ್‌ ಮೇಲ್‌ ಮಾಡಲಾಗುತಿತ್ತು ಎಂದು ಪೋಲೀಸರು ಶಂಕಿಸಿದ್ದಾರೆ. ಮೊದಲು ಸಾಮಾನ್ಯ ಟವಿ ನಿರೂಪಕಿ ಆಗಿದ್ದ ದಿವ್ಯಾ ನಂತರ ರಾಜ್‌ ನ್ಯೂಸ್‌ ಮುಖ್ಯಸ್ಥ ಎನ್ನಲಾದ ವೆಂಕಟೇಶ್‌ ಸಂಪರ್ಕಕ್ಕೆ ಬಂದಳು.

ADVERTISEMENT
ನಂತರ ಇಬ್ಬರೂ ಒಂದಾಗಿ ಶುರುವಿಟ್ಟುಕೊಂಡದ್ದೇ  ಬ್ಲಾಕ್‌ಮೇಲ್‌ ದಂಧೆ.  ಕನ್ನಡದಲ್ಲಿ ಪ್ರಮುಖ 5-6 ಚಾನೆಲ್‌ ಬಿಟ್ಟರೆ ಮಿಕ್ಕ ಎಲ್ಲಾ ಚಾನೆಲ್‌ ಗಳೂ ನಡೆಯುತ್ತಿರೋದೇ ಕಷ್ಟದಲ್ಲಿ. ಇಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ ಸರಿಯಾಗಿ ಸಂಬಳ ಸಿಗೋದು ಸಂಶಯವೇ. ಜಾಹೀರಾತು ಆದಾಯ ಗಳಿಕೆಯೂ ಏನೇನೂ ಇಲ್ಲ. ಇಂತಾ ಸಂದರ್ಭದಲ್ಲಿ  ಬ್ಲಾಕ್‌ ಮೇಲ್‌ ಮಾಡಿದರೆ ಬೇಗನೆ ಹಣಗಳಿಸಬಹುದೆನ್ನುವ ದುರಾಶೆಗೆ ಬಲಿಬಿದ್ದ ದಿವ್ಯಾ  ತನ್ನ ಸಹೋದಹ ಸಂದೇಶ್‌ ನನ್ನೂ ತನ್ನ ಜತೆ ಸೇರಿಸಿಕೊಂಡಳು. ಜತೆಗೆ ಅವನ ಮೂರು ನಾಲ್ಕು ಐನಾತಿ ಮಿತ್ರರೂ ಸೇರಿಕೊಂಡರು. 
ಬೆಂಗಳೂರಿನಲ್ಲಿ ದಿನಕ್ಕೆ ಲಕ್ಷಗಟ್ಟಲೆ ಆದಾಯ ಇರುವ ಮಸಾಜ್‌ ಸೆಂಟರ್‌ ಗಳು , ಶ್ರೀಮಂತ ಉದ್ಯಮಿಗಳನ್ನು ಈ ಗ್ಯಾಂಗ್‌ ಟಾರ್ಗೆಟ್‌ ಮಾಡತೊಡಗಿತು.  ಜತೆಗೇ ಏನೂ ಮಾಡಿಲ್ಲದೆಯೂ  ಗೌರವಕ್ಕೆ ಅಂಜಿ ಜನರೂ 20, 50 ಸಾವಿರ ಕೊಡತೊಡಗಿದರು. ಮಸಾಜ್‌ ಸೆಂಟರ್‌ ಮಾಲೀಕರಂತೂ ಟಿವಿಯಲ್ಲಿ ಬಂಧರೆ ಕೆಟ್ಟ ಹೆಸರು ಬರುತ್ತೆ ಎಂದು ಹೆದರಿ ಹಣ ನೀಡಿದರು.  ಆದರೆ ಸುಲಭ ಹಣದ ರುಚಿ ಕಂಡಿದ್ದ ಈ ಗ್ಯಾಂಗ್‌ ತಿಂಗಳಿಗೆ ನಮಗೆ ಇಷ್ಟು ಕೊಟ್ಟು ಬಿಡಿ ಎಂದು ಮಂತ್ಲಿ ಹಫ್ತಾ ಫಿಕ್ಸ್‌ ಮಾಡತೊಡಗಿತು. 

ಪೋಲೀಸರ ಪ್ರಕಾರ ಈಗಾಗಲೇ ಈ ಗ್ಯಾಂಗ್‌ ನೂರರಿಂದ ಇನ್ನೂರು ಜನರ ಬಳಿ ಬೆದರಿಕೆ ಹಾಕಿಯೇ ಹಣ ವಸೂಲಿ ಮಾಡಿಕೊಂಡಿದೆ. ನಿರೂಪಕಿ ದಿವ್ಯಾ ಪ್ರಾಮಾಣಿಕವಾಗಿ ದುಡಿದಿದ್ದರೂ ತನ್ನ ಪ್ರತಿಭೆಯಿಂದಲೇ ತಿಂಗಳಿಗೆ 40-50 ಸಾವಿರ ಗಳಇಸುವುದು ಕಷ್ಟವೇನಾಗಿರಲಿಲ್ಲ. ಆದರೆ ಈಕೆ ಐಷಾರಾಮಿ ಬದುಕಿನ ಚಟಕ್ಕೆ ಬಲಿ ಬಿದ್ದಿದ್ದಳು. ಈಕೆಯ ಒಂದೇ ಗುರಿ ಎಂದರೆ ಕೋಟಿಗಟ್ಟಲೆ ಹಣ ಸಂಪಾದಿಸಬೇಕೆನ್ನುವುದು ಮಾತ್ರಾ ಆಗಿತ್ತು. ಅದಕ್ಕಾಗಿ ಆಯ್ಕೆ ಮಾಡಿಕೊಂಡದ್ದು ದುರ್ಮಾರ್ಗ ಆಗಿದ್ದರೂ ಮುಂದೊಂದು ದಿನ ಇಂತಹ ಗತಿ ಬರುತ್ತೆ ಎಂದು ಕನಸಿನಲ್ಲೂ ಈ ಗ್ಯಾಂಗ್‌ ಊಹಿಸಿರಲಿಲ್ಲ. ಏಕೆಂದರೆ ಬ್ಲಾಕ್‌ ಮೇಲ್‌ ಮಾಡಿದರೆ ಜನ ಹಣ ಕೊಡುತ್ತಾರೆ ಅಥವಾ ನಿರಾಕರಿಸುತ್ತಾರೆ. ಅವರೂ ಉದ್ಯಮದಲ್ಲೇ ಇರುವುದರಿಂದ ಪೋಲೀಸ್‌ , ಕೋರ್ಟು ಎಂದು ಹೋಗುವುದಿಲ್ಲ ಎಂದೇ ಈ ಗ್ಯಾಂಗ್‌ ಧೃಢವಾಗಿ ನಂಬಿತ್ತು.

ತನ್ನ ಸಹಚರರೊಂದಿಗೆ ನಾಪತ್ತೆ ಆಗಿರುವ ದಿವ್ಯಾ ಬೆಂಗಳೂರಿನಲ್ಲೇ ಇರುವ ಸುಳಿವು ಪೋಲೀಸರಿಗೆ ಸಿಕ್ಕಿದೆ. ಆದರೆ ಈ ಗ್ಯಾಂಗ್‌ ಸಿಕ್ಕಿ ಬೀಳುವ ಭಯದಿಂದ ಮೊಬೈಲ್‌ ಬಳಸುತ್ತಿಲ್ಲ. ಇವರ ಬ್ಯಾಂಕ್‌ ಖಾತೆಗಳ ಬಗ್ಗೆಯೂ ತನಿಖೆ ನಡೆಸುತ್ತಿರುವ ಪೋಲೀಸರು ನಿಗಾ ವಹಿಸಿದ್ದು ಹಣ ಡ್ರಾ ಮಾಡಿದರೆ ಗೊತ್ತಾಗಲಿದೆ.
ಈ ನಡುವೆ ದಿವ್ಯಾ ಹಾಗೂ ಆರೋಪಿ ರಾಜ್‌ ನ್ಯೂಸ್‌ ಮಾಜಿ ಮುಖ್ಯಸ್ಥ ವೆಂಕಟೇಶ್‌ ಜತೆಯಾಗಿ ಆತ್ಮೀಯವಾಗಿರುವ 6 ಸೆಕೆಂಡ್‌ ಗಳವೀಡಿಯೋ ನಿನ್ನೆಯಿಂದ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಈಕೆ ಎಲ್ಲಿಯೇ ಅಡಗಿದ್ದರೂ , ಏನೇ ಬುದ್ದಿವಂತಿಕೆ ತೋರಿದರೂ ಹೆಚ್ಚೆಂದರೆ ಇನ್ನೆರಡು-ಮೂರು ದಿನ ಅಷ್ಟೇ. ಪೋಲೀಸರು ಹೆಡೆಮುರಿ ಕಟ್ಟುವುದು ನಿಶ್ಚಿತವಾಗಿದೆ.

Tags: BTVBTV KannadaDivya Vasanthakannada news
Previous Post

Hair care: ನೈಸರ್ಗಿಕವಾಗಿ ಬಿಳಿಯ ಕೂದಲು ಕಪ್ಪಾಗುವುದಕ್ಕೆ ಈ ಟಿಪ್ಸ್ ನ ಫಾಲೋ ಮಾಡಿ.!

Next Post

ಮತ್ತೆ ನೆನಪಿಸುತ್ತಿದೆ 2008ರ ಅತಿಕ್ರಮಣ ತೆರವು..

Related Posts

Top Story

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 28, 2025
0

“ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಸದ ತೇಜಸ್ವಿ ಸೂರ್ಯ ಅವರು ಕೊಟ್ಟ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ. ಆದರೂ ಅವರ ಸಲಹೆಗಳನ್ನು ಗೌರವಿಸುತ್ತೇನೆ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ...

Read moreDetails
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

October 28, 2025

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

October 28, 2025
ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

October 28, 2025
Next Post
ಮತ್ತೆ ನೆನಪಿಸುತ್ತಿದೆ 2008ರ ಅತಿಕ್ರಮಣ ತೆರವು..

ಮತ್ತೆ ನೆನಪಿಸುತ್ತಿದೆ 2008ರ ಅತಿಕ್ರಮಣ ತೆರವು..

Recent News

Top Story

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ
Top Story

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

by ಪ್ರತಿಧ್ವನಿ
October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ
Top Story

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

by ಪ್ರತಿಧ್ವನಿ
October 28, 2025
Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ
Top Story

ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

by ಪ್ರತಿಧ್ವನಿ
October 28, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada