ಮೆಗಾಸ್ಟಾರ್ ಚಿರಂಜೀವಿಯವರ(chiranjeevi) ಪುತ್ರಿ ಶ್ರೀಜಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವ ವಿಚಾರ, ಬಹಳ ದಿನಗಳಿಂದ ಚರ್ಚೆಯಾಗ್ತಿದೆ. ಶ್ರೀಜಾ ಹಾಗೂ ಕಲ್ಯಾಣ್ದೇವ್ ಡಿವೋರ್ಸ್ ತೆಗೆದುಕೊಳ್ತಿದ್ದಾರೆ ಅನ್ನೋ ಸುದ್ದಿ ಕೂಡ ಟಾಲಿವುಡ್(tollywood) ಅಂಗಳದಲ್ಲಿ ಸದ್ದು ಮಾಡ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೀಗಿರುವಾಗ ಶ್ರೀಜಾ ಪತಿ ಕಲ್ಯಾಣ್ ದೇವ್ ಮಾಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ(social media) ವೈರಲ್ ಆಗ್ತಿದೆ.

ಅದ್ಹಾಗೆ ಚಿರಂಜೀವಿ ಪುತ್ರಿ ಶ್ರೀಜಾಗೆ ಇದು ಎರಡನೇ ಮದುವೆ. ತಂದೆಯನ್ನೇ ಎದುರು ಹಾಕಿಕೊಂಡು ಪ್ರೀತಿಸಿದ ಹುಡುಗನನ್ನ ಶ್ರೀಜಾ ಮದುವೆಯಾಗಿದ್ದರು. ಆದರೆ ಅವರ ರಿಲೇಷನ್ ಶಿಪ್ ಹೆಚ್ಚ ಕಾಲ ಉಳಿಯಲಿಲ್ಲ. ಮೊದಲ ಪತಿಗೆ ಡಿವೋರ್ಸ್ ಕೊಟ್ಟು, ಕುಟುಂಬದವರ ಸಮ್ಮತಿಯಂತೆ ಶ್ರೀಜಾ ಕಲ್ಯಾಣ್ ದೇವ್(kalyan dev) ಜೊತೆ 2ನೇ ಮದುವೆಯಾದರು. ಆದ್ರೀಗ ಕಲ್ಯಾಣ್ ದೇವ್ ಜೊತೆಗಿನ ದಾಂಪತ್ಯವೂ ಸರಿಯಿಲ್ಲ ಎನ್ನಲಾಗ್ತಿದೆ.

ಶ್ರೀಜಾ- ಕಲ್ಯಾಣ್ ಇಬ್ಬರೂ ದೂರಾಗುತ್ತಾರೆ ಎಂಬ ಹೆಚ್ಚಾಗಿ ಕೇಳಿ ಬರ್ತಿದ್ರೂ ಎರಡು ಫ್ಯಾಮಿಲಿಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಇನ್ನು ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಕಲ್ಯಾಣ್ ದೇವ್ ಕಾಣಿಸಿಕೊಳ್ಳುತ್ತಿಲ್ಲ. ಇದರ ಮಧ್ಯೆ ಕಲ್ಯಾಣ್ ಇನ್ಸ್ಟಾ ಸ್ಟೋರಿ, ಈ ಜೋಡಿಯ ಡಿವೋರ್ಸ್ ಬಗ್ಗೆ ಮತ್ತೊಮ್ಮೆ ಅನುಮಾನ ಹುಟ್ಟುಹಾಕಿದೆ.

ಕಲ್ಯಾಣ್ ದೇವ್ ಇತ್ತೀಚಿಗೆ ಮಕ್ಕಳು ಪೋಷಕರನ್ನ ನೋಡ್ತಿದ್ದಂತೆ, ಎಕ್ಸೈಟ್ ಆಗುವ ಫೋಟೊವನ್ನು ಶೇರ್ ಮಾಡಿ ʼಮಕ್ಕಳಿಗೆ ತಂದೆ ತಾಯಿ ಪ್ರೀತಿ, ಬೆಂಬಲ ಬಹಳ ಮುಖ್ಯ, ಮಿಸ್ಸಿಂಗ್ ನಿವಿಷ್ಕ, ನಿವಿತ್ರಿ ಎಂದು ಬರೆದುಕೊಂಡಿದ್ದಾರೆ. ಇದನ್ನ ನೋಡಿ ಕಲ್ಯಾಣ್ ದೇವ್ ಹಾಗೂ ಶ್ರೀಜಾ ದೂರಾಗಿರುವುದು ನಿಜ. ಶೀಘ್ರದಲ್ಲೇ ಡಿವೋರ್ಸ್ ಕೂಡ ತೆಗೆದುಕೊಳ್ಳುತ್ತಾರೆ ಅಂತ ನೆಟ್ಟಿಗರು ಮಾತನಾಡಿಕೊಳಿದ್ದಾರೆ. ಇದರಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ ಅನ್ನೋದನ್ನ ಅಧಿಕೃತ ಮಾಹಿತಿ ಸಿಗೋವರೆಗೂ ಕಾದುನೋಡ್ಬೇಕಿದೆ.