ಸಚಿವ ಶಿವಾನಂದ ಪಾಟೀಲ್ (Shivananda patil) ಹಾಗೂ ಯತ್ನಾಳ್ (Yatnal) ನಡುವಿನ ಜಟಾಪಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಎಸ್.ಆರ್ ವಿಶ್ವನಾಥ್ (SR Vishwanath) ಪ್ರತಿಕ್ರಿಯಿಸಿದ್ದು, ಸಚಿವರು ಸವಾಲು ಸ್ವೀಕರಿಸಿದ್ದಾರೆ.ಶಿವಾನಂದ ಪಾಟೀಲ್ ಹಿರಿಯ ರಾಜಕಾರಣಿ.ರಾಜೀನಾಮೆ ಕೊಡಬೇಕಾದರೆ ಒಂದೇ ಸಾಲಿನಲ್ಲಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತಾಯಿದ್ದೇನೆ ಅಂತ ಕೊಡಬೇಕು.

ಅದರಲ್ಲಿ ಬೇರೆ ಯಾವುದೇ ವಿಚಾರ ಪ್ರಸ್ತಾಪ ಮಾಡಿರಬಾರದು ಎಂದಿದ್ದಾರೆ.ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal) ರಾಜೀನಾಮೆ ಕೊಟ್ಟ ಮೇಲೆ ಅದು ಒಪ್ಪಿಗೆ ಆದ ನಂತರ ನನ್ನ ರಾಜೀನಾಮೆಗೆ ಒಪ್ಪಿಗೆ ಕೊಡಿ ಅಂದಿದ್ದಾರೆ.ಅಂದ್ರೆ ತಮ್ಮ ರಾಜೀನಾಮೆ ಒಪ್ಪಿಗೆ ಆಗಲ್ಲ ಅಂತ ಶಿವಾನಂದ ಪಾಟೀಲರಿಗೆ ಗೊತ್ತಿದೆ, ಇದು ಗೊತ್ತಿದ್ದೇ ಅವ್ರು ರಾಜೀನಾಮೆ ಕೊಟ್ಟಿದ್ದಾರೆ.

ಶಿವಾನಂದ ಪಾಟೀಲರ ರಾಜೀನಾಮೆ ಒಂದು ನಾಟಕ ಎಂದಿದ್ದಾರೆ.ಅವರ ಈ ನಾಟಕ ಸಾಮಾನ್ಯ ಜನರಿಗೂ ಗೊತ್ತಾಗಿದೆ.ಇಬ್ಬರೂ ಒಟ್ಟಿಗೆ ಹೋಗಿ ಸ್ಪೀಕರ್ ಗೆ ರಾಜೀನಾಮೆ ಬರೆದು ಕೊಟ್ರೆ ಆಗ ನಾವು ಅವರನ್ನು ಒಪ್ಪಿಕೊಳ್ತೇವೆ.ಸುಮ್ಮನೆ ಪ್ರಚಾರಕ್ಕಾಗಿ ಇಬ್ರೂ ಹೀಗೆ ಮಾಡೋದು ಬೇಡ.ಹಾಗೇನಾದರೂ ಇಬ್ಬರ ಮಧ್ಯೆ ಸವಾಲು ಇದ್ರೆ ಇಬ್ರೂ ಒಟ್ಟಿಗೆ ಹೋಗಿ ಒಂದೇ ಸಾಲಿನಲ್ಲಿ ರಾಜೀನಾಮೆ ಕೊಡಲಿ,ಮರು ಚುನಾವಣೆ ಯಾರು ಗೆದ್ಕೊಳ್ತಾರೋ ಗೆದ್ದುಕೊಳ್ಳಲಿ ಎಂದಿದ್ದಾರೆ.