ಬೆಳಗಾವಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೇವಲ ಗೋಕಾಕ್ ಮಾತ್ರವಲ್ಲದೇ ಇಡಿ ಬೆಳಗಾವಿಯಲ್ಲಿ ಪಾರುಪತ್ಯ ಸಾಧಿಸೋಕೆ ರಮೇಶ್ ಜಾರಕಿಹೊಳಿ ಪ್ಲಾನ್ ಮಾಡಿದ್ದು ಆಪ್ತ ಮಹೇಶ್ ಕುಮಟಳ್ಳಿ ಹಾಗೂ ನಾಗೇಶ್ ಮನ್ನೋಳಕರ್ಗೆ ಟಿಕೆಟ್ ಕೊಡಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಜೀವನವನ್ನು ಬಲಿ ಪಡೆಯೋದು ರಮೇಶ್ ಜಾರಕಿಹೊಳಿ ರಣತಂತ್ರವಾಗಿದೆ.
ಆದರೆ ರಮೇಶ್ ಜಾರಕಿಹೊಳಿಯನ್ನು ಗೋಕಾಕ್ ಕ್ಷೇತ್ರದಲ್ಲಿಯೇ ಸೋಲಿಸೋದು ಕಾಂಗ್ರೆಸ್ ಪ್ಲಾನ್ ಆಗಿದೆ. ಹೀಗಾಗಿ ಟಿಕೆಟ್ ಸಿಗದ ಬಳಿಕ ಬಂಡಾಯವೆದ್ದಿದ್ದ ಅಶೋಕ್ ಪೂಜಾರಿ ಮನವೊಲಿಸಿದ್ದಾರೆ. ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ . ಮಹಾಂತೇಶ್ ಕಡಾಡಿ ಪರವಾಗಿ ಪ್ರಚಾರ ಮಾಡಲು ಒಪ್ಪಿದ್ದಾರೆ.
ಅಶೋಕ್ ಪೂಜಾರಿ ಬೆಂಬಲದಿಂದ ಪಂಚಮಸಾಲಿ ಜೊತೆ ಅಹಿಂದ ಮತಗಳು ಕಾಂಗ್ರೆಸ್ ಅಭ್ಯರ್ಥಿ ಪಾಲಾಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಈ ರೀತಿ ಮಾಡಿ ಮತ ಬ್ಯಾಂಕ್ ಸಂಪಾದಿಸಿ ರಮೇಶ್ ಜಾರಕಿಹೊಳಿಯನ್ನು ಸೋಲಿಸುವುದು ಕಾಂಗ್ರೆಸ್ ಪ್ಲಾನ್ ಆಗಿದೆ.