ಬೆಂಗಳೂರು : ಕಳೆದೊಂದು ವಾರದಿಂದ ರಾಜ್ಯದ ಮಾರುಕಟ್ಟೆಗಳಲ್ಲಿ ನಂದಿನಿ ಉತ್ಪನ್ನಗಳ ಬದಲಾಗಿ ಅಮುಲ್ ಉತ್ಪನ್ನಗಳೇ ಹೆಚ್ಚಾಗಿ ದೊರಕುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಇಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ತೀವ್ರ ವಿರೋಧದಿಂದಾಗಿ ಕನ್ನಡಿಗರ ಜೀವನಾಡಿ ಕೆಎಂಎಫ್ ಮುಗಿಸಿ ಹಾಕಲು ಬಿಜೆಪಿ ಹಾಕಿದ 2 ಪ್ಲಾನ್ ವಿಫಲವಾಗಿತ್ತು. ಇದೀಗ ಮೂರನೆ ಸಂಚನ್ನು ಬಿಜೆಪಿ ಹೂಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ ಎಂಬುದು ಕೇಂದ್ರ ಸರ್ಕಾರದ ನೀತಿಯಾಗಿದೆ. ಇದೇ ಕಾರಣಕ್ಕೆ ತನ್ನ ಅತಿದೊಡ್ಡ ಪ್ರತಿಸ್ಪರ್ಧಿ ನಂದಿನಿಯನ್ನು ಕರ್ನಾಟಕದಲ್ಲಿಯೇ ಮುಗಿಸುವ ಪ್ಲಾನ್ನಲ್ಲಿ ಬಿಜೆಪಿಯಿದೆ. ಕೇಂದ್ರ ಸರ್ಕಾರ ಕೆಎಂಎಫ್ ಕತ್ತು ಹಿಸುಕುವ ಕೆಲಸ ಮಾಡ್ತಿದೆ ಎಂದು ಕಿಡಿಕಾರಿದ್ದಾರೆ.
ಹಿಂದಿ ಹೇರಿಕೆಯ ವಿರುದ್ಧ ದನಿ ಎತ್ತಿರುವ ಕನ್ನಡಿಗರು ಹಾಗೂ ಕೆಎಂಎಫ್ ಇಬ್ಬರ ಕತೆಯನ್ನು ಮುಗಿಸೋಕೆ ಅಮುಲ್ ಹೊರಟಿದೆ. ಕರ್ನಾಟಕದಲ್ಲಿ ಹಿಂಬಾಗಿಲ ಮೂಲಕ ಪ್ರವೇಶ ಪಡೆದಿರುವ ಅಮುಲ್ ನಂದಿನಿ ಉತ್ಪನ್ನಗಳ ಆಪೋಶನ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
‘