ಮಂಡ್ಯ: ಮಂಡ್ಯದ ಕೆ.ಆರ್ ಪೇಟೆಯ ಮತ್ತಿಘಟ್ಟ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ ಎಂಟು ಮೇಕೆಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಮತ್ತಿಘಟ್ಟ ಗ್ರಾಮದ ಕುಮಾರ್ ಎಂಬವರಿಗೆ ಸೇರಿದ 9 ಮೇಕೆಗಳು ಬೀದಿ ನಾಯಿಗಳು ದಾಳಿಯಿಂದ ಸಾವನ್ನಪ್ಪಿವೆ.
ನಾಯಿಗಳ ದಾಳಿಗೆ ಎಂಟು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆಯಿಂದ ರೈತ ಕುಮಾರ್ ಸಂಕಷ್ಟಕ್ಕೆ ಸಿಲುಕಿದ್ದು, ಸೂಕ್ತ ಪರಿಹಾರ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳನ್ನು ನಿಯಂತ್ರಿಸುವಂತೆ ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ
.