ತೆಲಂಗಾಣ ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಪರ ಅಲ್ಪಸಂಖ್ಯಾತ ಸಮುದಾಯದ ಮತ ಸೆಳೆಯುವಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಯಶಸ್ವಿಯಾಗಿದ್ದಾರೆ.
ಹೈಕಮಾಂಡ್ ಸೂಚನೆ ಮೇರೆಗೆ ಇಪ್ಪತ್ತೈದು ದಿನಗಳ ಹಿಂದೆಯೇ ಹೈದರಾಬಾದ್ ಗೆ ಬಂದು ವಾಸ್ತವ್ಯ ಹೂಡಿ ಪಕ್ಷದ ನಾಯಕರು, ಮುಸ್ಲಿಂ ಸಮುದಾಯದ ಮುಖಂಡರು, ಬುದ್ಧಿ ಜೀವಿಗಳ ಜತೆ ಹಲವಾರು ಸಭೆ ಗಳನ್ನು ನಡೆಸಿ ಮುಸ್ಲಿಂ ಸಮುದಾಯದ ಪ್ರಾಬಲ್ಯ ಇರುವ 49 ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಪರ ಮತ ಒಗ್ಗೂಡಿಸುವಿಕೆ ಯಲ್ಲಿ ಸಫಲರಾದರು.
ಹೈದರಾಬಾದ್ ಗೆ ಬರುವ ಮುನ್ನ ದೆಹಲಿಗೆ ತೆರಳಿ ಎ ಐ ಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರ ಜತೆ ಕಾರ್ಯತಂತ್ರ ಗಳ ಬಗ್ಗೆ ಚರ್ಚಿಸಿ ನಂತರ ಎ ಐ ಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ಜತೆ ನಿರಂತರ ಸಂಪರ್ಕ ಸಾಧಿಸಿ ಅಲ್ಪಸಂಖ್ಯಾತ ಸಮುದಾಯದ ಮತ ಕಾಂಗ್ರೆಸ್ ನತ್ತ ಒಗ್ಗೂಡಿಸಿದರು.
ಅಷ್ಟೇ ಅಲ್ಲದೆ ಎಂ ಐ ಎಂ ಹಾಗೂ ಬಿ ಆರ್ ಎಸ್ ನಾಯಕರನ್ನು ಕಾಂಗ್ರೆಸ್ ಗೆ ಸೆಳೆದು ಆ ಎರಡೂ ಪಕ್ಷ ಗಳಿಗೆ ಟಾಂಗ್ ನೀಡಿದ್ದರು. ಬೋಧಾನ್, ರಾಮಗೊಂಡಮ್, ಪೆದ್ದಪಲ್ಲೆ, ಬಾಲಕೊಂಡ್ , ಕೊಂಡಗಲ್ ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಗೆಲ್ಲುವುದರ ಜತೆಗೆ ಕಮ್ಮಮ್, ವಾರಂಗಲ್, ನಲ್ಗೊಂಡ ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಮುಸ್ಲಿಂ ಮತ ಒಗ್ಗೂಡಿಸಿದ್ದು ಕಾರಣ ವಾಗಿದೆ. ಒಟ್ಟು ಗೆದ್ದಿರುವ ಕ್ಷೇತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳು ಕಮ್ಮಮ್, ನಲ್ಗೊಂಡ, ವಾರಂಗಲ್ ಜಿಲ್ಲೆ ಗಳಿಗೆ ಸೇರಿದೆ.

ಕಳೆದ ಎರಡೂ ಚುನಾವಣೆ ಗಳಲ್ಲಿ ಬಿ ಆರ್ ಎಸ್ ಮತ್ತು ಎಂ ಐ ಎಂ, ಕಾಂಗ್ರೆಸ್ ನಡುವೆ ಮುಸ್ಲಿಂ ಮತ ಹಂಚಿಕೆ ಆಗುತ್ತಿತ್ತಾದರೂ ಈ ಬಾರಿ ಗ್ರೇಟರ್ ಹೈದರಾಬಾದ್ ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆ ಗಳಲ್ಲಿ ಕಾಂಗ್ರೆಸ್ ಪರ ಅಲ್ಪಸಂಖ್ಯಾತ ಮತ ವಾಲಿದ್ದು ಅದಕ್ಕೆ ಜಮೀರ್ ಅಹಮದ್ ಖಾನ್ ಅವರು ಕರ್ನಾಟಕ ದ ಇತರೆ ಮುಸ್ಲಿಂ ನಾಯಕರ ಜತೆಗೂಡಿ ರೂಪಿಸಿದ ಕಾರ್ಯತಂತ್ರ ಯಶಸ್ವಿ ಯಾಗಿದೆ.