
ಬೆಂಗಳೂರು ದಕ್ಷಿಣ ವಿಭಾಗದ ತೇಜಸ್ವಿ ಸೂರ್ಯ 2024 ರ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದಂತಹ ಸಂಧರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಯುವಜನರ ತಂಡವೊಂದು ಬ್ಯಾನರ್ ಒಂದನ್ನು ಪ್ರದರ್ಶನ ಮಾಡಿದ್ದಾರೆ. ಆ ಬ್ಯಾನರ್ನಲ್ಲಿ ಪ್ರೀತಿಯಿಂದ ದ್ವೇಷವನ್ನು ಪಂಕ್ಚರ್ ಮಾಡಿ ಎಂದು ಬರೆಯಲಾಗಿತ್ತು.
ಈ ಬ್ಯಾನರ್ಅನ್ನು ಪ್ರದರ್ಶನ ಮಾಡುತಿದ್ದಂತೆ ಅಲ್ಲಿದ್ದ ಬಿಜೆಪಿ ಕಾರ್ಯಕರ್ತರು ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.
ಗುರುವಾರ ಬೆಜಿಪಿಯ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಾಮಪತ್ರವನ್ನು ಸಲ್ಲಿಸುತಿದ್ದರು ಮತ್ತು ಈ ಹಿನ್ನಲೆಯಲ್ಲಿ ಒಂದು ಸಮಾವೇಶವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಅನುರಾಗ್ ಠಾಕೂರ್ಮ ಪ್ರತಾಪ್ ಸಿಂಹ, ಆರ್ ಅಶೋಕ್ ಸೇರಿದಂತೆ ಮತ್ತಿತ್ತರರು ಇದ್ದರು.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ 5 ರಿಂದ 6 ಜನ ಯುವಜನರ ಗುಂಪೊಂದು ಪ್ರೀತಿಯಿಂದ ದ್ವೇಷವನ್ನು ಪಂಕ್ಚರ್ ಮಾಡಿ ಎಂಬ ಬ್ಯಾನರ್ ಅನ್ನು ಪ್ರದರ್ಶನ ಮಾಡಿದ್ದರು. ಸಾಕಷ್ಟು ವಿರೋಧದ ನಂತರ ಬ್ಯಾನರ್ ತೆರವುಗೊಳಿಸಿ ಅಲ್ಲಿಂದ ಆ ಯುವಜರು ತೆರಳಿದರರು.
ಬಳಿಕ ಪ್ರತಿಧ್ವನಿಯೊಂದಿಗೆ ಮಾತನಾಡಿದ ಆ ತಂಡದ ಸದಸ್ಯ ವಿನಯ್ಕುಮಾರ್ ಅವರು ನಮಗೆ ತೇಜಸ್ವಿ ಸೂರ್ಯ ಅವರೆ ಮೇಲೆ ಯಾವುದೇ ದ್ವೇಷ ಇಲ್ಲ ಆದರೆ ಅವರು ಪ್ರೀತಿಯನ್ನು ಹಂಚುವ, ಸೌಹಾರ್ದತೆಯನ್ನು ಬೆಳಸುವ ಕೆಲಸವನ್ನು ಮಾಡಬೇಕು. ಈ ಹಿಂದೆ ಸಾಕಷ್ಟು ಕೋಮುದ್ವೇಷಿ ಹೇಳಿಕೆಗಳನ್ನು ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಈ ರೀತಿಯ ಕೆಲಸವನ್ನು ಅವರು ಮಾಡದೇ ಇರಲಿ ಎಂದು ಈ ಬ್ಯಾನರ್ ಅನ್ನು ಪ್ರದರ್ಶಿಸಿದ್ದೇವೆ ಎಂದರು.