• Home
  • About Us
  • ಕರ್ನಾಟಕ
Saturday, January 17, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕ್ರೀಡೆ

ಭಾರತದ ಕಳಪೆ ಪ್ರದರ್ಶನ: ಪಾಕಿಸ್ತಾನಕ್ಕೆ ಭರ್ಜರಿ ಜಯ

Any Mind by Any Mind
October 24, 2021
in ಕ್ರೀಡೆ
0
ಭಾರತದ ಕಳಪೆ ಪ್ರದರ್ಶನ: ಪಾಕಿಸ್ತಾನಕ್ಕೆ ಭರ್ಜರಿ ಜಯ
Share on WhatsAppShare on FacebookShare on Telegram

ADVERTISEMENT

ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಹಣಾಹಣಿಯಲ್ಲಿ ಪಾಕಿಸ್ತಾನ ಹತ್ತು ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಸಂಘಟಿತ ಪ್ರದರ್ಶನ ನೀಡಿದ ತಂಡವು ಭಾರತವನ್ನು ಅಂತರದಲ್ಲಿ ಮಣಿಸಿದೆ. ಇದರೊಂದಿಗೆ ಯಾವುದೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಎದುರು ಮೊದಲು ಜಯ ದಾಖಲಿಸಿ ಇತಿಹಾಸ ನಿರ್ಮಿಸಿದೆ.
ಅದ್ಭುತವಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನವನ್ನು ಪಾಕಿಸ್ತಾನವು ನೀಡಿತು. ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಂ ಭಾರತದ ಗುರಿಯನ್ನು ಅನಾಯಸವಾಗಿ ತಲುಪಿದರು.


ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅತ್ಯಂತ ಕಳಪೆ ಆರಂಭ ಪಡೆಯಿತು. ಆರು ರನ್ ಆಗುವಷ್ಟರಲ್ಲಿ ಆರಂಭಿಕರಾದ ರೋಹಿತ್ ಶರ್ಮಾ (0) ಮತ್ತು ಕೆ ಎಲ್ ರಾಹುಲ್ (3) ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ತಂಡಕ್ಕೆ ಅಲ್ಪ ಮಟ್ಟಿನ ಚೇತರಿಕೆ ನೀಡಿದರು. ಆದರೆ, ತಂಡದ ಮೊತ್ತ 31 ಆಗುವಷ್ಟರಲ್ಲಿ ಸೂರ್ಯಕುಮಾರ್ ಯಾದವ್ (11) ಔಟ್ ಆಗಿದ್ದರಿಂದ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು.


ಈ ವೇಳೆ ಒಂದಾದ ಕೊಹ್ಲಿ ಹಾಗೂ ರಿಷಬ್ ಪಂತ್ 53 ರನ್’ಗಳನ್ನು ಸೇರಿಸುವಲ್ಲಿ ಯಶಸ್ವಿಯಾದರು. ಇವರಿಬ್ಬರ ಜೊತೆಯಾಟದ ಫಲವಾಗಿ ತಂಡವು ಉತ್ತಮ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು. 39 ರನ್ನಿಗೆ ವಿಕೆಟ್ ಒಪ್ಪಿಸಿದ ಪಂತ್ ಬಳಿಕ ಕ್ರೀಸ್’ಗೆ ಇಳಿದ ರವೀಂದ್ರ ಜಡೇಜ (13) ಹಾಗೂ ಹಾರ್ದಿಕ್ ಪಾಂಡ್ಯ (11) ಹೆಚ್ಚಿನ ಕೊಡುಗೆ ನೀಡುವಲ್ಲಿ ವಿಫಲವಾದರು. ಕೊನೆಗೆ ಇಪ್ಪತ್ತು ಓವರ್’ಗಳ ಅಂತ್ಯಕ್ಕೆ ಭಾರತವು ಏಳು ವಿಕೆಟ್ ನಷ್ಟಕ್ಕೆ 151 ರನ್ ಕಲೆ ಹಾಕಿತು.


ಪಾಕಿಸ್ತಾನ ಪರ ಬೌಲಿಂಗ್ ಮಾಡಿದ ಶಾಹಿನ್ ಅಫ್ರಿದಿ ನಾಲ್ಕು ಓವರ್’ಗಳಲ್ಲಿ 31 ರನ್ ನೀಡಿ ಆರಂಭಿಕ ಆಟಗಾರರು ಸೇರಿದಂತೆ ಒಟ್ಟು ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಇವರ ಬಳಿಕ ಹಸನ್ ಅಲಿ ಎರಡು, ಶಾದಾಬ್ ಖಾನ್ ಹಾಗೂ ಹ್ಯಾರಿಸ್ ರೌಫ್ ತಲಾ ಒಂದು ವಿಕೆಟ್ ಪಡೆದರು.


ಉತ್ತಮ ಬೌಲಿಂಗ್ ಸಾಧನೆ ಮಾಡಿದ ಶಹೀನ್ ಅಫ್ರಿದಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ಒಟ್ಟಾರೆ, ಪಾಕಿಸ್ತಾನವು ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಮೊದಲ ಬಾರಿಗೆ ಸೋಲಿಸಿದ ಸಂಭ್ರಮಾಚರಣೆಯಲ್ಲಿ ಇದ್ದರೆ, ಭಾರತ ತಂಡದ ಅಭಿಮಾನಿಗಳು ನಿರಾಶರಾಗಿದ್ದಾರೆ.


ಕೊಹ್ಲಿ ಆಕರ್ಷಕ ಅರ್ಧಶತಕ:
49 ಬಾಲ್’ಗಳನ್ನು ಎದುರಿಸಿದ ವಿರಾಟ್ ಕೊಹ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸ್ ಸೇರಿ ಒಟ್ಟು 57 ರನ್ ಹೊಡೆದರು. ಇವರ ಅರ್ಧ ಶತಕದಿಂದ ಭಾರತವು ಅಲ್ಪ ಮೊತ್ತಕ್ಕೆ ಕುಸಿಯುವುದು ತಪ್ಪಿತು.


ಅಂದ ಹಾಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಪಾಕಿಸ್ತಾನದ ಎದುರು ಔಟ್ ಆದರು. ಇದಕ್ಕೂ ಮೊದಲು 2012ರಲ್ಲಿ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ 78* ರನ್, 2014 ಮೀರ್ಪುರ್’ನಲ್ಲಿ 36* ರನ್, 2016 ಕೊಲ್ಕತ್ತಾದಲ್ಲಿ 55* ರನ್ ಮಾಡಿ ಔಟಾಗದೆ ಉಳಿದಿದ್ದರು.


ಇಂದಿನ ಅರ್ಧ ಶತಕದ ಬಳಿಕ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಯಾವುದೇ ತಂಡದ ಎದುರು ಅತೀ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ ಸ್ಥಾನಕ್ಕೇರಿದ್ದಾರೆ. ಕೊಹ್ಲಿಗಿಂತ ಮುಂಚೆ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೈಲ್ ಆಸ್ಟ್ರೇಲಿಯಾ ಎದುರು 274 ರನ್ ಬಾರಿಸಿದ್ದರೆ, ವೆಸ್ಟ್ ಇಂಡೀಸ್ ಎದುರು ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 238 ರನ್ ಹೊಡೆದಿದ್ದಾರೆ. ಶ್ರೀಲಂಕಾದ ಮಾಜಿ ಕಪ್ತಾನ ಮಹೇಲ ಜಯವರ್ಧನೆ ನ್ಯೂಜಿಲ್ಯಾಂಡ್ ಎದುರು 226 ರನ್ ಕಲೆ ಹಾಕಿದ್ದಾರೆ. ಆ ನಂತರ ಕೊಹ್ಲಿ ಪಾಕಿಸ್ತಾನದ ಎದುರು 226 ರನ್ ಕಲೆ ಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.


ಪಾಕಿಸ್ತಾನಕ್ಕೆ ಭರ್ಜರಿ ಆರಂಭ:
152 ರನ್’ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ರಿಜ್ವಾನ್ ಹಾಗೂ ಬಾಬರ್ ಅಜಾಂ ಉತ್ತಮ ಆರಂಭ ನೀಡಿದರು. ಪವರ್ ಪ್ಲೇಯಲ್ಲಿ 43 ರನ್ ಕಲೆ ಹಾಕುವ ಮೂಲಕ, ಚೇಸಿಂಗ್’ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆ ನಂತರದಲ್ಲಿ ಕ್ರೀಸ್ ಕಚ್ಚಿ ನಿಂತ ಇಬ್ಬರೂ ಆಟಗಾರರು ಕೊನೆಯವರೆಗೂ ವಿಕೆಟ್ ಕಳೆದುಕೊಳ್ಳದೆ ಪಾಕಿಸ್ತಾನವನ್ನು ಗಡಿ ಮುಟ್ಟಿಸಿದರು.


ಮೊಹಮ್ಮದ್ ಇಜ್ವಾನ್ ಅಜೇಯ 79 (55), ಬಾಬರ್ ಅಜಂ 68 (52) ರನ್ ಬಾರಿಸಿದರು. ಇಬ್ಬರೂ ತಲಾ ಆರು ಬೌಂಡರಿ ಹೊಡೆದರು. ರಿಜ್ವಾನ್ ಬ್ಯಾಟಿನಿಂದ ಮೂರು ಆಕರ್ಷಕ ಸಿಕ್ಸರ್’ಗಳು ಸಿಡಿದರೆ, ಬಾಬಾರ್ ಅಜಂ ಎರಡು ಸಿಕ್ಸರ್ ಬಾರಿಸಿ ರಿಜ್ವಾನ್’ಗೆ ಕೊನೆಯವರೆಗೂ ಉತ್ತಮ ಸಾಥ್ ನೀಡಿದರು.


ಇದೊಂದು ದಾಖಲೆ ಜೊತೆಯಾಟವಾಗಿದ್ದು, ಪಾಕಿಸ್ತಾನದ ಪರ ಯಾವುದೇ ವಿಕೆಟ್’ಗೆ ಅತಿ ಹೆಚ್ಚು ರನ್ ಬಾರಿಸಿದ ಜೋಡಿಯಾಗಿ ಇವರಿಬ್ಬರು ನಿಂತಿದ್ದಾರೆ. ಇದರ ಹಿಂದೆ, 2012ರ ಅಹಮದಾಬಾದ್ ಪಂದ್ಯದಲ್ಲಿ ಮೊಹಮ್ಮದ್ ಹಫೀಜ್ ಹಾಗೂ ಶೋಯೆಬ್ ಮಲಿಕ್ ನಾಲ್ಕನೇ ವಿಕೆಟ್’ಗೆ 106 ರನ್ ಜೊತೆಯಾಟವಾಡಿದ್ದು ದಾಖಲೆಯಾಗಿತ್ತು.

Previous Post

ಶತಕೋಟಿ ಲಸಿಕೆ ನೀಡಿಕೆ; ಹಲವು ಸವಾಲುಗಳನ್ನ ಮೆಟ್ಟಿ ನಿಂತ ಭಾರತ ಎಂದ ಮೋದಿ

Next Post

20 ತಿಂಗಳ ಬಳಿಕ ಪ್ರಾಥಮಿಕ ಶಾಲೆ ಇಂದಿನಿಂದ ಆರಂಭ : ಮೊದಲ ದಿನವೇ ಶಿಕ್ಷಕರಿಂದ ಪ್ರತಿಭಟನೆ!

Related Posts

ಅಮೆರಿಕ ಮಣಿಸೋಕೆ ಸಿದ್ಧವಾದ ಭಾರತದ ಯುವ ಪಡೆ : ವೈಭವ್‌ ಮೇಲೆ ಹೆಚ್ಚಿದ ನಿರೀಕ್ಷೆ
Top Story

ಅಮೆರಿಕ ಮಣಿಸೋಕೆ ಸಿದ್ಧವಾದ ಭಾರತದ ಯುವ ಪಡೆ : ವೈಭವ್‌ ಮೇಲೆ ಹೆಚ್ಚಿದ ನಿರೀಕ್ಷೆ

by ಪ್ರತಿಧ್ವನಿ
January 15, 2026
0

ಸದ್ಯ ಕ್ರಿಕೆಟ್‌ ರಂಗದಲ್ಲಿ ಹಲವಾರು ಜನರ ಕಣ್ಣು 14 ವರ್ಷದ ವೈಭವ್ ಸೂರ್ಯವಂಶಿ ಮೇಲಿದೆ. ವೈಭವ್ ವಿಶ್ವಕಪ್ ಆಡದೇ ಇರಬಹುದು, ಆದರೆ ಈಗಾಗಲೇ‌ ಅವರ ಪರ ಪ್ರಚಾರ,...

Read moreDetails
WPL 2026 : ವಿಕೆಟ್‌ನಲ್ಲೂ ಹ್ಯಾಟ್ರಿಕ್‌ ; ಯಾರಿದು ನಂದನಿ ಶರ್ಮಾ? ಹಿನ್ನೆಲೆ ಏನು..?

WPL 2026 : ವಿಕೆಟ್‌ನಲ್ಲೂ ಹ್ಯಾಟ್ರಿಕ್‌ ; ಯಾರಿದು ನಂದನಿ ಶರ್ಮಾ? ಹಿನ್ನೆಲೆ ಏನು..?

January 12, 2026
WPL2026 : ಮುಂಬೈ ವಿರುದ್ಧ ಭರ್ಜರಿ ಗೆಲುವು ; RCB ಗೆಲುವಿಗೆ ಕಾರಣವಾದ ಅಂಶಗಳು ಯಾವುವು..?

WPL2026 : ಮುಂಬೈ ವಿರುದ್ಧ ಭರ್ಜರಿ ಗೆಲುವು ; RCB ಗೆಲುವಿಗೆ ಕಾರಣವಾದ ಅಂಶಗಳು ಯಾವುವು..?

January 10, 2026
WPL 2026: ಮೊದಲ ಪಂದ್ಯದಲ್ಲೇ ಮುಂಬೈಗೆ ಟಕ್ಕರ್‌ ನೀಡಲು ಆರ್‌ಸಿಬಿ ವನಿತೆಯರು ಸಜ್ಜು..

WPL 2026: ಮೊದಲ ಪಂದ್ಯದಲ್ಲೇ ಮುಂಬೈಗೆ ಟಕ್ಕರ್‌ ನೀಡಲು ಆರ್‌ಸಿಬಿ ವನಿತೆಯರು ಸಜ್ಜು..

January 9, 2026

ಬಾಂಗ್ಲಾ ಆಟಗಾರರಿಗೆ ಐಪಿಎಲ್‌ನಲ್ಲಿ ಕೊಕ್‌ : ತನ್ನ ದೇಶದಲ್ಲಿ ಪಂದ್ಯ ಪ್ರಸಾರ ಬ್ಯಾನ್‌ ಮಾಡಿದ ಯೂನಸ್‌ ಸರ್ಕಾರ..

January 5, 2026
Next Post
ಗ್ರಾಮೀಣ ಭಾರತದ 97% ಹಿಂದುಳಿದ ವರ್ಗಗಳ ಪೋಷಕರು ಶಾಲೆ ಮತ್ತೆ ತೆರೆಯಲು ಬಯಸುತ್ತಾರೆ: ಸಮೀಕ್ಷೆ

20 ತಿಂಗಳ ಬಳಿಕ ಪ್ರಾಥಮಿಕ ಶಾಲೆ ಇಂದಿನಿಂದ ಆರಂಭ : ಮೊದಲ ದಿನವೇ ಶಿಕ್ಷಕರಿಂದ ಪ್ರತಿಭಟನೆ!

Please login to join discussion

Recent News

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

January 17, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada