• Home
  • About Us
  • ಕರ್ನಾಟಕ
Sunday, October 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಇಷ್ಟೊಂದು ಹುಚ್ಚು ಅಭಿಮಾನ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಪ್ರತಿಧ್ವನಿ by ಪ್ರತಿಧ್ವನಿ
June 5, 2025
in Top Story, ಕರ್ನಾಟಕ, ಕ್ರೀಡೆ, ರಾಜಕೀಯ
0
ಇಷ್ಟೊಂದು ಹುಚ್ಚು ಅಭಿಮಾನ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
Share on WhatsAppShare on FacebookShare on Telegram

ಆರ್ ಸಿ ಬಿ ವಿಚಾರದಲ್ಲಂತೂ ಅದನ್ನು ಕನ್ನಡ ನೆಲದ ಭಾಷೆಯ ಅಸ್ಮಿತೆಯೆಂಬಂತೆ ಬಿಂಬಿಸಲಾಗುತ್ತಿದೆ. ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ ತಂಡ ಕಟ್ಟಿಕೊಂಡು ಜೂಜಿಗಿಳಿದರು. ಅದನ್ನು ನೋಡಲು ಜನರನ್ನು ಹುಡುಕಿ ತಂದರು. ಅವರ ಮನಸ್ಸನ್ನು ಹಾಳುಗೆಡವಿ ಅವರನ್ನು ತಮ್ಮ ಉತ್ಪನ್ನಗಳಿಗೆ ಗಿರಾಕಿಗಳನ್ನಾಗಿ ಮಾಡಿಕೊಂಡರು. ಇದು ಕನ್ನಡ ನೆಲದ ತಂಡವಲ್ಲ. ಆರ್ ಸಿ ಬಿ ಖಾಸಗಿಯವರದ್ದು ಎಂಬ ಕನಿಷ್ಠ ಪ್ರಜ್ಞೆಯನ್ನು ಯುವಜನರಲ್ಲಿ ಬೆಳೆಸುವಲ್ಲಿ ನಾವೆಲ್ಲರೂ ಸೋತಿದ್ದೇವೆ. ಸರ್ಕಾರವು ಸಂವೇದನಾಶೀಲವಾಗಿ ವರ್ತಿಸಿಲ್ಲ. ಬಹುಪಾಲು ಜನರು ಆರ್ ಸಿ ಬಿ ಅಭಿಮಾನಿಗಳಾಗುತ್ತಿದ್ದರಿಂದ ಸರ್ಕಾರವು ಅದಕ್ಕೆ ಪರೋಕ್ಷ ಬೆಂಬಲ ನೀಡಿತು. ಇದೆಲ್ಲವೂ ಅಜ್ಞಾನವೇ.

ADVERTISEMENT
RCB Parade Stampede: ನಾನು ಕರ್ನಾಟಕದ ಜನರಿಗಷ್ಟೇ ಉತ್ತರ ಕೊಡೋದು..ಡಿಕೆ ಗರಂ #pratidhvani

ಯುವಜನರು ಹೋಗುತ್ತಿರುವ ದಿಕ್ಕನ್ನು ಸರಿಪಡಿಸುವುದು ಸಂವೇದನಾಶೀಲ ಸರ್ಕಾರದ ಕೆಲಸ. ಯುವಜನ ಕ್ರೀಢಾ ಇಲಾಖೆಯಲ್ಲಿ ಯುವಜನರಿಗೆ ಇದ್ದ ಅನೇಕ ಕಾರ್ಯಕ್ರಮಗಳನ್ನ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಸರ್ಕಾರ ಸೋಲುತ್ತಿದೆ. ಇಲ್ಲಿ ಕಂಪನಿಗಳ ಪ್ರತಿನಿಧಿಸುವ ಕ್ರಿಕೆಟ್ ತಂಡವನ್ನು ವಿಧಾನಸೌಧದ ಎದುರಿಗೆ ಕರೆದು ಸನ್ಮಾನಿಸುವುದು ಎಷ್ಟು ಸರಿ. ಈ ಸರ್ಕಾರ ಸಂವೇದನೆಗಳನ್ನು ಕಳೆದುಕೊಂಡಿದೆ ಎಂದು ಅರಿಯಲು ಇಷ್ಟು ಸಾಕು.

ಯುವಜನರಿಗೆ ತಿಳಿಯಪಡಿಸುವುದೇನೆಂದರೆ, ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಸಣ್ಣ ಸಣ್ಣ ಸಂಗತಿಗಳನ್ನು ನಿತ್ಯವೂ ಸಂಭ್ರಮಿಸೋಣ. ಎಷ್ಟೊಂದು ಸಂಗತಿಗಳಿವೆ, ಟೆಸ್ಟ್ ನಲ್ಲಿ ಪಾಸಾಗಿದ್ದಕ್ಕೆ, ಕಾಲೇಜಿನಲ್ಲಿ ಎಕ್ಸಾಂನಲ್ಲಿ ಪಾಸ್ ಆಗಿದ್ದಕ್ಕೆ, ಅಪ್ಪನ ವ್ಯಾಪಾರದಲ್ಲಿ ಏರುಗತಿ ಕಂಡಿದೆ, ತೋಟದಲ್ಲಿ ಚೆನ್ನಾಗಿ ಬೆಳೆ ಬಂದಿದೆ, ನಮ್ಮ ಮನೆಗೊಂದು ಪುಟ್ಟ ನಾಯಿ ಮರಿ ತಂದಿದ್ದೇವೆ, ಹೊಸ ಬೈಕ್ ತಂದೆವು, ಇಂತಹ ಸಣ್ಣ ಸಣ್ಣ ಸಣ್ಣ ಸಂಗತಿಗಳು ಸಾಕು. ಟೀ ಪಾರ್ಟಿ ಮಾಡಿ ಸಂಭ್ರಮಿಸೋಣ, ಕೇಕ್ ಕತ್ತರಿಸಿ ಸಂಭ್ರಮಿಸೋಣ, ಬಿರಿಯಾನಿ ತಿಂದು, ಚಂದದ ಅಡುಗೆ ಮಾಡಿ ಊಟ ಮಾಡಿ ಸಂಭ್ರಮಿಸೋಣ ಹೀಗೆ. ಇವೆಲ್ಲಾ ನಮ್ಮ ಬದುಕಿನ ಸಂಭ್ರಮಗಳು. ಅವುಗಳನ್ನು ಸಂಭ್ರಮಿಸಿದಷ್ಟು ನಮಗೆ ಎನರ್ಜಿ ಬರುತ್ತದೆ. ಈತರ ನಮ್ಮದಲ್ಲದ ಸಂಭ್ರಮಕ್ಕೆ ಭಾಗಿಯಾಗುವುದು ಬೇರೆಯವರ ಮನೆ ಮದುವೆಗೆ ಹೋಗಿ ಬಂದಂತೆ ಅಷ್ಟೇ, ಅದನ್ನು ಇತಿಮಿತಿಯಲ್ಲಿ ಸಂಭ್ರಮಿಸುವುದು ಒಳ್ಳೆಯದು. ಇಷ್ಟೊಂದು ಹುಚ್ಚು ಅಭಿಮಾನ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಜೀವನ ಕೌಶಲ್ಯ ತರಬೇತುದಾರು. ಇಷ್ಟೊಂದು Build up ಯಾಕೆ? RCB ಗೆದ್ದಿರುವುದು ಬರೀ Indian Premier League (IPL) ಎಂದರೆ ಭಾರತದ ಮತ್ತು ವಿದೇಶಿ ಕ್ರಿಕೆಟ್ ಆಟಗಾರರು ಸೇರಿಕೊಂಡು ಆಟ ಆಡಿ ಗೆದ್ದಿರುವ ಕಪ್ ಇದು. World Cup ಏನೂ ಗೆದ್ದಿಲ್ಲ ಅಲ್ಲವ್ರಾ ? ಇಷ್ಟಕ್ಕೂ RCB ತಂಡದಲ್ಲಿ ಕನ್ನಡಿಗರು ಎಷ್ಟು ಜನ ಈ 2025 ತಂಡದಲ್ಲಿ ಇದ್ದರು? ಅಗತ್ಯಕ್ಕಿಂತ ಹೆಚ್ಚು ಜನರು ಒಂದೇ ಜಾಗದಲ್ಲಿ ಸೇರಿದ್ದರಿಂದ ಈ ರೀತಿಯ ಅನಾಹುತ ಆಗಿದೆ, ತಪ್ಪಿಸಬಹುದಾದ ದುರಂತ,

ಈ ಕ್ರಿಕೆಟ್ ಮೋಹ ಎಷ್ಟು ಹೆಚ್ಚು ಇದೆ ಅಂದರೆ,, ಬೇರೊಬ್ಬರ ಗೋಡೆ ಏರಿ ಒಳಗೆ ಹೋಗುವುದು, ಬೇರೆ ಒಬ್ಬರ ಹೊಸ ಕಾರಿನ ಮೇಲೆ ಏರಿ ಅದನ್ನು ಝಾಕಮ್ ಮಾಡಿ ನಾಶ ಪಡಿಸುವುದು,,

ಈಗ ಅವರ ಕಾರನ್ನು ಸರಿ ಮಾಡಲು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾಗುತ್ತದೆ,ಇದರ ಖರ್ಚುನ್ನು ಯಾರು ಭರಿಸುವುದು?

ದೇಹದಲ್ಲಿ ಹೊಸ ರಕ್ತ ಹರಿಯುತ್ತದೆ ನಿಜ, ಆದರೆ ಯಾವುದು ತಪ್ಪು ಯಾವುದು ಸರಿ ಅಂತ ಜ್ಞಾನ ಬೇಡವೇ? ಶಿಸ್ತು ಇಲ್ಲದೆ ಹೋದಲ್ಲಿ ಅನಾಹುತ ತಪ್ಪಿದ್ದಲ್ಲ,

ಗೆಲುವಿನ ಸಂಭ್ರಮ, ಹೆಮ್ಮೆ, ಸಂತೋಷ ಆಚರಿಸಿ, ಆದರೆ ಹೀಗೇ ಅಲ್ಲ, ನಿಜ, ಈ ಸಾರಿ ಕಪ್ ನಮ್ದೇ ಅಂತ 17 ಸಾರಿ ಹೇಳುತ್ತಾ ಬಂದಿದ್ದೇವೆ, ಅದೃಷ್ಟದಿಂದ ಕಪ್ ನಮಗೆ ಬಂದಿದೆ, ತುಂಬಾ ಸಂತೋಷ,

RCB Parade Stampede: ಸರ್ಕಾರದ ಫೇಲ್ಯೂರ್ ಅಲ್ಲ, ವಿಕ್ಟರಿ ಪರೇಡ್​ಗೆ ಒತ್ತಡ ಇತ್ತು ಎಂದ ಯತೀಂದ್ರ #pratidhvani

ಆದರೆ ಈ ಘೋರ, ತಪ್ಪಿಸಬಹುದಾದ ದುರಂತದಿಂದ ಆ ಆನಂದ, ಸಂತೋಷ ಎಲ್ಲವೂ ಕಳೆದು ಕೊಂಡು ದುಃಖದಲ್ಲಿ ಮುಳುಗಿದ್ದೇವೆ,

ಈ ದುರಂತ ಗೆದ್ದ ಕಪ್ಪಿನ ಸಂಭ್ರಮವನ್ನು ಆಚರಿಸದ ಹಾಗೆ ಮಾಡಿದೆ, ಈ ಘೋರ ಘಟನೆ ಆರ್, ಸಿ, ಬಿ ಕ್ರಿಕೆಟ್ಟಿನ ಇತಿಹಾಸದಲ್ಲಿ ಇನ್ನೂ ಮುಂದೆ, ಪ್ರತಿ ವರುಷ ಮರೆಯದಂತಹ ಕಹಿನೆನಪನ್ನು ಮರುಕಳಿಸುತ್ತ ಇರುತ್ತದೆ,

ನವೀನ ಹೆಚ್ಎ ಹನುಮನಹಳ್ಳಿ
ಅಂಕಣಕಾರರು ಲೇಖಕರು
ಕೆಆರ್ ನಗರ

Tags: ipl victory paradercb ipl victory paradercb parade in bangalorercb parade livercb victory paradercb victory parade 2025rcb victory parade bengalururcb victory parade in bangalorercb victory parade in bengalururcb victory parade livercb victory parade timingRoyal Challengers bangaloreroyal challengers bangalore winsroyal challengers banglore vs punjab kingsvictory paradevictory parade bengaluru
Previous Post

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಪರಿಹಾರ – ಆರ್.ಸಿ.ಬಿ ಫ್ರಾಂಚೈಸಿ ಅಧಿಕೃತ ಘೋಷಣೆ ! 

Next Post

RCB: ದುರ್ಘಟನೆ ವಿಷಯದಲ್ಲಿ ರಾಜಕಾರಣ ಸಲ್ಲದು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Related Posts

Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
0

ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ 78 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು. ಅವರು...

Read moreDetails

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

October 11, 2025

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

October 11, 2025

150ಕೋಟಿ ಹಣ ಎಗುರಿಸಿದ ಸೈಬರ್‌ ವಂಚಕರ ಅರೆಸ್ಟ್..!!

October 11, 2025
Next Post

RCB: ದುರ್ಘಟನೆ ವಿಷಯದಲ್ಲಿ ರಾಜಕಾರಣ ಸಲ್ಲದು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Recent News

Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
Top Story

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!
Top Story

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

by ಪ್ರತಿಧ್ವನಿ
October 11, 2025
Top Story

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

by ಪ್ರತಿಧ್ವನಿ
October 11, 2025
Top Story

150ಕೋಟಿ ಹಣ ಎಗುರಿಸಿದ ಸೈಬರ್‌ ವಂಚಕರ ಅರೆಸ್ಟ್..!!

by ಪ್ರತಿಧ್ವನಿ
October 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

October 11, 2025

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

October 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada