ಕೇಂದ್ರ ಸರ್ಕಾರವನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವುದಕ್ಕೆ ಹೆಸರುವಾಸಿಯಾಗಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೆ ಸುದ್ದಿ ಕೇಂದ್ರವಾಗಿದ್ದಾರೆ.
ರಾಹುಲ್ ಗಾಂಧಿಯ ಸಂಸದ ಸ್ಥಾನ ಅನರ್ಹಗೊಳಿಸುವಿಕೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸ್ವಾಮಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ,
ರಾಹುಲ್ ಗಾಂಧಿಯನ್ನು ಬುದ್ಧು ಎಂದು ಕರೆದ ಸುಬ್ರಮಣಿಯನ್ ಸ್ವಾಮಿ, “ಬುದ್ಧುವಿನ ವಿರುದ್ಧ ಮೋದಿ ಸರ್ಕಾರದ ಕ್ರಮವನ್ನು ಅಮೆರಿಕ ವಿದೇಶಾಂಗ ಇಲಾಖೆ ಖಂಡಿಸಿದೆ. ಇದಕ್ಕೆ ಮೋದಿ ಸರ್ಕಾರ ಹೇಗೆ ಉತ್ತರಿಸುತ್ತದೆ?” ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, ಚಿಂತೆ ಮಾಡಬೇಡಿ, ಡಾ. ಜೈಶಂಕರ್ ಇದನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸ್ವಾಮಿ, ನಿಭಾಯಿಸುವುದು ಹೇಗೆ? ಚೀನಾದೊಂದಿಗೆ ತೆವಳುತ್ತಾ ಭಿಕ್ಷೆ ಬೇಡಿದಂತೆಯಾ?” ಎಂದು ತೀಕ್ಷ್ಣವಾಗಿ ಕಿಚಾಯಿಸಿದ್ದಾರೆ.
ಮತ್ತೊಬ್ಬ ಟ್ವಿಟರ್ ಬಳಕೆದಾರ ಅಷ್ಟಕ್ಕೇ ಸುಮ್ಮನಿರದೇ, “ಸರ್, ನೀವು ಯಾವುದೇ ಸರ್ಕಾರಕ್ಕಿಂತಲೂ ಕಡಿಮೆ ಇಲ್ಲ, ನೀವು ಅಮೇರಿಕಾದ ಸ್ಟೇಟ್ ಡಿಪಾರ್ಟ್ಮೆಂಟ್ ವಿರುದ್ಧ ಕಟುವಾದ ಟೀಕೆಗಳನ್ನು ಮಾಡುತ್ತೀರೆಂಬ ಭರವೆಸಯಿದೆ ಎಂದಿದ್ದಾರೆ. ಸ್ವಾಮಿ ಇದಕ್ಕೂ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದು, “ಮೋದಿ ಸರ್ಕಾರವು ಚೀನಾದ ಎದುರು ಮಾಡಿದಂತೆಯೇ ಅಮೇರಿಕಾದ ಎದುರೂ ಮಾಡುತ್ತದೆ. ಹಾಗಿದ್ದ ಮೇಲೆ ನಾನು ಯಾಕೆ ಟೀಕೆ ಮಾಡಲು ಹೋಗಬೇಕು? ಎಂಬರ್ಥದಲ್ಲಿ ಉತ್ತರಿಸಿದ್ದಾರೆ.