ಶಿವಮೊಗ್ಗ ನಗರದಲ್ಲಿ ನಡೆದ ಭಜರಂಗದಳ ಕಾರ್ಯಕರ್ತನ ಕೊಲೆಯಿಂದಾಗಿ ಶಿವಮೊಗ್ಗ ಉದ್ವಿಗ್ನ ಪರಿಸ್ಥಿತಿಯಲ್ಲಿದೆ. ಹೌದು, ಮೃತ ಹರ್ಷನ ಅಂತಿಮಯಾತ್ರೆ ವೇಳೆ ಉದ್ರಿಕ್ತರ ಗುಂಪಿನಿಂದ ಕಲ್ಲು ತೂರಾಟ ನಡೆದಿದೆ. ಶಿವಮೊಗ್ಗದ ಕೆ.ಆರ್.ಪುರಂನ ಸಿದ್ದಯ್ಯ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಅಶ್ರವಾಯು ಪ್ರಯೋಗಿಸಿದ್ದಾರೆ.
ಮೆರವಣಿಗೆ ಮುಂದುವರೆದ ನಂತರ ಮತ್ತೆ ಶುರುವಾದ ಕಲ್ಲುತೂರಾಟವನ್ನು ನಿಲ್ಲಿಸಲು ಪೊಲೀಸರು ಉದ್ರಿಕ್ತರ ಮೇಲೆ ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಮೃತ ಹರ್ಷನ ಮನೆಯಿಂದ ಶುರುವಾದ ಅಂತಿಮಯಾತ್ರೆ ಗಾಂಧಿಬಜಾರ್, ಬಿ.ಹೆಚ್.ರಸ್ತೆ, ಹಳೆ ಬಸ್ ನಿಲ್ದಾಣ ಮಾರ್ಗವಾಗಿ ವಿದ್ಯಾನಗರ ರೋಟರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನಗಲೊಂದಿಗೆ ನೆರೆವೇರಿಸಲಾಯಿತ್ತು.
