ಇಂದು ಬೆಂಗಳೂರಿನಲ್ಲಿ ( Bangalore ) ಇಸ್ರೋ ( ISRO ) ವಿಜ್ಞಾನಿಗಳನ್ನು ( Scientist ) ಅಭಿನಂದಿಸಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ( Narendra Modi ) ರೋಡ್ ಶೋವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಸಾವಿರ ಜನ ನೆರೆದು ಪ್ರಧಾನಿಯನ್ನ ಕಣ್ತುಂಬಿಕೊಂಡಿದ್ದಾರೆ.

ಇನ್ನು ಇದೇ ಮೊದಲ ಬಾರಿಗೆ ಕರ್ನಾಟಕ ( Karnataka ) ವಿಧಾನಸಭೆ ಚುನಾವಣೆಯ ( Assembly Election ) ಸೋಲಿನ ಬಳಿಕ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ, ರಾಜ್ಯ ನಾಯಕರಿಂದ ತುಸು ಅಂತರವನ್ನು ಕಾಯ್ದುಕೊಂಡಿರುವ ಮಾತುಗಳು ಕೇಳಿಬಂದಿದ್ದವು, ಜೊತೆಗೆ ರಾಜ್ಯ ಬಿಜೆಪಿ ನಾಯಕರ ( BJP Leaders ) ಮೇಲೆ ಪ್ರಧಾನಿ ನರೇಂದ್ರ ಮೋದಿ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕ ಎಂಬಂತೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋನಲ್ಲಿ ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಒಳಗೆ ನಿಂತು ಪ್ರಧಾನಿ ಮೋದಿಯವರತ್ತ ಕೈ ಬೀಸುತ್ತಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.

ಪ್ರಧಾನಿ ಮೋದಿ ಬೇರೆ ಕಡೆಗೆ ನೋಡಿ ಕೈಬೀಸುತ್ತಿದ್ದು ರಾಜ್ಯ ಬಿಜೆಪಿ ನಾಯಕರುಗಳಾದ ಆರ್.ಅಶೋಕ್, ನಳಿನ್ ಕುಮಾರ್ ಕಟೀಲ್, ಮುನಿರತ್ನ, ಗೋಪಾಲಯ್ಯ ಸೇರಿದ ಹಾಗೆ ಹಲವು ಮಂದಿ ರಾಜ್ಯ ಬಿಜೆಪಿ ನಾಯಕರು ಬ್ಯಾರಿಕೆಟ್ ನ ಮುಂದೆ ನಿಂತು ತಾ ಮುಂದು ನಾ ಮುಂದು ಎಂಬಂತೆ ಪ್ರಧಾನಿ ಮೋದಿ ಅವರತ ಕೈಬೀಸಿದ್ದಾರೆ
ಇನ್ನು ಈ ಫೋಟೋ ಟ್ರೋಲ್ ಗಳಿಗೆ ಆಹಾರವಾಗಿದ್ದು ರಾಜ್ಯದ ಮರ್ಯಾದೆ ತೆಗೆಯಲು, ನಮ್ಮ ರಾಜ್ಯ ಬಿಜೆಪಿ ನಾಯಕರೇ ಸಾಕು ಎಂದು ಸಾಕಷ್ಟು ಮಂದಿ ಬಿಜೆಪಿ ನಾಯಕರ ಈ ನಡೆಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.











