• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, February 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಮಿಳುನಾಡಿನಲ್ಲಿ ಚುನಾವಣಾ ವರ್ಷಕ್ಕೆ ಸ್ಟಾಲಿನ್​ ರಣತಂತ್ರ..

ಕೃಷ್ಣ ಮಣಿ by ಕೃಷ್ಣ ಮಣಿ
April 29, 2025
in Top Story, ದೇಶ, ರಾಜಕೀಯ
0
ತಮಿಳುನಾಡಿನಲ್ಲಿ ಚುನಾವಣಾ ವರ್ಷಕ್ಕೆ ಸ್ಟಾಲಿನ್​ ರಣತಂತ್ರ..
Share on WhatsAppShare on FacebookShare on Telegram

ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಚುನಾವಣಾ ರಣತಂತ್ರ ಮಾಡುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಎಐಡಿಎಂಕೆ (AIDMK) ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿ(BJP), ಸೀಟು ಹಂಚಿಕೆ ಕಸರತ್ತು ಮಾಡುತ್ತಿದೆ. ಎಐಡಿಎಂಕೆ ಜೊತೆಗಿನ ಮೈತ್ರಿಗಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ (Ex IPS Anna Malai) ಅವರನ್ನು ತಮಿಳುನಾಡು ರಾಜಕೀಯದಿಂದ ದೂರ ಇಡುವ ಕೆಲಸ ಮಾಡಿದೆ. ಇದೀಗ ಬಿಜೆಪಿ ಹಾಗು ಎಐಡಿಎಂಕೆ ರಣತಂತ್ರಕ್ಕೆ ಪ್ರತಿತಂತ್ರ ಮಾಡಲು ಹಾಲಿ ಅಧಿಕಾರದಲ್ಲಿ ಇರುವ ಡಿಎಂಕೆ (DMK) ಮುಂದಾಗಿದೆ. ಸಂಪುಟ ಪುನಾರಚನೆ ಮಾಡಲು ಎಂ.ಕೆ ಸ್ಟಾಲಿನ್ (MK Stalin) ಮುಂದಾಗಿದ್ದಾರೆ.

ADVERTISEMENT

ಕರುಣಾನಿಧಿ ಪುತ್ರ ಎಂ.ಕೆ ಸ್ಟಾಲಿನ್​ ಮುಖ್ಯಮಂತ್ರಿ ಆಗಿ ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದು, ಮುಂದಿನ ಬಾರಿಯ ಚುನಾವಣೆಗೂ ಮುನ್ನ ಅಸಮಾಧಾನಿತ ಸಣ್ಣ ಪುಟ್ಟ ಸಮುದಾಯಗಳನ್ನು ಸಮಾಧಾನ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಈಗ ಹಾಲಿ ಸಂಪುಟದಲ್ಲಿ ಕೆಲಸ ಮಾಡಿರುವ ಸಚಿವರನ್ನು ಪಕ್ಷದ ಕಾರ್ಯಕ್ಕೆ ನಿಯೋಜನೆ ಮಾಡಿ ಅವಕಾಶ ಸಿಗದೆ ಇರುವ ಜಾತಿಗಳ ಶಾಸಕರನ್ನು ಸಚಿವರನ್ನಾಗಿ ಮಾಡಿ, ಮತಗಳಿಕೆಗೆ ಯೋಜನೆ ರೂಪಿಸಿದ್ದಾರೆ. ಇದೇ ಕಾರಣಕ್ಕೆ ಇಬ್ಬರು ಸಚಿವರು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರಣ್ಯ ಸಚಿವ ಕೆ ಪೊನ್​ಮುಡಿ ಹಾಗು ವಿದ್ಯುತ್​​, ಅಬಕಾರಿ ಸಚಿವ ವಿ. ಸೆಂಥಿ ಬಾಲಾಜಿ (Senthi Balaji) ಭಾನುವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ.

CM Siddaramaiah : ಏನ್ ಯಾವನ್ ಅವ SP ವೇದಿಕೆ ಮೇಲೆಯೇ CM ಗರಂ #pratidhvani

​ಇತ್ತೀಚಿಗಷ್ಟೇ ವಿ. ಸೆಂಥಿ ಬಾಲಾಜಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದರು. ಜಾರಿ ನಿರ್ದೇಶನಾಲಯ (ED) ವಿಚಾರಣೆಯನ್ನೂ ಎದುರಿಸಿದ್ದರು. ಇನ್ನು ಸುಪ್ರೀಂಕೋರ್ಟ್​ ಕೂಡ ಸಚಿವ ಸ್ಥಾನ ಅಥವಾ ವೈಯಕ್ತಿಕ ಸ್ವಾತಂತ್ರ್ಯ ಎರಡಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸೂಚನೆ ಕೊಟ್ಟಿತ್ತು. ಒಂದು ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದರೆ ಬೇಲ್​ ಹಿಂಪಡೆಯುವುದಾಗಿಯೂ ಸೂಚನೆ ಕೊಟ್ಟಿತ್ತು. ಹೀಗಾಗಿಯೇ ಸಚಿವ ಸ್ಥಾನಕ್ಕೆ ವಿ ಸೆಂಥಿ ಬಾಲಾಜಿ ರಾಜೀನಾಮೆ ಕೊಡುವುದು ಅನಿವಾರ್ಯ ಆಗಿತ್ತು ಅನ್ನೋ ಚರ್ಚೆಗಳು ನಡೆಯುತ್ತಿವೆ.

ಇನ್ನು ಡಾ ಕೆ. ಪೊನ್​ಮುಡಿ ಕೂಡ ಇತ್ತೀಚಿಗೆ ಶೈವಾಸ್​ ಹಾಗು ವೈಷ್ಣವಾಸ್​ ನಡುವೆ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ವಿವಾದದ ಸ್ವರೂಪವನ್ನೂ ಪಡೆದಿತ್ತು. ಹೇಳಿಕೆಗೆ ಭಾರೀ ವಿರೋಧ ಹಾಗು ಟೀಕೆಗೆ ಒಳಗಾದ ಬಳಿಕ ಪ್ರಕರಣ ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿದೆ. ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇರುವ ಕಾರಣಕ್ಕೆ ಪಾರ್ಟಿಯಲ್ಲಿ ನೀಡಿದ್ದ ಸ್ಥಾನಮಾನ ಹಾಗು ಸಚಿವ ಸ್ಥಾನವನ್ನು ವಾಪಸ್​ ಪಡೆಯುವ ನಿರ್ಧಾರ ಮಾಡಲಾಗಿದೆ. ಇದ್ರ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಮಾಡಿ ಹಿರಿಯ ನಾಯಕರನ್ನು ಪಕ್ಷದ ಜವಾಬ್ದಾರಿ ನೀಡಿ, ಸ್ವಚ್ಛ ಸಂಪುಟ ಇಟ್ಟುಕೊಂಡು ಚುನಾವಣೆ ಮಾಡಲು ಸ್ಟಾಲಿನ್​ ಮುಂದಾಗಿದ್ದಾರೆ. ವಿರೋಧ ಪಕ್ಷಗಳ ಬಾಯಿಗೆ ಆಹಾರ ಆಗದಂತೆ ಗೆಲುವು ಪಡೆಯುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎನ್ನುವುದು ಸದ್ಯಕ್ಕೆ ನಡೆಯುತ್ತಿರೋ ಚರ್ಚೆ.

Tags: amit shah in tamil naduTamil Nadutamil nadu assembly electionstamil nadu assembly elections 2021tamil nadu assembly elections result 2021tamil nadu electiontamil nadu election newstamil nadu election resultstamil nadu election results livetamil nadu electionstamil nadu elections 2021tamil nadu elections 2021 latest newstamil nadu elections newstamil nadu newstamil nadu politicstamil nadu polls
Previous Post

ಭಾರತ ಯುದ್ಧ ಮಾಡಿದ್ರೆ ನಾವೂ ರೆಡಿ ಎಂದ ಪಾಕಿಸ್ತಾನ..!

Next Post

ದೊಡ್ಡ ಆಟಕ್ಕೆ ಜೊತೆಯಾದ ರಾಜವರ್ಧನ್ & ಚಂದ್ರಚೂಡ್..!!

Related Posts

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ
Top Story

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

by ಪ್ರತಿಧ್ವನಿ
February 8, 2026
0

ರಾಯಚೂರು: ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ ಅವರ ಪುತ್ರನ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಲಿಂಗಸುಗೂರಿನಲ್ಲಿ...

Read moreDetails
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

February 8, 2026
ವರ್ಗಾವಣೆ ಬಳಿಕವೂ ಅಧಿಕಾರಿಗಳಿಗೆ ಬೆದರಿಕೆ : IPS ವರ್ತಿಕಾ ಕಟಿಯಾರ್ ವಿರುದ್ಧ ಗಂಭೀರ ಆರೋಪ

ವರ್ಗಾವಣೆ ಬಳಿಕವೂ ಅಧಿಕಾರಿಗಳಿಗೆ ಬೆದರಿಕೆ : IPS ವರ್ತಿಕಾ ಕಟಿಯಾರ್ ವಿರುದ್ಧ ಗಂಭೀರ ಆರೋಪ

February 8, 2026
Next Post

ದೊಡ್ಡ ಆಟಕ್ಕೆ ಜೊತೆಯಾದ ರಾಜವರ್ಧನ್ & ಚಂದ್ರಚೂಡ್..!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada