ಕರ್ನಾಟಕ ರಾಜ್ಯ ಸರ್ಕಾರದ (Karnataka state government) ಮಾದರಿಯಲ್ಲಿ ಆಂಧ್ರ ಸರ್ಕಾರ (Andra goernment) ಕೂಡ ಶಕ್ತಿ ಯೋಜನೆ ಜಾರಿಗೆ ತಂದಿರು ಹಿನ್ನಲೆ, ಸಾರಿಗೆ ಬಸ್ ಗಳಿಂದ ರಾಯರ ಮಠಕ್ಕೆ ಭಕ್ತ ಸಾಗರ ಹರಿದು ಬಂದಿದೆ. ಈ ಮೂಲಕ ಮಂತ್ರಾಲಯದ (Mantralaya) ಶ್ರೀ ರಾಘವೇಂದ್ರ ಸ್ವಾಮಿಗಳ (Sri Raghaendra swamy) ಮಠಕ್ಕೆ ಕೋಟಿ ಕೋಟಿ ಕಾಣಿಕೆ ಸಂಗ್ರಹವಾಗಿದೆ.

ಸಾಲು ಸಾಲು ರಜೆ, ಹಬ್ಬಗಳ ಹಿನ್ನಲೆ ಮಂತ್ರಾಲಯ ಮಠಕ್ಕೆ ರಾಯರ ಸೇವೆಗಾಗಿ ಸಹಸ್ರಾರು ಭಕ್ತರು ಆಗಮಿಸಿದ್ದು, ದೊಡ್ಡ ಪ್ರಮಾಣದ ದೇಣಿಗೆ ಕೂಡ ಹರಿದು ಬಂದಿದೆ. ಕೇವಲ 31 ದಿನದಲ್ಲಿ 3 ಕೋಟಿ 30 ಲಕ್ಷದ 57 ಸಾವಿರದ 440 ರೂಪಾಯಿ (3.3 crores) ಕಾಣಿಕೆ ಸಂಗ್ರಹವಾಗಿದೆ.
ನಿನ್ನೆ ಮಂತ್ರಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದ್ದು, ನೂರಾರು ಮಠದ ಸಿಬ್ಬಂದಿ ಹಾಗೂ ಭಜನಾ ಮಂಡಳಿಯಿಂದ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಶಾಲಾ ಕಾಲೇಜು ರಜೆಗಳು, ನವರಾತ್ರಿ, ದಸರಾ, ಹಿನ್ನಲೆ ಈ ಬಾರಿ ರಾಯರ ಮಠಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದಾರೆ.
I











