ನಾಡ ಹಬ್ಬ ದಸರಾ (Dasara festival) ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ ಆರಂಭ ಮಾಡಲಾಗಲಾಗಿದೆ. ಸಾಮಾನ್ಯವಾಗಿ ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಹೀಗಾಗಿ ಜನ ದಟ್ಟಣೆ ತಪ್ಪಿಸಲು ರೈಲ್ವೆ ಇಲಾಖೆ (Railway department) ಹೆಚ್ಚುವರಿ ರೈಲು ಸೇವೆಯನ್ನ ಆರಂಭಿಸಿದೆ.
ಸದ್ಯ ನಾಳೆಯಿಂದ, ಅಂದ್ರೆ ಅಕ್ಟೋಬರ್ 10ರಿಂದ 13ರವರೆಗೆ (October 10th to 13th) ಈ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.ಹಬ್ಬಳ್ಳಿ- ಯಶವಂತಪುರ, ಯಶವಂತಪುರ-ಬೆಳಗಾವಿ, ಬೆಳಗಾವಿ-ಮೈಸೂರಿಗೆ ಎಕ್ಸ್ ಪ್ರೆಸ್ ರೈಲು ಸೇವೆ ಮಾಡಲಾಗಿದೆ.
ಇಮ್ಮು ಇದರ ಜೊತೆಗೆ ಮೈಸೂರು-ಕೆ.ಎಸ್.ಆರ್ ಬೆಂಗಳೂರು, ಮೈಸೂರು-ಚಾಮರಾಜನಗರಕ್ಕೆ ಕಾಯ್ದಿರಿಸದ ವಿಶೇಷ ರೈಲು ವ್ಯವಸ್ಥೆ ಮಾಡಿದ್ದು, ಈ ಬಗ್ಗೆ ರೈಲ್ವೆ ಇಲಾಖೆ ಮಾಧ್ಯಮ ಪ್ರಕಟಣೆ ಮಾಡಿದೆ. ಮೈಸೂರಿಗೆ ತೆರಳಲು ರೈಲುಗಳನ್ನು ಅವಲಂಭಿಸಿದವರಿಗೆ ಈ ಸುದ್ದಿ ಖುಷಿ ನೀಡಿದೆ.