ನಟ ಪ್ರಭಾಸ್ಗೆ ಇತ್ತೀಚೆಗೆ ಯಾವ ಸಿನಿಮಾವೂ ಕೂಡ ಕೈ ಹಿಡಿದಿಲ್ಲ. ಬಾಹುಬಲಿ ಸಿನಿಮಾದ ನಂತರದಲ್ಲಿ ಹೇಳಿಕೊಳ್ಳುವಂತಹ ಉತ್ತಮ ಚಿತ್ರವನ್ನ ಕೂಡ ಪ್ರಭಾಸ್ ನೀಡಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಆದಿ ಪುರಷ್ ಚಿತ್ರದ ಟೀಸರ್ ಕೂಡ ಸಾಕಷ್ಟು ವಿವಾದವನ್ನ ಹುಟ್ಟು ಹಾಕಿತ್ತು. ಬಳಿಕ ಸಿನಿಮಾ ತಂಡ ಆದಿ ಪುರುಷ್ ಚಿತ್ರದಲ್ಲಿನ ಲೋಪಗಳನ್ನ ಸರಿಪಡಿಸಿ, ಗ್ರಾಫಿಕ್ಸ್ ಹಾಗೂ ವಿಎಫ್ಎಕ್ಸ್ ಸಮಸ್ಯೆಗಳನ್ನ ಬಗೆ ಹರಿಸಿದ ಟ್ರೈಲರ್ ಅನ್ನು ಬಿಡುಗಡೆಗೊಳಿಸಿತ್ತು.

ಆದ್ರೂ ಕೂಡ ಅಭಿಮಾನಿಗಳು ಈ ಚಿತ್ರದ ಬಗ್ಗೆ ಯಾಕೋ ನೀರಸ ಪ್ರತಿಕ್ರಿಯೆಯನ್ನ ನೀಡುತ್ತಿದ್ದಾರೆ, ಹೀಗಾಗಿ ಈ ಚಿತ್ರ ಬಿಡುಗಡೆಗೂ ಮುನ್ನವೇ ಸೋಲಲಿದೆ ಎಂದು ಸಾಕಷ್ಟು ಜನ ಸಿನಿ ಪಂಡಿತರು ತಮ್ಮ ಪೂರ್ವಗ್ರಹ ಪೀಡಿತವಾದ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಸಾಕಷ್ಟು ಮಂದಿ ಹೇಳ್ತಾ ಇರೋದು ಪ್ರಭಾಸ್ಗೆ ಚಿತ್ರರಂಗದಲ್ಲಿ ಪುನರ್ ಜೀವನ ನೀಡುವ ಚಿತ್ರ ಅಂದ್ರೆ ಅದು ಸಲಾರ್ ಅಂತ.
ಹೌದು.. ಹೀಗೊಂದು ಅಭಿಪ್ರಾಯ ಟಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ. ಈಗಾಗಲೇ ಉಗ್ರಂ ಹಾಗೂ ಕೆಜಿಎಫ್ನಂತ ಮಾಸ್ ಸಕ್ಸಸ್ ಚಿತ್ರಗಳನ್ನ ಕೊಟ್ಟಿರುವ ನಿರ್ದೇಶಕ ಪ್ರಶಾಂತ್ ನೀಲ್, ಸಲಾರ್ ಚಿತ್ರವನ್ನ ನಿರ್ದೇಶಿಸುತ್ತಿರುವುದು, ಒಂದು ಕಡೆ ನಿರೀಕ್ಷೆಯನ್ನ ಹೆಚ್ಚು ಮಾಡಿದ್ರೆ ಈ ಸಿನಿಮಾದಲ್ಲಿ ಪ್ರಮುಖ ತಾರಾಗಣದ ಮೂಲಕ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸುತ್ತಿದೆ.
ಈ ಹಿಂದೆ, ನಟ ಪ್ರಮೋದ್ ಅವರನ್ನ ಸಲಾರ್ ತಂಡಕ್ಕೆ ಸೇರ್ಪಡೆಗೊಳಿಸಿದ್ದ, ನಿರ್ದೇಶಕರ ಪ್ರಶಾಂತ್ ನೀಲ್ ಈ ಬಾರಿ ಭಜರಂಗಿ ಲೋಕಿ ಖ್ಯಾತಿಯ ಸೌರವ್ ಲೋಕೇಶ್ ಅವರನ್ನ ಸೇರ್ಪಡೆಗೊಳಿಸಿದ್ದಾರೆ. ತಮ್ಮ ಚಿತ್ರಗಳಿಗೆ ಸದಾ ಪ್ರತಿಭಾನ್ವೀತ ನಟರನ್ನೇ ಆಯ್ಕೆ ಮಾಡುವ ಹಾಗೂ ಮನ್ನಣೆ ನೀಡುವ ಪ್ರಶಾಂತ್ ನೀಲ್, ಈ ಬಾರಿ ಮತ್ತೊಬ್ಬ ಪ್ರತಿಭಾನ್ವಿತ ನಟರಾದ ಸೌರವ್ ಲೋಕೇಶ್ರನ್ನ ಆಯ್ಕೆ ಮಾಡಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಅಘಾದವಾದ ಪ್ರತಿಭೆಯನ್ನ ಹೊಂದಿದ್ರು ಹೇಳಿಕೊಳ್ಳುವಂತ ಅವಕಾಶಗಳು ಭಜರಂಗಿ ಲೋಕಿ ಅವರಿಗೆ ಒಲಿದು ಬಂದಿರಲಿಲ್ಲ. ಆದ್ರೆ ಈ ಬಾರಿ ಸಲಾರ್ನಂತಹ ಬಿಗ್ ಬಜೇಟ್ ಸಿನಿಮಾದಲ್ಲಿ ಸೌರವ್ ಲೋಕೇಶ್ ಅವರಿಗೆ ಅವಕಾಶ ಹುಡುಕಿಕೊಂಡು ಬಂದಿರುವುದು, ಅವರ ಪ್ರತಿಭೆ ಎಂತಹದ್ದು ಅನ್ನೋದನ್ನ ಸಾಬೀತು ಮಾಡಿದೆ.
ಒಟ್ಟಾರೆಯಾಗಿ ಕನ್ನಡದ ನಿರ್ಮಾಣ ಸಂಸ್ಥೆ ಸಲಾರ್ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಕನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಕನ್ನಡ ನಟರೂ ಸೇರ್ಪಡೆಗೊಳ್ಳುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿರೋದಂತು ಸುಳ್ಳಲ್ಲ.