ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಸಂಭಂಧಿಸಿದಂತೆ ಪ್ರತಿಭಟನೆಗಳ ( Protest ) ಕಾವು ಹೆಚ್ಚಾಗುತ್ತಿದೆ. ಇದೀಗ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ ಚಿಲಿಂಬಿ ಮಂಗಳೂರು ( Mangalore ) ಇದರ ವತಿಯಿಂದ ಪ್ರತಿಭಟನೆಗೆ ಸಿದ್ದವಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪ್ರಧಾನ ಸಂಚಾಲಕರಾದ ಬಾಲಕೃಷ್ಣ ಡಿ.ಬಿ ಅವರು, ಬೆಳ್ತಂಗಡಿ ತಾಲೂಕಿನ ಕು.ಸೌಜನ್ಯ ಕೊಲೆ ಪ್ರಕರಣವು ನಡೆದು 12 ವರುಷಗಳು ಕಳೆದರೂ ನೈಜ ಆರೋಪಿಗಳು ಸಿಗದಿರುವುದರಿಂದ ಪ್ರಕರಣದ ತನಿಖೆಯನ್ನು ಸರಕಾರವು ವಿಶೇಷ ಮುತುವರ್ಜಿ ವಹಿಸಿ ಸೂಕ್ತವಾದ ಮರು ತನಿಖೆ ನಡೆಸುವಂತೆ ಸೌಜನ್ಯ ಪ್ರಕರಣದ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ ಒತ್ತಾಯಿಸುತ್ತದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಮೂರು ದಿನಗಳ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ. ಈ ಧರಣಿ ಸತ್ಯಗ್ರಹವು ಸೆ.11ರಂದು ಪ್ರಾರಂಭಗೊಂಡು ಸೆ.13ರವರೆಗೆ ನಡೆಯಲಿದೆ. ಇನ್ನು ಸೆ.11 ರಂದು ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕಿನವರು, ಹಾಗೆಯೇ ಸೆ,12 ರಂದು ವಿಟ್ಲ ಮತ್ತು ಪುತ್ತೂರು ತಾಲೂಕಿನವರು ಮತ್ತು ಸೆ,13 ರಂದು ಸುಳ್ಯ ಮತ್ತು ಕಡಬ ತಾಲೂಕಿನವರು ಈ ಧರಣಿಯಲ್ಲಿ ಭಾಗವಹಿಸಲಿದ್ದಾರೆ.

ಕು.ಸೌಜನ್ಯ ಮತ್ತು ಅವರ ಕುಟುಂಬದವರಿಗೆ ನ್ಯಾಯ ಒದಗಿಸಿ ಕೊಡುವ ಮೂಲಕ ಈ ಹೋರಾಟದಲ್ಲಿ, ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಮರು ತನಿಖೆ ನಡೆಸುವಂತೆ ಮನವಿ ನೀಡಲಿದ್ದಾರೆ. ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸೌಜನ್ಯ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ ಇದರ ಪ್ರಧಾನಿ ಸಂಚಾಲಕರಾದ ಬಾಲಕೃಷ್ಣ ಡಿ.ಬಿ ಅವರು ತಿಳಿಸಿದ್ದಾರೆ.