ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರ ಅಧ್ಯಕ್ಷತೆಯಲ್ಲಿ ಮತ್ತು ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರ ಘನ ಉಪಸ್ಥಿತಿಯಲ್ಲಿ ಇಂದು ವಿಕಾಸ ಸೌಧದಲ್ಲಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೊದಲನೆ ಸರ್ವ ಸದಸ್ಯರ ಸಭೆಯು ಜರುಗಿತು.

ಸಭೆಯಲ್ಲಿ ಕಾರ್ಮಿಕ ಮತ್ತು ಸಾರಿಗೆ ಕಾರ್ಯದರ್ಶಿಗಳಾದ ಶ್ರೀ ಎನ್.ವಿ.ಪ್ರಸಾದ್, ಕಾರ್ಮಿಕ ಇಲಾಖೆಯ ಆಯುಕ್ತರಾದ ಶ್ರೀ ಗೋಪಾಲಕೃಷ್ಣ, ಸಾರಿಗೆ ಆಯುಕ್ತರಾದ ಶ್ರೀ ಯೋಗೀಶ್, ಅಪರ ಸಾರಿಗೆ ಆಯುಕ್ತರಾದ ಶ್ರೀ ಉಮಾಶಂಕರ್, ಉಪ ಸಾರಿಗೆ ಆಯುಕ್ತರಾದ ಶ್ರೀ ಮೂರ್ತಿ, ವಾಣಿಜ್ಯ ತೆರಿಗೆ ಆಯುಕ್ತರಾದ ಶ್ರೀ ವಿಪುಲ್ ಬನ್ಸಾಲ್, ಶ್ರೀ ನವೀನ್ ರೆಡ್ಡಿ, ಶ್ರೀ ಜಯಣ್ಣ ಪೂಜಾರಿ, ಶ್ರೀ ರಘು, ಶ್ರೀ ಜಿ.ನಾರಾಯಣ ಸ್ವಾಮಿ, ಶ್ರೀ ಜಿ ಆರ್ ಷಣ್ಮುಗಪ್ಪ, ಶ್ರೀ ರಾಜು, ಜಂಟಿ ಕಾರ್ಮಿಕ ಆಯುಕ್ತರಾದ ಚಿದಾನಂದ, ಉಪ ಕಾರ್ಮಿಕ ಆಯುಕ್ತರಾದ ಶ್ರೀ ರವಿಕುಮಾರ್, ಮಂಡಳಿಯ ನೂತನ ಸದಸ್ಯರುಗಳಾದ ಶ್ರೀ ಕೆ.ಆರ್.ಧನಂಜಯ, ಶ್ರೀ ಸತ್ಯನಾರಾಯಣ, ಶ್ರೀ ರೋಹಿತ್, ಶ್ರೀ ಲಕ್ಷ್ಮಣ ಕುಮಾರ್ ಪಾಲ್ಗೊಂಡಿದ್ದರು.
