ಮಾಜಿ ಸಚಿವ ಎಚ್ ಡಿ ರೇವಣ್ಣ (HD revanna) ಅವರ ಮೇಲೆ ಹೊಳೆನರಸೀಪುರದಲ್ಲಿ (Holenarasipura) ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ (Sexual harassment ) ಸಂಬಂಧಪಟ್ಟಂತೆ ಬೆಂಗಳೂರಿನ (Bangalore) ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಇಂದು ಸ್ಥಳ ಮಹಜರು ಪ್ರಕ್ರಿಯೆ ನಡೆಸಿದರು . ಈ ಸಂದರ್ಭದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಏಕ ಪಕ್ಷಿಯವಾಗಿ ನಡೆದಿದೆ ಎಂದು ರೇವಣ್ಣ ಪರ ವಕೀಲರು ಆರೋಪಿಸಿದ್ದಾರೆ.
ಸ್ಥಳ ಮಹಜರು ಮಾಡುವಾಗ ಆರೋಪಿ ಸ್ಥಳದಲ್ಲಿ ಇರಬಾರದು. ಆದರೆ ಕುಟುಂಬದ ಸದಸ್ಯರು ಸ್ಥಳ ಮಹಜರು ಪ್ರಕ್ರಿಯೆ ಸಂದರ್ಭದಲ್ಲಿ ಹಾಜರಿರಬಹುದು ಅಥವಾ ಅವರ ಪರವಾಗಿ ವಕೀಲರು ಹಾಜರಿರಬಹುದು. ಆದರೆ ಇಲ್ಲಿ ವಕೀಲರನ್ನ ಹೊರಗಿಟ್ಟು ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ . ಇದು ಒಬ್ಬ ವ್ಯಕ್ತಿ ಅಥವಾ ಪಕ್ಷದ ಪರವಾಗಿ ತಮಗಿರುವ ಆದೇಶದಂತೆ, ಹೇಗೆ ಬೇಕೋ ಹಾಗೆ ಕಾನೂನು ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ ಎಂದು ರೇವಣ್ಣ ಪರ ವಕೀಲ ಗೋಪಾಲ್ (lawyer gopal) ಆರೋಪ ಮಾಡಿದ್ರು.
ಸೋಮವಾರ ಬೆಳಗ್ಗೆ 10.30 ರಿಂದ 11 ಗಂಟೆ ಸುಮಾರಿಗೆ ಸ್ಥಳದಲ್ಲಿ ಹಾಜರಿದ್ದು ಸ್ಥಳ ಮಹಜರು ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಎಸ್ಐಟಿ (SIT) ವಕೀಲ ಗೋಪಾಲಗೆ ನೋಟಿಸ್ ನೀಡಿತು. ಹೀಗಾಗಿ ವಕೀಲರಾದ ಗೋಪಾಲ್ ಕೂಡ ಸ್ಥಳದಲ್ಲಿ ಹಾಜರಿದ್ದರು . ಆದ್ರೆ ಅಧಿಕಾರಿಗಳು ವಕೀಲರನ್ನ ಹೊರಗೆ ಬಿಟ್ಟು ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ. ಹೀಗಾಗಿ ಇದು ಕಾನೂನಾತ್ಮಕವಾಗಿ ಸರಿಯಾದ ಪ್ರಕ್ರಿಯೆ ಎಲ್ಲ ,ಏಕ ಪಕ್ಷಿಯವಾದ ಅಂತಹ ಪ್ರಕ್ರಿಯೆ .ಇದನ್ನ ನಾವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡ್ತೀವಿ ಅಂತ ವಕೀಲ ಗೋಪಾಲ್ ಗುಡುಗಿದ್ದಾರೆ.