
ಗದಗ: ಪಾಪಿ ಪುತ್ರನೊಬ್ಬ ಬುದ್ಧಿ ಹೇಳಿದ್ದಕ್ಕೆ ಮಲಗಿದಲ್ಲೇ ಹೆತ್ತ ತಾಯಿಯನ್ನು ಕೊಂದಿರುವ (Murder Case) ಘಟನೆ ಗದಗ ನಗರದ ದಾಸರ ಓಣಿಯಲ್ಲಿ ಜರುಗಿದೆ. ಶಾರದಮ್ಮ ಅಗಡಿ (85) ಕೊಲೆಯಾದ ತಾಯಿಯಾಗಿದ್ದು, ಪುತ್ರ ಸಿದ್ಧಲಿಂಗ ಅಗಡಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ನಿನ್ನೆ ಪಕ್ಕದ ಮನೆಯವರ ಜತೆ ಸಿದ್ಧಲಿಂಗ ಅಗಡಿ ಜಗಳ ಮಾಡಿಕೊಂಡಿದ್ದ.ಈ ವೇಳೆ ನನ್ನ ಮಗನ ತಲೆ ಸರಿಯಿಲ್ಲ ಬಿಟ್ಟು ಬಿಡಿ ಎಂದು ತಾಯಿ ಬೇಡಿಕೊಂಡಿದ್ದರು.ಇನ್ನು ತಾಯಿಯನ್ನು ಕೊಂದು ಸಹೋದರಿಯರಿಗೆ ಫೋನ್ ಮಾಡಿದ ಪಾಪಿ ಪುತ್ರ, ತಾಯಿ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಮಾನಸಿಕ ಅಸ್ವಸ್ಥ ಸಹೋದರನ ಮಾತು ನಂಬದ ಅಕ್ಕಂದಿರು, ಬಳಿಕ ಪೊಲೀಸರು ಮಾಹಿತಿ ನೀಡಿದ ಬಳಿಕ ಓಡೋಡಿ ಬಂದಿದ್ದಾರೆ.ಘಟನಾ ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಈ ಘಟನೆಯು ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.






