• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೌನ ಮುರಿದು ಟೀಕಾಕಾರರಿಗೆ ಅಸ್ತ್ರ ಆದ್ರಾ ನರೇಂದ್ರ ಮೋದಿ..

Krishna Mani by Krishna Mani
June 9, 2024
in Top Story, ರಾಜಕೀಯ, ವಿದೇಶ
0
ಮೌನ ಮುರಿದು ಟೀಕಾಕಾರರಿಗೆ ಅಸ್ತ್ರ ಆದ್ರಾ ನರೇಂದ್ರ ಮೋದಿ..
Share on WhatsAppShare on FacebookShare on Telegram

ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗಿ ಪದೋನ್ನತಿ ಪಡೆದುಕೊಂಡರು. ಅಂದಿನಿಂದ ಇದೀಗ ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಕಳೆದ ಎರಡು ಬಾರಿ ಬಿಜೆಪಿ ಪಕ್ಷದಿಂದ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ಈ ಬಾರಿ ಅಧಿಕೃತವಾಗಿ ಎನ್‌ಡಿಎ ಮೈತ್ರಿಕೂಟದ ಪ್ರಧಾನಿಯಾಗುತ್ತಿದ್ದಾರೆ. ಆದರೆ ಇಳೆದ ಎರಡೂ ಅವಧಿಯಲ್ಲಿ ಮೌನವ್ರತ ಮಾಡಿದ್ದ ಪ್ರಧಾನಿ ಮೋದಿ, ಮಾಧ್ಯಮಗಳಿಂದಲೇ ಅಂತರ ಕಾಯ್ದುಕೊಂಡಿದ್ದರು. ಇಲ್ಲೀವರೆಗೂ ಒಮ್ಮೆಯೂ ಮಾಧ್ಯಮಗೋಷ್ಠಿ ನಡೆಸದ ಪ್ರಧಾನಿ ಮೋದಿ, ಈ ಬಾರಿಯ ಚುನಾವಣೆ ನಡೆಯುವಾಗ ಮಾಧ್ಯಮಗಳ ಜೊತೆಗೆ ಮಾತನಾಡಿ ಒಂದಿಷ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಮತ್ತೆ ಎನ್‌ಡಿಎ ನಾಯಕನಾಗಿ ಆಯ್ಕೆಯಾದ ಹೊಸತರಲ್ಲೇ ಹಾಸ್ಯಾಸ್ಪದಕ್ಕೆ ಒಳಗಾಗಿದ್ದಾರೆ.

ADVERTISEMENT

ಎನ್‌ಡಿಎ ಮೈತ್ರಿಕೂಟದಲ್ಲಿ ಭಾಗಿಯಾಗಿರುವ ಜೆಡಿಯು ಪಕ್ಷದ ನಿತೀಶ್‌ ಕುಮಾರ್‌ ಹಾಗು ಟಿಡಿಪಿ ಪಕ್ಷದ ಚಂದ್ರಬಾಬು ನಾಯ್ಡು, ಅಧಿಕಾರ ಸಿಗುವ ಕಡೆಗೆ ವಲಸೆ ಹೋಗುವ ನಾಯಕರು ಅನ್ನೋದು ಈ ಹಿಂದಿನ ಘಟನೆಗಳಿಂದ ಸಾಬೀತಾಗಿದೆ. ಇದೀಗ ಇಬ್ಬರು ನಾಯಕರು ಹಲವಾರು ಕಂಡೀಷನ್ಸ್‌ ಹಾಕಿದ್ದಾರೆ ಎನ್ನುವ ಚರ್ಚೆಗಳ ನಡುವೆ, ಭಾಷಣಕ್ಕೆ ಟೆಲಿಪ್ರಾಮ್ಟರ್​​ ಬಳಸುವಂತಿಲ್ಲ ಹಾಗು ವಾರಕ್ಕೊಮ್ಮೆ ಮಾಧ್ಯಮಗೋಷ್ಠಿ ಕರೆದು ಎಲ್ಲಾ ಮಾಹಿತಿಯನ್ನು ಮಾಧ್ಯಮಗಳ ಜೊತೆಗೆ ಹಂಚಿಕೊಳ್ಳಬೇಕು ಎನ್ನುವ ಜೋಕ್‌ಗಳು ವಾಟ್ಸ್‌ಆ್ಯಪ್‌ನಲ್ಲಿ WhatsApp ನಲ್ಲಿ ಹರಿದಾಡುತ್ತಿವೆ. ಈ ನಡುವೆ ಪ್ರಮಾಣ ವಚನಕ್ಕೆ ಹಕ್ಕು ಮಂಡಿಸಿ ಹೊರ ಬಂದ ಪ್ರಧಾನಿ ಭಾಷಣ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾದ್ದಾರೆ. ಅವಶ್ಯಕತೆ ಇಲ್ಲದ ಕಡೆ ಮಾತನಾಡಲು ಮುಂದಾಗಿ ಎಡವಟ್ಟು ಮಾಡಿಕೊಂಡಿದ್ದಾರೆ.

He can't even speak two sentences properly without help.
(There was no teleprompter in this speech)pic.twitter.com/IcFTGP3xXM

— Ravi Nair (@t_d_h_nair) June 7, 2024

NDA ಸರ್ಕಾರ ರಚನೆಗೆ ರಾಷ್ಟ್ರಪತಿ ಭವನದಲ್ಲಿ ಹಕ್ಕು ಮಂಡಿಸಿ ಹೊರಕ್ಕೆ ಬಂದ ಹಂಗಾಮಿ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಸಂಜೆ ಭಾಷಣ ಮಾಡಿದ್ದರು. ಈ ವೇಳೆ ಟೆಲಿಪ್ರಾಮ್ಟರ್​​ ಇಲ್ಲದೆ ಹಿಂದೆ ಮುಂದೆ ಮಾತನಾಡಲು ತಡವರಿಸಿದರು. ಒಂದೆರಡು ಮಾತನಾಡುತ್ತಿದ್ದಂತೆ ಮುಜುಗರಕ್ಕೆ ಒಳಗಾದ ನರೇಂದ್ರ ಮೋದಿ ಟೆಲಿಪ್ರಾಮ್ಟರ್​​ ಇಲ್ಲದೆ ಮಾತನಾಡಲು ಬರುವುದಿಲ್ಲ ಎನ್ನುವುದನ್ನು ಬಹಿರಂಗ ಮಾಡಿಕೊಂಡರು. ಇದು ಸಾಮಾಜಿಕ ಜಾಲತಾಣದಲ್ಲಿ ಟೀಕಾಕಾರರಿಗೆ ಅಸ್ತ್ರ ಎನ್ನುವಂತಾಗಿದೆ. ಮೂರನೇ ಬಾರಿಗೆ ಪ್ರಧಾನಿ ಆಗುತ್ತಿರುವ ನರೇಂದ್ರ ಮೋದಿ ಅವರನ್ನು ಜಾಲತಾಣದಲ್ಲಿ ಟೀಕಿಸುತ್ತ, ಮಾತನಾಡಲು ಬಾರದ ಪ್ರಧಾನಿ ಎಂಬಂತೆ ಬಿಂಬಿಸುವ ಕೆಲಸವನ್ನು ವಿರೋಧಿಗಳು ಮಾಡುತ್ತಿದ್ದಾರೆ.

ಪ್ರಧಾನಿ ಆಗಿ ಅಧಿಕಾರ ಹಿಡಿಯುತ್ತಿರುವ ನರೇಂದ್ರ ಮೋದಿಗೆ ಈ ಬಾರಿಯ ಅಧಿಕಾರ ಮುಳ್ಳಿನ ಹಾಸಿಗೆ ಎನ್ನುವುದು ಕಹಿಸತ್ಯ. ಆದರೆ ಈ ಬಾರಿ ಮಾಧ್ಯಮಗಳ ಎದುರು ಬರುವ ಮನಸ್ಸು ಮಾಡುತ್ತಾರಾ..? ಎನ್ನುವ ಕುತೂಹಲ ಹೆಚ್ಚಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಮಾಧ್ಯಮಗಳ ಎದುರು ಕಾಣಿಸಿಕೊಂಡಿದ್ದ ಹಂಗಾಮಿ ಪ್ರಧಾನಿ ಮೋದಿ, ಮತ್ತೆ ಮೌನಕ್ಕೆ ಜಾರುತ್ತಾರಾ..? ಅಥವಾ ಈಗ ಶುರು ಮಾಡಿರುವ ಮಾಧ್ಯಮ ಸಂವಾದವನ್ನು ಮುಂದುವರಿಸ್ತಾರಾ..? ಅನ್ನೋ ಬಗ್ಗೆಯೂ ಚರ್ಚೆಗಳು ಶುರುವಾಗಿವೆ.

Tags: BJPCongress Partyrahulgadnhiಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಒಂದು ವಾರಗಳ ಕಾಲ ಭರ್ಜರಿ ಮಳೆ; ರೆಡ್ ಅಲರ್ಟ್ ಘೋಷಣೆ

Next Post

ರಾಜ್ಯದಿಂದ ಈ ಇಬ್ಬರು ಸಂಸದರು ಕೇಂದ್ರದಲ್ಲಿ ಸಚಿವರಾಗೋದು ಕನ್ಫರ್ಮ್ ! 

Related Posts

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ
ರಾಜಕೀಯ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

by ಪ್ರತಿಧ್ವನಿ
April 25, 2026
0

ನವದೆಹಲಿ: ದೇಶದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ರಾಘವ ಚಡ್ಡಾ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಮಹತ್ವದ ರಾಜಕೀಯ...

Read moreDetails
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
Next Post
ರಾಜ್ಯದಿಂದ ಈ ಇಬ್ಬರು ಸಂಸದರು ಕೇಂದ್ರದಲ್ಲಿ ಸಚಿವರಾಗೋದು ಕನ್ಫರ್ಮ್ ! 

ರಾಜ್ಯದಿಂದ ಈ ಇಬ್ಬರು ಸಂಸದರು ಕೇಂದ್ರದಲ್ಲಿ ಸಚಿವರಾಗೋದು ಕನ್ಫರ್ಮ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada