ಗಂಗೆಯಲ್ಲಿ (River ganges) ಸ್ನಾನ ಮಾಡಿದ ಮಾತ್ರಕ್ಕೆ ಹೊಟ್ಟೆ ತುಂಬಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ (Mallikarjuna kharge) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ (Cm siddaramaiah) ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ನೀವು ಅವರನ್ನ ಕೇಳಿ,ಖರ್ಗೆ ಅವರನ್ನ ಕೇಳಿ..ನನ್ನ ಅಭಿಪ್ರಾಯದಲ್ಲಿ ಅದು ನಮ್ಮ ಸಂಪ್ರದಾಯ ಇದೆ.ಕುಂಭಮೇಳ ಸ್ನಾನ ಮಾಡೋದು, ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರ ಆಗುತ್ತೆ ಅಂತ ನಂಬಿಕೆ ಇದೆ ಎಂದಿದ್ದಾರೆ.
ಈಗ ನಾವೆಲ್ಲರೂ ಬಸವಣ್ಣ ಅನುಯಾಯಿಗಳು.ಪಾಪ ಪುಣ್ಯ ಎಲ್ಲ ಹೇಗೆ..?ಅಯ್ಯಾ ಎಂದರೇ ಸ್ವರ್ಗ, ಎಲವೋ ಎಂದರೆ ನರಕ.ಅದರ ಮೇಲೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ. ಆ ಮೂಲಕ ಜಾಣ್ಮೆಯ ಉತ್ತರ ನೀಡಿದ್ದಾರೆ.