ಗೊತ್ತಿದ್ದು ಗೊತ್ತಿದ್ದು ರೌಡಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಬೇರೆ ಸೈಲೆಂಟ್ ಸುನಿಲ್ ಒಬ್ಬ ಕುಖ್ಯಾತ ರೌಡಿ ಇಬ್ಬರು ಎಂಪಿಗಳು, ಬಿಜೆಪಿ ನಾಯಕರು ಅವನ ಜೊತೆ ಇದ್ದಾರೆ. ಸುನಿಲ್ ಒಬ್ಬ ಸರ್ಚ್ ವಾರೆಂಟ್ ನಲ್ಲಿ ಇರೋ ರೌಡಿ ಅಂತಹವನ ಜೊತೆ ವೇದಿಕೆ ಹಂಚಿಕೊಳ್ಳುವುದು ಸರಿನಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ ಅಂತಂದ್ರೆ ಎಷ್ಟು ಸರಿ ಬಿಜೆಪಿಯವರಿಗೆ ಅದೊಂದು ಅಂಟು ರೋಗ ಅಂಟಿದೆ. ಅದರಲ್ಲೂ ಬಸವರಾಜ ಬೊಮ್ಮಾಯಿಗೆ ಆ ರೋಗ ಜಾಸ್ತಿ ಹಿಂದಿನ ಅಧಿಕಾರದಲ್ಲಿ. ಕಾಂಗ್ರೆಸ್ಸಿನಲ್ಲಿ ಅಂತಾ ಎಲ್ಲದಕ್ಕೂ ಬೊಟ್ಟು ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.
ಮೊದಲು ನಿಮ್ಮ ತಪ್ಪುಗಳನ್ನ ಹೇಳ್ರಯ್ಯ ನೀವೇನು ಮಾಡಿದ್ರಿ, ನಿಮ್ಮ ತಪ್ಪೇನು ಅಂತಾ ಹೇಳಿ ನೀವು ಅನೈತಿಕವಾಗಿ ಅಧಿಕಾರಕ್ಕೆ ಬಂದಿದ್ದೀರಲ್ಲ ಏನ್ಮಾಡಿದ್ದೀರಿ ಹೇಳಬೇಕು ಅಲ್ವಾ. ರೌಡಿಗಳ ಜೊತೆ ವೇದಿಕೆ ಹಂಚಿಕೊಂಡು, ಕಾಂಗ್ರೆಸ್ಸಿಗರು ಇರಲಿಲ್ಲವ ಅಂದ್ರೆ ಹೇಗೆ ಎಂದು ಚಾಟಿ ಬೀಸಿದ್ದಾರೆ.
ರೌಡಿ ಶೀಟರ್ ಫೈಟರ್ ರವಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ ಹೆಸರಲ್ಲೇ ಅವನ ಬಗ್ಗೆ ಗೊತ್ತಾಗುತ್ತದೆ ಅಶಾಂತಿ ನಿರ್ಮಾಣ ಮಾಡಲು ಇಂತಹವರು ಬೇಕಲ್ಲ ಅವರಿಗೆ ಎಂದು ಛೇಡಿಸಿದ್ದಾರೆ.
ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದವರು ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ ಅಮಿತ್ ಶಾ ಎಲ್ಲೋಗಿದ್ರು ಏನು ಮಾವನ ಮನೆಗೆ ಹೋಗಿದ್ರ ಈ ದೇಶದ ಹೋಂ ಮಿನಿಸ್ಟರ್ ಗೆ 3 ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿತ್ತು. ಗಡಿಪಾರು ಮಾಡಿದ್ರು ಅವರನ್ನ ಅಂತಹವರೇ ಈ ದೇಶದ ಹೋಂ ಮಿನಿಸ್ಟರ್ ಆಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಿರಲಿಲ್ಲವೇ.
ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಆಗಿತ್ತು ಅಷ್ಟೇ ರೌಡಿಶೀಟರ್ ಅಲ್ಲ ಕೇಸ್ ಪ್ರೂವ್ ಆಗಿ ಶಿಕ್ಷೆ ಆಗಿದ್ರೆ ಓಕೆ. ಬಿಜೆಪಿಯವರದ್ದು ಮೊಂಡತನ, ಭಂಡತನ ಮಾನ ಮರ್ಯಾದೆ ಇಲ್ದೆ ಇರೋರಿಗೆ ಹಿಂಗೇ ಆಗೋದು ಎಂದು ಹರಿಹಾಯ್ದಿದ್ದಾರೆ.