ದಾವಣಗೆರೆ : ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ನಲ್ಲಿ ಡಿಕೆಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಪೈಪೋಟಿ ಏರ್ಪಟ್ಟಿರುವ ಬೆನ್ನಲ್ಲೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ. ದಾವಣಗೆರೆ ಚೆನ್ನಗಿರಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಸೋಲಲಿ ಅಂತಾ ಡಿಕೆಶಿ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಡಿಕೆ ಶಿವಕುಮಾರ್ ಹೋಮ – ಹವನ ನಡೆಸಿದ್ರು. ಈ ಹೋಮದಲ್ಲಿ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಸೋಲಲಿ ಎಂದು ಸಂಕಲ್ಪ ತೊಟ್ಟಿದ್ದರಂತೆ, ನನಗೆ ಇಂಟೆಲಿಜೆನ್ಸ್ನಿಂದ ಈ ಮಾಹಿತಿ ಬಂದಿದೆ ಎಂದು ಸಿಟಿ ರವಿ ಹೇಳಿದ್ದಾರೆ .
ಕಾಂಗ್ರೆಸ್ ಬಜರಂಗದಳ ಬ್ಯಾನ್ ಮಾಡುವ ಬಗ್ಗೆಯೂ ಮಾತನಾಡಿದ ಅವರು, ಬಿಜೆಪಿ ಬಜರಂಗಬಲಿಯನ್ನು ಆರಾಧಿಸಿದರೆ ಕಾಂಗ್ರೆಸ್ ತಾಲಿಬಾನ್ ಆರಾಧನೆ ಮಾಡುತ್ತೆ ಎಂದಿದ್ದಾರೆ.