ಟಿಪ್ಪು ಜಯಂತಿ (Tippu jayanti) ಮಾಡಿದ ಸಿದ್ದರಾಮಯ್ಯ (Siddaramaiah) ಇಂದು ಅವರೇ ಟಿಪ್ಪು ಸುಲ್ತಾನ್ ಆಗಿ ಬದಲಾವಣೆ ಆಗ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ (Shobha karandlaje)ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯು.ಟಿ ಖಾದರ್ (UT Khadar) ಅವರು ಸ್ಪೀಕರ್ ಆಗಿ ಮಾತನಾಡಲು ಕಾರಣವೇನು..? ಫಾಸಿಲ್ (Fazil) ಮನೆಯವರು ನಿರಪರಾಧಿಗಳು ಅಂತ ತೋರಿಸಲು ಹೋಗಿದ್ದೀರಾ..? ಫಾಸಿಲ್ ಬ್ರದರ್ ಸುಪಾರಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಆದ್ರೆ ಖಾದರ್, ಅಪರಾಧಿ ಹಿಡಿಯುವ ಮೊದಲೇ ಪಾಜಿಲ್ ಕುಟುಂಬವನ್ನು ಸೇಫ್ ಮಾಡುವ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಕೇಸ್ ನಲ್ಲಿ ಸಂಪೂರ್ಣವಾಗಿ ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರೌಡಿಶೀಟರ್ ಎಲ್ರೂ ಹಿಂದೂ ಸಂಘಟನೆ ಸೇರ್ತಿದ್ದಾರೆ ಅಂತ ದಿನೇಶ್ ಗುಂಡೂರಾವ್ ಹೇಳ್ತಾರೆ.ನಾನು ಹಿಂದೂ ಸಂಘಟನೆಯಿಂದ ಬಂದಿದ್ದೇನೆ. ಹಾಗಾದರೆ ನಿಮಗೆ ನಮ್ಮ ಮೇಲೆ ಕೇಸ್ ತಾಖತ್ ಇದೆಯಾ..? ಎಂದು ಸವಾಲು ಹಾಕಿದ್ದರೆ.