ಬೆಂಗಳೂರು / ದೆಹಲಿ : ರಾಜ್ಯದ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಡಿ.ಕೆಶಿವಕುಮಾರ್ ಮನವೊಲಿಸುವಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಶಸ್ವಿಯಾಗಿದ್ದು ಸಿದ್ದರಾಮಯ್ಯ ಸಿಎಂ ಆಗಿ ಹಾಗೂ ಡಿಕೆಶಿವಕುಮಾರ್ ಉಪ ಮುಖ್ಯಮಂತ್ರಿ ಕುರ್ಚಿ ಏರೋದು ಪಕ್ಕಾ ಆಗಿದೆ.
ನಿ ಕೊಡೆ ನಾ ಬಿಡೆ ಎಂಬ ಸ್ಥಿತಿಯಲ್ಲಿದ್ದ ಸಿದ್ದರಾಮಯ್ಯ ಹಾಗೂ ಡಿಕೆಶಿ ಸಿಎಂ ಆಯ್ಕೆ ಕಸರತ್ತನ್ನು ತಡರಾತ್ರಿ ಕಾಂಗ್ರೆಸ್ ಹೈಕಮಾಂಡ್ ಬಗೆಹರಿಸಿದೆ. ಮೇ 20 ರಂದು ಸಿದ್ದರಾಮಯ್ಯ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಿದ್ದರಾಮಯ್ಯ ಸಂಪೂರ್ಣ ಐದು ವರ್ಷಗಳವರೆಗೆ ರಾಜ್ಯದ ಸಿಎಂ ಆಗಿ ಇರ್ತಾರೋ ಅಥವಾ 30 ತಿಂಗಳ ಅಧಿಕಾರಾವಧಿಯ ಬಳಿಕ ಡಿಕೆಶಿ ಸಿಎಂ ಕುರ್ಚಿ ಬಿಟ್ಟುಕೊಡ್ತಾರೋ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ. ಯಾವೆಲ್ಲ ಷರತ್ತುಗಳ ಮೂಲಕ ಡಿಕೆಶಿ ಸಿಎಂ ಕುರ್ಚಿ ಬಿಟ್ಟುಕೊಟ್ಟರು ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ದೊರೆಯಬೇಕಿದೆ.
