• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

2014ರಿಂದ ಅದಾನಿ ಅಕ್ರಮದ ಬಗ್ಗೆ ಸೆಬಿಗೆ ತಿಳಿದಿತ್ತು: ರಾಹುಲ್‌ ಗಾಂಧಿ

ಪ್ರತಿಧ್ವನಿ by ಪ್ರತಿಧ್ವನಿ
September 1, 2023
in ಇದೀಗ, ದೇಶ, ರಾಜಕೀಯ
0
ರಾಹುಲ್‌ ಗಾಂಧಿ

ರಾಹುಲ್‌ ಗಾಂಧಿ

Share on WhatsAppShare on FacebookShare on Telegram

ಗೌತಮ್‌ ಅದಾನಿ ಕಂಪನಿಯನ್ನು ಆರೋಪ ಮುಕ್ತಗೊಳಿಸಿದ್ದ ಭಾರತದ ಭದ್ರತೆಗಳು ಮತ್ತು ವಿನಿಮಯ ಮಂಡಳಿ (ಸೆಬಿ) ಅಧಿಕಾರಿಯೊಬ್ಬರು ತಿಳಿದಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ADVERTISEMENT

ಗುರುವಾರ (ಆಗಸ್ಟ್ 31) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅದಾನಿ ಕಂಪನಿಗಳನ್ನು ಆರೋಪ ಮುಕ್ತಗೊಳಿಸಿದ್ದ ಸೆಬಿಯ ಅಧಿಕಾರಿಯೊಬ್ಬರು ಈಗ, ಕಂಪನಿ ಒಡೆತನದ ಸುದ್ದಿ ಚಾನೆಲ್ವೊಂದರ ನಿರ್ದೇಶಕರಾಗಿದ್ದಾರೆ. ಅದಾನಿ ಸಮೂಹ ವಿರುದ್ಧ ತನಿಖೆ ನಡೆಸಿದ್ದ ವ್ಯಕ್ತಿಯೇ ಈಗ ಆ ಕಂಪನಿಯ ಉದ್ಯೋಗಿ. ಪರಿಸ್ಥಿತಿ ಹೀಗಿರುವಾಗ, ತನಿಖೆ ಯಾವ ರೀತಿ ಇರಲಿದೆ ಎಂಬುದನ್ನು ಊಹಿಸಬಹುದು” ಎಂದು ರಾಹುಲ್ ಟೀಕಿಸಿದ್ದಾರೆ.

ಅದಾನಿ ಸಮೂಹವು ಬದಲಿ ಕಂಪನಿಗಳ ಮೂಲಕ ಹಲವು ವರ್ಷಗಳ ಕಾಲ ತನ್ನದೇ ಷೇರುಗಳಲ್ಲಿ ಹೂಡಿಕೆ ಮಾಡಿತ್ತು ಎಂಬ ಆರೋಪಗಳ ಕುರಿತು ಜಂಟಿ ಸದನ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸುವಂತೆ ರಾಹುಲ್ ಗಾಂಧಿ ಗುರುವಾರ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ತೆರಳಿದ್ದ ರಾಹುಲ್, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅದಾನಿ ಸಮೂಹ ಕುರಿತ ಯಾವುದೇ ತನಿಖೆಯನ್ನು ಪ್ರಧಾನಿ ನರೇಂದ್ರ ಮೋದಿ ತಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ಅದಾನಿ ಸಮೂಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಉದ್ಯಮಿ ಗೌತಮ್ ಅದಾನಿ ಅವರೊಂದಿಗಿನ ಪ್ರಧಾನಿ ನಂಟಿನ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿರುವ ರಾಹುಲ್, ‘ಅದಾನಿ ಹೆಸರನ್ನು ಪ್ರಸ್ತಾಪಿಸಿದ ಕೂಡಲೇ ಪ್ರಧಾನಿ ಅವರಿಗೆ ಮುಜುಗರವಾಗುತ್ತದೆ’ ಎಂದು ಛೇಡಿಸಿದರು.

`ಭಾರತ ಮತ್ತು ಮೋದಿ ಅವರ ಖ್ಯಾತಿಗೆ ಈಗ ಅಪಾಯ ಎದುರಾಗಿದೆ. ಇನ್ನೊಂದೆಡೆ, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಿ- 20 ನಾಯಕರು ಭಾರತಕ್ಕೆ ಬರುತ್ತಿದ್ದಾರೆ. ಹಾಗಾಗಿ, ಶೃಂಗಸಭೆ ಆರಂಭವಾಗುವುದಕ್ಕೂ ಮುನ್ನವೇ ಅದಾನಿ ಕಂಪನಿ ಕುರಿತು ಎದ್ದಿರುವ ಸಂಶಯಗಳನ್ನು ಮೋದಿ ನಿವಾರಿಸಬೇಕು’ ಎಂದು ರಾಹುಲ್ ಒತ್ತಾಯಿಸಿದರು.

‘ಕೋಟ್ಯಂತರ ರೂಪಾಯಿ ಭಾರತದಿಂದ ಹೊರಗೆ ಹೋಗಿ, ಮತ್ತೆ ದೇಶದೊಳಗೆ ಹರಿದು ಬಂದಿದೆ. ಈ ರೀತಿ ಬಂದ ಹಣವನ್ನು ದೇಶದ ಮೂಲಸೌಕರ್ಯಗಳ ಖರೀದಿಗೆ ಅದಾನಿ ಸಮೂಹ ಬಳಸಿಕೊಂಡಿರುವುದಾಗಿ ವಿಶ್ವದ ಕೆಲ ಪ್ರಸಿದ್ಧ ವಿತ್ತ ಪತ್ರಿಕೆಗಳು ವರದಿ ಮಾಡಿವೆ’ ಎಂದು ರಾಹುಲ್ ಹೇಳಿದರು.

‘ಈ ಹಣ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ಎದುರಾಗಿದೆ. ಇದು ಅದಾನಿ ಅಥವಾ ಬೇರೆಯವರಿಗೆ ಸೇರಿದ ಹಣವೇ’ ಎಂದು ಪ್ರಶ್ನಿಸಿದರು.

`ಗೌತಮ್ ಅದಾನಿ ಅಣ್ಣ ವಿನೋದ್ ಅದಾನಿ, ನಾಸರ್ ಅಲಿ ಶಬನ್ ಅಪ್ಲಿ ಹಾಗೂ ಚೀನಿ ಪ್ರಜೆ ಚಾಂಗ್ ಚುಂಗ್-ಲಿಂಗ್ ಎಂಬುವವರು ಈ ಎಲ್ಲ ವ್ಯವಹಾರಗಳ ಸೂತ್ರಧಾರರಾಗಿದ್ದಾರೆ’ ಎಂದು ಆರೋಪಿಸಿದ ಅವರು, ‘ದೇಶದ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಪ್ರಜೆಗಳಿಗೆ ಏಕೆ ಅನುಮತಿ ನೀಡಲಾಯಿತು’ ಎಂದು ಪ್ರಶ್ನಿಸಿದರು.

‘ಕಂಪನಿಯ ಷೇರುಗಳಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲು ಪ್ರಧಾನಿಗೆ ಆಪ್ತರಾಗಿರುವ ಈ ವ್ಯಕ್ತಿಗೆ (ಗೌತಮ್ ಅದಾನಿ) ಮಾತ್ರ ಏಕೆ ಅವಕಾಶ ನೀಡಲಾಗುತ್ತಿದೆ? ಈ ಬಗ್ಗೆ ಯಾವುದೇ ತನಿಖೆಯಾಗುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದ ಅವರು, ‘ಈ ಎಲ್ಲ ಆರೋಪಗಳ ಕುರಿತು ತನಿಖೆಗೆ ಜಂಟಿ ಸದನ ಸಮಿತಿಯನ್ನೇ ರಚಿಸಬೇಕು’ ಎಂದು ಆಗ್ರಹಿಸಿದರು.

‘ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಿ-20 ನಾಯಕರು ಭಾರತಕ್ಕೆ ಬಂದಿಳಿಯಲಿದ್ದಾರೆ. ಅದಾನಿ ಕಂಪನಿಯ ವಿಶೇಷತೆ ಹಾಗೂ ಅದಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿರುವ ಕುರಿತು ಜಿ-20 ನಾಯಕರು ಪ್ರಶ್ನಿಸಬಹುದು. ಹೀಗಾಗಿ, ಅದಾನಿ

ಕಂಪನಿ ವಿರುದ್ಧ ತನಿಖೆಗೆ ಪ್ರಧಾನಿ ಒಲವು ಹೊಂದಿಲ್ಲ’ ಎಂದು ರಾಹುಲ್ ಆರೋಪಿಸಿದರು.

`ಭಾರತದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳು ಸಿಗುತ್ತಿಲ್ಲ. ವಿಮಾನ ನಿಲ್ದಾಣದಿಂದ ಹಿಡಿದು ಸಿಮೆಂಟ್ ಕಾರ್ಖಾನೆಗಳ ವರೆಗೆ ಅದಾನಿ ಏನನ್ನಾದರೂ ಖರೀದಿಸಬಹುದಾಗಿದೆ’ ಎಂದೂ ಟೀಕಿಸಿದರು.

Tags: Goutam AdaniRahul GandhiSEBIಗೌತಮ್‌ ಅದಾನಿರಾಹುಲ್‌ ಗಾಂಧಿ
Previous Post

ಆದಿತ್ಯ-ಎಲ್‌1 ಉಡಾವಣೆ | ಯಶಸ್ಸಿಗೆ ಚೆಂಗಾಲಮ್ಮನಿಗೆ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಪೂಜೆ

Next Post

10 ವರ್ಷಗಳ ನಂತರ ಮತ್ತೆ ನಿರ್ದೇಶನದತ್ತ ಕಿಚ್ಚ ..!

Related Posts

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..
ರಾಜಕೀಯ

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

by ಪ್ರತಿಧ್ವನಿ
May 27, 2026
0

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇದೀಗ ಅಂತಿಮ ಹಂತ ತಲುಪಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಅಧಿಕಾರ ಹಂಚಿಕೆ ಸೂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ...

Read moreDetails
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
Next Post
sudeep

10 ವರ್ಷಗಳ ನಂತರ ಮತ್ತೆ ನಿರ್ದೇಶನದತ್ತ ಕಿಚ್ಚ ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada