ಬೆಳಗಾವಿ ತಹಶಿಲ್ದಾರ ಕಚೇಯಲ್ಲೇ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ತಹಶೀಲ್ದಾರ್ ಕಚೇರಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಬೆಳಗಾವಿ ನಗರದ ರಿಸಾಲ್ದಾರ ಗಲ್ಲಿಯಲ್ಲಿಯುವ ತಹಶಿಲ್ದಾರ ಕಚೇರಿಯಲ್ಲಿ ನೌಕರ ರುದ್ರಣ್ಣ ಎಡವಣ್ಣವರ ( 35 ) ಆತ್ಮಹತ್ಯೆಗೆ ಶರಣಾಗಿದ್ದು, ಸೋಮವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸೋಮವಾರ ತಡರಾತ್ರಿ ಯಾರು ಇಲ್ಲದ ವೇಳೆ ಹತ್ತು ಗಂಟೆಗೆ ಕಚೇರಿಗೆ ಬಂದಿರುವ ನೌಕರ, ಕೆಲಸ ಇದೆ ಎಂದು ಕಚೇರಿ ಒಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಕುರಿತು ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ.

ಹೀಗೆ SDA ರುದ್ರಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ಬೆಳಗಾವಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಯ ವಾಟ್ಸಾಪ್ ಗ್ರೂಪ್ ನಲ್ಲಿ ಮೆಸೇಜ್ ಮಾಡಿದ್ದು, ನನ್ನ ಸಾವಿಗೆ ಸೋಮು, ತಹಶೀಲ್ದಾರ್ ಬಸವರಾಜ ನಾಗರಾಳ್ ಹಾಗೂ ಅಶೋಕ್ ಹೆಬ್ಬಾಳಿಗೇರ್ ಕಾರಣ. ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದ್ದು, ನೀವೆಲ್ಲ ಒಂದಾಗಿ ಹೋರಾಟ ಮಾಡಿ ಎಂದು ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂದೇಶದಲ್ಲಿ ಉಲ್ಲೇಖವಾಗಿರುವಂತೆ, ಈ ಸೋಮು ಎಂಬಾತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಎಂದು ತಿಳಿದು ಬಂದಿದ್ದು, ವರ್ಗಾವಣೆಯ ವಿಚಾರಕ್ಕೆ ಮನನ್ನೊಂದು ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯಗಳು ಸೃಷ್ಟಿಯಾಗಿವೆ.