ಬೆಂಗಳೂರು ಉತ್ತರ(Bangalore north) ಕ್ಷೇತ್ರದ ಟಿಕೆಟ್ (Ticket) ಕೈತಪ್ಪಿದ ಹಿನ್ನಲೆ ಅಸಮಾಧಾನಗೊಂಡಿರೋ ಬಿಜೆಪಿ ಹಿರಿಯ ನಾಯಕ (bjp leader ) ಸದಾನಂದಗೌಡ್ರು (sadananda gowda) ತಮ್ಮ ಹುಟ್ಟುಹಬ್ಬದ (Birthday) ದಿನದಂದೇ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಏಕಾಏಕಿ ಶೋಭಾ ಕರಂದ್ಲಾಜೆಯನ್ನ (shoba karandlaje) ಬಿಜೆಪಿ ಅಭ್ಯರ್ಥಿ ಮಾಡಿರೋದಕ್ಕೆ ಡಿವಿಎಸ್ (DVS) ಸಿಡಿಮಿಡಿಗೊಂಡಿದ್ದಾರೆ. ತಮ್ಮನ ವಿಶ್ವಾಸಕ್ಕೆ ತೆಗೆದುಕೊಳ್ಳದೆ , ಕೊನೆಪಕ್ಷ ತಮ್ಮ ಅಭಿಪ್ರಾಯವನ್ನೂ ಕೇಳದೆ ಈ ರೀತಿ ನಿರ್ಧಾರ ಕೈಗೊಂಡಿದ್ದಕ್ಕೆ ಸದಾನಂದಗೌಡ ಬೇಸರಗೊಂಡಿದ್ದಾರೆ. ಇದೇ ಸರಿಯಾದ ಟೈಮ್ ಅಂತ ಕಾಂಗ್ರೆಸ್ (congress) ಕೂಡ ಅವರಿಗೆ ಗಾಳ ಹಾಕಿದೆ.

ಸದಾನಂದಗೌಡರ(sadananda gowda ) ಅಸಮಾಧಾನವನ್ನ ಬಂಡವಾಳ ಮಾಡಿಕೊಳ್ಳಲು ಕಾಂಗ್ರೆಸ್(congress) ಪ್ರಯತ್ನ ಪಟ್ಟಿದ್ದು , ತಾವು ಇಚ್ಛಿಸುವುದಾದರೆ ನಮ್ಮ ಪಕ್ಷದಿಂದ ಸ್ಪರ್ಧೆ ಮಾಡಿ, ನೀವು ಕೇಳಿದ ಕ್ಷೇತ್ರದಿಂದ ಅವಕಾಶ ಕೊಡಲಾಗುವುದು. ಬೆಂಗಳೂರು ಉತ್ತರ(Bangalore north), ಮಂಗಳೂರು(Mangalore) , ಮೈಸೂರು(Mysuru) ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೂ ಓಕೆ ! ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬನ್ನಿ ಅಂತ ಶಾಸಕ ಅಶೋಕ್ ರೈ (Ashok rai) ಮೂಲಕ ಡಿಸಿಎಂ ಡಿಕೆಶಿ ಸದಾನಂದಗೌಡರಿಗೆ ಓಪನ್ ಆಫರ್ ಕೊಟ್ಟಿದ್ದಾರಂತೆ.

ಈ ಬಗ್ಗೆ ಸ್ವತಃ ತಾವೇ ಸುಳಿವು ಕೊಟ್ಟಿರುವ ಸದಾನಂದಗೌಡರು , ಶಿಸ್ತಿನ ಪಕ್ಷ ಅಂತ ಹೇಳಿಕೊಳ್ಳುವ ಬಿಜೆಪಿಯಲ್ಲಿ (bjp) ಈಗ ಯಾವ ಶಿಸ್ತು ಉಳಿದಿಲ್ಲ. ವಯಕ್ತಿಕ ಹಿತಾಸಕ್ತಿಯ ಕಾರಣ ಟಿಕೆಟ್ (ticket) ತಪ್ಪಿಸಿದ್ದು ನಾನಗೆ ಬೇಸರ ತರಿಸಿದೆ. ಕಾಂಗ್ರೆಸ್ ನಾಯಕರು (congress leaders) ನನ್ನನ್ನು ಸಂಪರ್ಕಿಸಿರೋದು ಸತ್ಯ. ಜೊತೆಗೆ ಬಿಜೆಪಿ (bjp leaders) ಪ್ರಮುಖರೂ ಕೂಡ ನನ್ನೊಟ್ಟಿಗೆ ಮಾತನಾಡಿದ್ದಾರೆ. ಆದ್ರೆ ನನ್ನ ನಿರ್ಧಾರವನ್ನ ನಾಳೆ ಸುದ್ದಿಗೋಷ್ಠಿಯಲ್ಲಿ (press meet )ತಿಳಿಸುತ್ತೇನೆ ಎಂದು ಹೇಳೋಮೂಲಕ ಕುತೂಹಲ ಕಾಯ್ದುಕೊಂಡಿದ್ದಾರೆ.