ರಾಜ್ಯದಲ್ಲಿ ಅನಿಷ್ಠ ಅಸ್ಪೃಶ್ಯತೆ (Untouchability) ಪದ್ಧತಿ ಜಾರಿಯಲ್ಲಿರುವಂತೆ ಭಾಸವಾಗುವ ಘಟನೆಯೊಂದು ನಡೆದಿದೆ. ಪರಿಶಿಷ್ಟ ಜಾತಿ (Sc) ಜನರಿಗೆ ಕ್ಷೌರ ಮಾಡಲು ಕ್ಷೌರಿಕ ನಿರಾಕರಿಸಿದ ಘಟನೆ ಚಿತ್ರದುರ್ಗದ (Chitradurga) ಚಳ್ಳಕೆರೆ ತಾಲ್ಲೂಕು ಕಾಲುವೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಕಟಿಂಗ್ ಶಾಪ್ ಮಾಲೀಕ ಹೇಳಿರುವಂತೆ, ಈ ಗ್ರಾಮದ ಹಿರಿಯರು, ಪರಿಶಿಷ್ಟ ಜಾತಿಯ ಜನರಿಗೆ ಕ್ಷೌರ ಮಾಡೋಡಿ ಅಂದಿದ್ದಾರೆ. ಹೀಗಾಗಿ ನಾವು ಮಾಡಲ್ಲ ಎಂದಿದ್ದಾನೆ. ಇದ್ರಿಂದ ಸಿಟ್ಟಿಗೆದ್ದ ಜನರು ಸಾಮಾಜಿಕ ಬಹಿಷ್ಕಾರ ಕುರಿತು ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿಯಿಂದ ತಹಶೀಲ್ದಾರ ರೆಹಮಾನ್ ಪಾಷಾಗೆ ಮಾಡಿದ್ದಾರೆ.
ಈ ರೀತಿ ದೂರು ನೀಡಿದ್ರೂ ಕೂಡ ಈ ಬಗ್ಗೆ ತಾಲ್ಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಪರಿಶಿಷ್ಟ ಜಾತಿ ಜನರಿಗೆ ಕ್ಷೌರಕ್ಕೆ ನಿರಾಕರಿಸಿದ ವೀಡಿಯೋ ಇಂಟರ್ನೆಟ್ನಲ್ಲಿ ಭಾರೀ ವೈರಲ್ ಆಗಿದೆ.