• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನೋಡುಗರನ್ನು ಸೆಳೆಯುತ್ತಿದೆ ಗ್ರಾಮೀಣ ಸೊಗಡಿನ ಮ್ಯೂಸಿಯಂ ; ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ನೂತನ ಪರಿಕಲ್ಪನೆ

ನೋಡುಗರನ್ನು ಸೆಳೆಯುತ್ತಿದೆ ಗ್ರಾಮೀಣ ಸೊಗಡಿನ ಮ್ಯೂಸಿಯಂ ; ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ನೂತನ ಪರಿಕಲ್ಪನೆ

Any Mind by Any Mind
December 12, 2021
in ಕರ್ನಾಟಕ
0
Share on WhatsAppShare on FacebookShare on Telegram

ಅನೇಕರಿಗೆ ಪುರಾತನ ವಸ್ತುಗಳು ಅಂದರೆ ಅದು ಎಂದೆಂದಿಗೂ ಕುತೂಹಲದ ಗೂಡು. ಕೆಲವರ ಪಾಲಿಗೆ ಅವು ಎಂದಿಗೂ ನಿರ್ಜೀವ ಅಲ್ಲ. ನಿಜಕ್ಕೂ ಅವುಗಳು ಪ್ರೀತಿಯ ಸೆಲೆಗಳಾಗಿವೆ. ಅದರ ಮೇಲೆ ಅದೇನೋ ವ್ಯಾಮೋಹ. ಈಗಲೂ ಬಹಳಷ್ಟು ಗ್ರಾಮೀಣ ಭಾಗಗಳಲ್ಲಿ ಪುರಾತನ ವಸ್ತುಗಳ ಬಳಕೆಯಾಗುತ್ತಿವೆ. ಅವುಗಳನ್ನು ಒಟ್ಟು ಗೂಡಿಸಿ ಪ್ರದರ್ಶನಕ್ಕೀಟ್ಟಿದ್ದಾರೆ ವಿದ್ಯಾರ್ಥಿಗಳು.

ADVERTISEMENT

ಹೌದು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಇತ್ತೀಚಗೆ ಶಿವಮೊಗ್ಗದ ದೊಡ್ಡಮತ್ಲಿ, ಆಡಿನಕೊಟ್ಟಿಗೆ, ರೇಚಿಕೊಪ್ಪ ಮತ್ತು ಕೆರೆಹಳ್ಳಿಗಳಲ್ಲಿ ಎನ್ಎಸ್ಎಸ್ ಶಿಬಿರ ನಡೆಯಿತು. ಈ ವೇಳೆ ವಿದ್ಯಾರ್ಥಿಗಳು ಗ್ರಾಮದ ಮನೆ ಮನೆಗೆ ತೆರಳಿ ಪುರಾತನ ವಸ್ತುಗಳನ್ನು ಸಂಗ್ರಹಿಸಿ ವಿನೂತನ ವಸ್ತುಸಂಗ್ರಹಾಲಯ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಇದೀಗ ಗ್ರಾಮೀಣ ಭಾಗದ ಜನರನ್ನು ಈ ಸಂಗ್ರಾಲಯ ಕೈ ಬೀಸಿ ಕರೆಯುತ್ತಿದ್ದು, ವಿದ್ಯಾರ್ಥಿಗಳು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇದನ್ನು ನೋಡುತ್ತಿದ್ದರೆ ಹಬ್ಬ, ಹರಿದಿನಗಳು ನೆನಪಿಗೆ ಬರುತ್ತವೆ. ತಾತ ಮುತ್ತಾರ ನೆನಪಿನ ಜೊತೆಗೆ ಆ ದಿನಗಳಲ್ಲಿ ನಡೆಯುತ್ತಿರುವ ಆಚರಣೆ, ದಿನಂಪ್ರತಿ ಅಡುಗೆ ತಯಾರಿಸಲು ಉಪಯೋಗಿಸಿದ ಪಾತ್ರೆ ಪಗಡೆಗಳ ನೆನಪು ಮರುಕಳಿಸುತ್ತದೆ.

ಶಿವಮೊಗ್ಗದ ಹಳ್ಳಿಯೊಂದರಲ್ಲಿ ನಡೆದ ಎನ್ ಎಸ್ ಎಸ್ ಕ್ಯಾಂಪ್ ನಲ್ಲಿ ಸಿಕ್ಕ ಹಳೆಯ ವಸ್ತುಗಳು ಈಗ ಒಂದು ಮ್ಯೂಸಿಯಂ ಆರಂಭಕ್ಕೆ ದಾರಿಯಾಗಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಜೊತೆಗೆ ಸಾರ್ವಜನಿಕರಿಗೂ ವೀಕ್ಷಣೆಯ ತಾಣವಾಗಿದೆ.

ಈ ಸಂಗ್ರಹಾಲಯವು ಪ್ರಾಚೀನ ಪರಂಪರೆಯ ಪುಟಗಳನ್ನು ನೆನಪಿಸುವಂತಿದ್ದು, ಭಾರೀ ಪ್ರಶಂಸೆಗೂ ಪಾತ್ರವಾಗಿದೆ. ಈ ವಿಶಿಷ್ಟ ಮ್ಯೂಸಿಯಂ ಗೆ ಸಹ್ರಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮೋಹನ ಚಂದ್ರಗುತ್ತಿ ರೂವಾರಿ ಎಂಬುದು ವಿಶೇಷ. ಇಲ್ಲಿ ಹಳೆ ಕಾಲದ ಫಿಲಿಪ್ಸ್ ರೇಡಿಯೋಗಳು, ಬೆತ್ತದ ಬುಟ್ಟಿಗಳು, ಮರದಿಂದ ನಿರ್ಮಿತ ಎತ್ತಿನ ಬಂಡಿ ಚಕ್ರಗಳು, ಮರದ ಹುಟ್ಟುಗಳು, ಹುಲ್ಲಿನ ಚಾಪೆ, ಹೊಸ್ತಿಲ ಬಾಗಿಲಿನ ಚೌಕಟ್ಟು, ಲ್ಯಾಟೀನುಗಳು ಹೀಗೆ ಮಲೆನಾಡಿನ ಸೊಗಡನ್ನು ನಮ್ಮ ಕಣ್ಮುಂದೆ ತರುವಂತಿದೆ.

ಏಳು ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಕೊನೆಯ ದಿನ ಪುರಾತನ ವಸ್ತುಗಳನ್ನು ಸಂಗ್ರಹಿಸಿ ತರಬೇಕು ಎಂದು ಸೂಚಿಸಲಾಗಿತ್ತು. ಶಿಬಿರದ ವಿದ್ಯಾರ್ಥಿಗಳು ಆಗಲೇ ಹಳ್ಳಿ ಒಡನಾಟವಿರುವುದರಿಂದ ಇಂತಹ ವಸ್ತುಗಳನ್ನು ಸಂಗ್ರಹಿಸಿ ತಂದರು. ಬಹಳ ಮುಖ್ಯವಾಗಿ ಈ ಹಳ್ಳಿಗಳಲ್ಲಿ ಜನರೇ ಪ್ರೀತಿಯಿಂದ ಈ ವಸ್ತುಗಳನ್ನ ತಲೆ ಮೇಲೆ ಹೊತ್ತುಕೊಂಡು ತಂದು ಶಿಬಿರಕ್ಕೆ ತಲುಪಿಸಿದ್ದರು. ಅವುಗಳನ್ನೆಲ್ಲಾ ಸಂಗ್ರಹಿಸಿ ಕಾಲೇಜಿನಲ್ಲಿ ಕ್ರಮಬದ್ಧವಾಗಿ ಜೋಡಿಸಿ ವೈಜ್ಞಾನಿಕವಾಗಿ ಅಣಿಗೊಳಿಸಲಾಗಿದೆ.

ಹಿಂದಿನ ಕಾಲದಲ್ಲಿ ಗೃಹ ಬಳಕೆಯಾಗುತ್ತಿದ್ದ ರೈತಾಪಿ ಹಿನ್ನೆಲೆಯ ಅಮೂಲ್ಯ ಪರಿಕರಗಳನ್ನು ಸಂಗ್ರಹಿಸುವ ಯೋಚನೆ ಹಳೆಯ ಸಂಪ್ರದಾಯಗಳನ್ನು ನೆನಪು ಮಾಡಿಕೊಳ್ಳಲು ಈ ಮ್ಯೂಸಿಯಂ ಮಾದರಿಯಾಗಿದೆ ಎಂದೇ ಹೇಳಬಹುದು.

Tags: ಗ್ರಾಮೀಣ ಸೊಗಡುಮ್ಯೂಸಿಯಂಶಿವಮೊಗ್ಗ ಜಿಲ್ಲೆಸಹ್ಯಾದ್ರಿ ಕಾಲೇಜು
Previous Post

ಮತಾಂತರ ಕಾಯ್ದೆ ಕುರಿತು ಕೊನೆಗೂ ಮೃದು ಧೋರಣೆ ತಾಳಿದ್ರಾ ಸಿಎಂ ಬೊಮ್ಮಾಯಿ?

Next Post

ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ದೇಶದ ಮೊದಲ ಆಶಾ ಕಾರ್ಯಕರ್ತೆ ಮಟಿಲ್ಡಾ ಕುಲು

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ದೇಶದ ಮೊದಲ ಆಶಾ ಕಾರ್ಯಕರ್ತೆ ಮಟಿಲ್ಡಾ ಕುಲು

ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ದೇಶದ ಮೊದಲ ಆಶಾ ಕಾರ್ಯಕರ್ತೆ ಮಟಿಲ್ಡಾ ಕುಲು

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada